<p><strong>ಧಾರವಾಡ: </strong>ಕೊಲೆ ಸೇರಿದಂತೆ ಹಲವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಪೊಲೀಸ್ ಸಿಬ್ಬಂದಿಯ ಕೈಕಚ್ಚಿ, ಹಲ್ಲೆ ನಡೆಸಿ ತನಗಾಗಿ ಕಾದುನಿಂತಿದ್ದ ಬೈಕ್ ಏರಿ ಪರಾರಿಯಾದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. <br /> <br /> ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮದ ಹನೀಫ್ ಬ್ಯಾರಿ ಪರಾರಿಯಾದ ಕೈದಿ. ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. 9 ವರ್ಷಗಳಿಂದ ಇದೇ ಜೈಲಿನಲ್ಲಿ ಇದ್ದ ಹನೀಫ್, ಗುರುವಾರ ಯಾವುದೋ ಅರ್ಜಿ ಕೊಡುವ ನೆಪಮಾಡಿ ಜೈಲು ಅಧೀಕ್ಷಕರ ಕೊಠಡಿಗೆ ಬಂದಿದ್ದಾನೆ. <br /> <br /> ಬೇರೆಯವರು ಹೊರ ಹೋಗಲು ಜೈಲಿನ ಬಾಗಿಲು ತೆರೆಯುವ ಸಂದರ್ಭವನ್ನು ಬಳಸಿಕೊಂಡು ಬಾಗಿಲ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ವಿಠ್ಠಲ ಕಿಲಾರಿ ಎಂಬ ಪೊಲೀಸ್ ಕಾನ್ಸ್ಟೇಬಲ್ ಕೈ ಕಚ್ಚಿದ್ದಲ್ಲದೆ ಅವರನ್ನು ಹೊರಗೆ ನಿಲ್ಲಿಸಿದ್ದ ಬೈಕ್ವರೆಗೂ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.<br /> <br /> ಈ ಕುರಿತು ಜೈಲಿನ ಅಧೀಕ್ಷಕ ಶಂಕರಾನಂದ ಹುಲ್ಲೂರ ಅವರು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: </strong>ಕೊಲೆ ಸೇರಿದಂತೆ ಹಲವು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಯೊಬ್ಬ ಪೊಲೀಸ್ ಸಿಬ್ಬಂದಿಯ ಕೈಕಚ್ಚಿ, ಹಲ್ಲೆ ನಡೆಸಿ ತನಗಾಗಿ ಕಾದುನಿಂತಿದ್ದ ಬೈಕ್ ಏರಿ ಪರಾರಿಯಾದ ಘಟನೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. <br /> <br /> ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೂಕಿನ ಕಮ್ಮರಡಿ ಗ್ರಾಮದ ಹನೀಫ್ ಬ್ಯಾರಿ ಪರಾರಿಯಾದ ಕೈದಿ. ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯವನ್ನು ಚುರುಕುಗೊಳಿಸಿದ್ದಾರೆ. 9 ವರ್ಷಗಳಿಂದ ಇದೇ ಜೈಲಿನಲ್ಲಿ ಇದ್ದ ಹನೀಫ್, ಗುರುವಾರ ಯಾವುದೋ ಅರ್ಜಿ ಕೊಡುವ ನೆಪಮಾಡಿ ಜೈಲು ಅಧೀಕ್ಷಕರ ಕೊಠಡಿಗೆ ಬಂದಿದ್ದಾನೆ. <br /> <br /> ಬೇರೆಯವರು ಹೊರ ಹೋಗಲು ಜೈಲಿನ ಬಾಗಿಲು ತೆರೆಯುವ ಸಂದರ್ಭವನ್ನು ಬಳಸಿಕೊಂಡು ಬಾಗಿಲ ಬಳಿ ಭದ್ರತೆಗೆ ನಿಯೋಜಿತರಾಗಿದ್ದ ವಿಠ್ಠಲ ಕಿಲಾರಿ ಎಂಬ ಪೊಲೀಸ್ ಕಾನ್ಸ್ಟೇಬಲ್ ಕೈ ಕಚ್ಚಿದ್ದಲ್ಲದೆ ಅವರನ್ನು ಹೊರಗೆ ನಿಲ್ಲಿಸಿದ್ದ ಬೈಕ್ವರೆಗೂ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.<br /> <br /> ಈ ಕುರಿತು ಜೈಲಿನ ಅಧೀಕ್ಷಕ ಶಂಕರಾನಂದ ಹುಲ್ಲೂರ ಅವರು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>