<p>ಮುಸ್ಲಿಂ ಸಂಘಟನೆಗಳ ರಾಜಕಾರಣ ಕುರಿತ ಮಹಮ್ಮದ್ ಮುಸ್ತಫಾ ಆತೂರು ಅವರ ಪತ್ರ (ಪ್ರ ವಾ ವಾ ಮಾರ್ಚ್ 15) ಎಲ್ಲರ ಕಣ್ಣು ತೆರೆಸುವಂತಿದೆ. ಧರ್ಮ ಮತ್ತು ರಾಜಕಾರಣ ಎರಡು ಬೇರೆ ಬೇರೆ ಕ್ಷೇತ್ರಗಳು.<br /> <br /> ಆದರೆ ಇಂದು ಧಾರ್ಮಿಕ ಮುಖಂಡರು ರಾಜಕಾರಣದಲ್ಲಿ ಮೂಗು ತೂರಿಸಿ ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಈ ಬೆಳವಣಿಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.<br /> <br /> ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಸಮಾಜ, ಧರ್ಮವನ್ನು ಬಳಸಿಕೊಳ್ಳುವುದು ಹೊಸದಲ್ಲ. ಆದರೆ ಈ ವಿಷಯದಲ್ಲಿ ಧರ್ಮಾಧಿಕಾರಿಗಳು ಎಚ್ಚರದಿಂದಿರಬೇಕು. ಆದರೆ ಅವರೇ ಸರ್ಕಾರ ಮತ್ತು ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈ ಬೆಳವಣಿಗೆ ಜನತಂತ್ರ ವ್ಯವಸ್ಥೆಗೆ ಮಾರಕ.<br /> <br /> ಧಾರ್ಮಿಕ ಮುಖಂಡರೇ ರಾಜಕೀಯ ಪಕ್ಷಗಳ ಪರವಾಗಿ ನಿಲ್ಲುವುದಾದರೆ ಜನರಿಗೆ ತಿಳುವಳಿಕೆ ಹೇಳುವವರು ಯಾರು? ಧಾರ್ಮಿಕ ಮುಖಂಡರಿಗೂ ಜನ ಸಾಮಾನ್ಯರಿಗೂ ವ್ಯೆತ್ಯಾಸ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಸ್ಲಿಂ ಸಂಘಟನೆಗಳ ರಾಜಕಾರಣ ಕುರಿತ ಮಹಮ್ಮದ್ ಮುಸ್ತಫಾ ಆತೂರು ಅವರ ಪತ್ರ (ಪ್ರ ವಾ ವಾ ಮಾರ್ಚ್ 15) ಎಲ್ಲರ ಕಣ್ಣು ತೆರೆಸುವಂತಿದೆ. ಧರ್ಮ ಮತ್ತು ರಾಜಕಾರಣ ಎರಡು ಬೇರೆ ಬೇರೆ ಕ್ಷೇತ್ರಗಳು.<br /> <br /> ಆದರೆ ಇಂದು ಧಾರ್ಮಿಕ ಮುಖಂಡರು ರಾಜಕಾರಣದಲ್ಲಿ ಮೂಗು ತೂರಿಸಿ ಇಡೀ ವ್ಯವಸ್ಥೆಯನ್ನು ಹಾಳುಗೆಡವುತ್ತಿದ್ದಾರೆ. ಈ ಬೆಳವಣಿಗೆ ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿಲ್ಲ.<br /> <br /> ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಸಮಾಜ, ಧರ್ಮವನ್ನು ಬಳಸಿಕೊಳ್ಳುವುದು ಹೊಸದಲ್ಲ. ಆದರೆ ಈ ವಿಷಯದಲ್ಲಿ ಧರ್ಮಾಧಿಕಾರಿಗಳು ಎಚ್ಚರದಿಂದಿರಬೇಕು. ಆದರೆ ಅವರೇ ಸರ್ಕಾರ ಮತ್ತು ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈ ಬೆಳವಣಿಗೆ ಜನತಂತ್ರ ವ್ಯವಸ್ಥೆಗೆ ಮಾರಕ.<br /> <br /> ಧಾರ್ಮಿಕ ಮುಖಂಡರೇ ರಾಜಕೀಯ ಪಕ್ಷಗಳ ಪರವಾಗಿ ನಿಲ್ಲುವುದಾದರೆ ಜನರಿಗೆ ತಿಳುವಳಿಕೆ ಹೇಳುವವರು ಯಾರು? ಧಾರ್ಮಿಕ ಮುಖಂಡರಿಗೂ ಜನ ಸಾಮಾನ್ಯರಿಗೂ ವ್ಯೆತ್ಯಾಸ ಉಳಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಧರ್ಮಗಳ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>