<p><strong>ಬೆಳ್ತಂಗಡಿ: </strong>ಯಾತ್ರಾಸ್ಥಳ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನದಲ್ಲಿ ವೇದ, ಮಂತ್ರಘೋಷದ ನಡುವೆ 41ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. 157 ಜೋಡಿ ವಧೂ-ವರರು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು. <br /> <br /> ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವಧುವಿಗೆ ಸೀರೆ, ರವಿಕೆ ಕಣ ಹಾಗೂ ವರನಿಗೆ ಧೋತಿ-ಶಾಲು ನೀಡಿದರು.ಸಂಜೆ ಗಂಟೆ 6ಕ್ಕೆ ವಧೂ-ವರರು ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಗಣ್ಯ ಅತಿಥಿಗಳೂ ಸೇರಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಿರ್ಮಿಸಲಾದ ಮದುವೆ ಮಂಟಪ ಪ್ರವೇಶಿಸಿದರು. <br /> <br /> ತ್ರಿಪುರ ರಾಜ್ಯಪಾಲ ಡಾ.ಡಿ.ವೈ. ಪಾಟೀಲ್, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಬಿರ್ಲಾ ಸಿಮೆಂಟ್ ಕಂಪನಿ ಅಧ್ಯಕ್ಷ ವಿನೋದ್ ಹಮೀರ್ವಾಸಿಯಾ, ಸಾತ್ನಾದ ವಿದ್ವಾಂಸ ನೀರಜ್ ಜೈನ್, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಶುಭ ಹಾರೈಸಿದರು. <br /> <br /> <strong>ವೃತ್ತಿವಾರು ವಧೂ-ವರರು: </strong>ಆರು ಮಂದಿ ಪತ್ರಕರ್ತರು, 63 ಮಂದಿ ಕೂಲಿ, 16 ಕೃಷಿ, 7 ವ್ಯಾಪಾರಸ್ಥರು, 21 ಚಾಲಕರು, 6 ಕಾರ್ಮಿಕರು ಹಾಗೂ ಇತರ ವೃತ್ತಿಯವರು ಸೇರಿ ಒಟ್ಟು 157 ಜೊತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ: </strong>ಯಾತ್ರಾಸ್ಥಳ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಗುರುವಾರ ಸಂಜೆ ಗಂಟೆ 6.40ರ ಗೋಧೂಳಿ ಲಗ್ನದಲ್ಲಿ ವೇದ, ಮಂತ್ರಘೋಷದ ನಡುವೆ 41ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ ನಡೆಯಿತು. 157 ಜೋಡಿ ವಧೂ-ವರರು ಗೃಹಸ್ಥಾಶ್ರಮಕ್ಕೆ ಪದಾರ್ಪಣೆ ಮಾಡಿದರು. <br /> <br /> ಗುರುವಾರ ಬೆಳಿಗ್ಗೆ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ವಧುವಿಗೆ ಸೀರೆ, ರವಿಕೆ ಕಣ ಹಾಗೂ ವರನಿಗೆ ಧೋತಿ-ಶಾಲು ನೀಡಿದರು.ಸಂಜೆ ಗಂಟೆ 6ಕ್ಕೆ ವಧೂ-ವರರು ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ, ಗಣ್ಯ ಅತಿಥಿಗಳೂ ಸೇರಿ ಅಮೃತವರ್ಷಿಣಿ ಸಭಾ ಭವನದಲ್ಲಿ ನಿರ್ಮಿಸಲಾದ ಮದುವೆ ಮಂಟಪ ಪ್ರವೇಶಿಸಿದರು. <br /> <br /> ತ್ರಿಪುರ ರಾಜ್ಯಪಾಲ ಡಾ.ಡಿ.ವೈ. ಪಾಟೀಲ್, ಇಂಧನ ಸಚಿವೆ ಶೋಭಾ ಕರಂದ್ಲಾಜೆ, ಬಿರ್ಲಾ ಸಿಮೆಂಟ್ ಕಂಪನಿ ಅಧ್ಯಕ್ಷ ವಿನೋದ್ ಹಮೀರ್ವಾಸಿಯಾ, ಸಾತ್ನಾದ ವಿದ್ವಾಂಸ ನೀರಜ್ ಜೈನ್, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನೂತನ ದಂಪತಿಗಳಿಗೆ ಶುಭ ಹಾರೈಸಿದರು. <br /> <br /> <strong>ವೃತ್ತಿವಾರು ವಧೂ-ವರರು: </strong>ಆರು ಮಂದಿ ಪತ್ರಕರ್ತರು, 63 ಮಂದಿ ಕೂಲಿ, 16 ಕೃಷಿ, 7 ವ್ಯಾಪಾರಸ್ಥರು, 21 ಚಾಲಕರು, 6 ಕಾರ್ಮಿಕರು ಹಾಗೂ ಇತರ ವೃತ್ತಿಯವರು ಸೇರಿ ಒಟ್ಟು 157 ಜೊತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>