<p>ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕ ಧನಂಜಯ ಹೆಗಡೆ ಹಾಡಿದ ಭಕ್ತಿ ಸಂಗೀತ ಕೇಳುಗರು ತಲೆದೂಗುವಂತಿತ್ತು.<br /> <br /> ಅವರು ಮೂಲತಃ ಶಾಸ್ತ್ರೀಯ ಸಂಗೀತಗಾರ. ಹೀಗಾಗಿ ಪ್ರಾರಂಭದಲ್ಲಿ ಸ್ವಲ್ಪ ಹೊತ್ತು ಋತುರಾಗ ಹಾಡಿದರು. ಸುಂದರ ಆಲಾಪ ಹಾಗೂ ಮುಖ ವಿಲಾಸ ಮಾಡಿ ಮಧ್ಯಲಯ ಝಪ್ತಾಳದಲ್ಲಿ ಘರಜತ ಹಾಗೂ ಧತ್ಲಯದಲ್ಲಿ ಬರಖಾ ಋತು ಚೀಜನ್ನು ಪ್ರಸ್ತುತಪಡಿಸಿದರು.<br /> <br /> ನಂತರ ಭಕ್ತಿ ಸಂಗೀತದಲ್ಲಿ ತಾವೇ ಸಂಯೋಜಿಸಿದ (ರಾಗ ಚಾರುಕೇಶಿ) ಪುರಂದರದಾಸರ ಭಜನೆ `ಹೂವ ತರುವರ ಮನೆಗೆ~ಯನ್ನು ಅತ್ಯಂತ ಅರ್ಪಣಾ ಮನೋಭಾವದಿಂದ ಹಾಡಿದರು. <br /> <br /> `ದಯ ಮಾಡೋ ರಂಗ~, `ಗುರು ರಾಯರ ಭಜನೆ~, `ಭೋ ಯತಿ ವರದೇಂದ್ರ~, ಮರಾಠಿ ಅಭಂಗ `ಸಂತ ಭಾರ ಪಂಡರಿಚ~, ಹಿಂದಿ ಭಜನ್ `ಚಲೋ ಮನ ಗಂಗಾ ಜಮುನಾ ತೀರ~, `ನೀನ್ಯಾಕೋ ನಿನ್ನ ಹಂಗ್ಯಾಕೋ~, `ಮುರಾರಿಯನೇ ಕೊಂಡಾಡೋ~ ಕಾರ್ಯಕ್ರಮದ ಸೊಬಗು ಹೆಚ್ಚಿಸಿತು.<br /> <br /> ದಾಸರ ಪದ ಹಾಡಿ ನಂತರ ಭೈರವಿ ರಾಗದಲ್ಲಿ `ಭೋಲೀ ಭೋಲೀ ರಾಧಿಕಾ~ ಹಾಡಿ ಮುಗಿಸಿದಾಗ ಶ್ರೋತ್ರಗಳೆಲ್ಲಾ ಭಕ್ತಿ ಭಾವ ಪರವಶರಾಗಿದ್ದರು. <br /> <br /> ಶಬ್ದಗಳ ಸ್ಪಷ್ಟ ಉಚ್ಚಾರ, ಸಾಹಿತ್ಯದ ಭಾವ ಪ್ರದರ್ಶನ, ವಿವಿಧ ಲಯವಿನ್ಯಾಸಗಳಲ್ಲಿ ಹಾಡಿದ ಈ ಕಾರ್ಯಕ್ರಮಕ್ಕೆ ಗುರುಮೂರ್ತಿ ವೈದ್ಯರವರ ತಬಲಾ ವಾದನ, ಅಶ್ವಿನ್ ವಾಲ್ವಾಲ್ಕರ್ ಅವರ ಹಾರ್ಮೋನಿಯಂ, ನಾಗೇಂದ್ರ ಭಟ್ ಅವರ ತಾಳವಾದ್ಯ ಅತ್ಯಂತ ಪರಿಪೂರ್ಣವಾಗಿ ಮಿಳಿತವಾಗಿತ್ತು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತೀಯ ವಿದ್ಯಾಭವನ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಸಂಗೀತ ಕಾರ್ಯಕ್ರಮದಲ್ಲಿ ಯುವ ಗಾಯಕ ಧನಂಜಯ ಹೆಗಡೆ ಹಾಡಿದ ಭಕ್ತಿ ಸಂಗೀತ ಕೇಳುಗರು ತಲೆದೂಗುವಂತಿತ್ತು.<br /> <br /> ಅವರು ಮೂಲತಃ ಶಾಸ್ತ್ರೀಯ ಸಂಗೀತಗಾರ. ಹೀಗಾಗಿ ಪ್ರಾರಂಭದಲ್ಲಿ ಸ್ವಲ್ಪ ಹೊತ್ತು ಋತುರಾಗ ಹಾಡಿದರು. ಸುಂದರ ಆಲಾಪ ಹಾಗೂ ಮುಖ ವಿಲಾಸ ಮಾಡಿ ಮಧ್ಯಲಯ ಝಪ್ತಾಳದಲ್ಲಿ ಘರಜತ ಹಾಗೂ ಧತ್ಲಯದಲ್ಲಿ ಬರಖಾ ಋತು ಚೀಜನ್ನು ಪ್ರಸ್ತುತಪಡಿಸಿದರು.<br /> <br /> ನಂತರ ಭಕ್ತಿ ಸಂಗೀತದಲ್ಲಿ ತಾವೇ ಸಂಯೋಜಿಸಿದ (ರಾಗ ಚಾರುಕೇಶಿ) ಪುರಂದರದಾಸರ ಭಜನೆ `ಹೂವ ತರುವರ ಮನೆಗೆ~ಯನ್ನು ಅತ್ಯಂತ ಅರ್ಪಣಾ ಮನೋಭಾವದಿಂದ ಹಾಡಿದರು. <br /> <br /> `ದಯ ಮಾಡೋ ರಂಗ~, `ಗುರು ರಾಯರ ಭಜನೆ~, `ಭೋ ಯತಿ ವರದೇಂದ್ರ~, ಮರಾಠಿ ಅಭಂಗ `ಸಂತ ಭಾರ ಪಂಡರಿಚ~, ಹಿಂದಿ ಭಜನ್ `ಚಲೋ ಮನ ಗಂಗಾ ಜಮುನಾ ತೀರ~, `ನೀನ್ಯಾಕೋ ನಿನ್ನ ಹಂಗ್ಯಾಕೋ~, `ಮುರಾರಿಯನೇ ಕೊಂಡಾಡೋ~ ಕಾರ್ಯಕ್ರಮದ ಸೊಬಗು ಹೆಚ್ಚಿಸಿತು.<br /> <br /> ದಾಸರ ಪದ ಹಾಡಿ ನಂತರ ಭೈರವಿ ರಾಗದಲ್ಲಿ `ಭೋಲೀ ಭೋಲೀ ರಾಧಿಕಾ~ ಹಾಡಿ ಮುಗಿಸಿದಾಗ ಶ್ರೋತ್ರಗಳೆಲ್ಲಾ ಭಕ್ತಿ ಭಾವ ಪರವಶರಾಗಿದ್ದರು. <br /> <br /> ಶಬ್ದಗಳ ಸ್ಪಷ್ಟ ಉಚ್ಚಾರ, ಸಾಹಿತ್ಯದ ಭಾವ ಪ್ರದರ್ಶನ, ವಿವಿಧ ಲಯವಿನ್ಯಾಸಗಳಲ್ಲಿ ಹಾಡಿದ ಈ ಕಾರ್ಯಕ್ರಮಕ್ಕೆ ಗುರುಮೂರ್ತಿ ವೈದ್ಯರವರ ತಬಲಾ ವಾದನ, ಅಶ್ವಿನ್ ವಾಲ್ವಾಲ್ಕರ್ ಅವರ ಹಾರ್ಮೋನಿಯಂ, ನಾಗೇಂದ್ರ ಭಟ್ ಅವರ ತಾಳವಾದ್ಯ ಅತ್ಯಂತ ಪರಿಪೂರ್ಣವಾಗಿ ಮಿಳಿತವಾಗಿತ್ತು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>