<p><strong>ರಾಣೆಬೆನ್ನೂರ:`</strong>ಆಧುನಿಕ ಮತ್ತು ತಾಂತ್ರಿಕ ಯುಗದಲ್ಲಿ ಧಾರ್ಮಿಕತೆ ಕುಸಿಯುತ್ತಿದ್ದು ಅಧರ್ಮ ಹೆಚ್ಚಾಗತೊಡಗಿದೆ. ಪ್ರತಿಯೊಬ್ಬರೂ ಧರ್ಮದಿಂದ ನಡೆದರೆ ಸಮಾಜ ಉತ್ತಮವಾಗಿ ನಡೆಯಬಲ್ಲದು. ಧಾರ್ಮಿಕ ಶಿಕ್ಷಣದಿಂದ ಉತ್ತಮ ಬದುಕು ಸಾಧ್ಯ~ ಎಂದು ಪಂ. ಪ್ರಭಂಜನಾಚಾರ್ಯ ಉಪಾಧ್ಯೆ ಹೇಳಿದರು. <br /> <br /> ನಗರದ ಕೋಟೆಯ ಉತ್ತರಾದಿಮಠದಲ್ಲಿ ಮಧ್ವ ಸೇವಾ ಸಂಘದ ಆಶ್ರಯದಲ್ಲಿ ಈಚೆಗೆ ಏಳು ದಿನಗಳ ಕಾಲ ಏರ್ಪಡಿಸಿದ್ದ ಧಾರ್ಮಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಂ.ಭೀಮಾಚಾರ್ಯ ಚಿಮ್ಮಲಗಿ ಮಾತನಾಡಿ, ಇಂದಿನ ಯುವ ಪೀಳಿಗೆ ಧಾರ್ಮಿಕ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ದೇಶಿ ಸಂಸ್ಕೃತಿ, ಧರ್ಮವನ್ನು ಅರಿತುಕೊಳ್ಳಬಹುದು ಎಂದರು.<br /> <br /> ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಸಂಧ್ಯಾವಂದನೆ, ದೇವ ಪೂಜಾಪದ್ಧತಿ, ದೇವರ, ಗುರುಗಳ ಸ್ತೋತ್ರಗಳನ್ನು ಕಲಿಸಲಾಗುವುದು ಎಂದು ಸಮಿತಿಯವರು ತಿಳಿಸಿದರು. ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಸವಣೂರು, ರಾಣೇಬೆನ್ನೂರಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. <br /> <br /> ಮಧ್ವ ಸಂಘದ ಅಧ್ಯಕ್ಷ ಪಿ.ಕೆ.ಹಂಚಿನಮನಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ನಾಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗವಿಠ್ಠಲಾಚಾರ್ಯ ಚಂದಿ ನಿರೂಪಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಣೆಬೆನ್ನೂರ:`</strong>ಆಧುನಿಕ ಮತ್ತು ತಾಂತ್ರಿಕ ಯುಗದಲ್ಲಿ ಧಾರ್ಮಿಕತೆ ಕುಸಿಯುತ್ತಿದ್ದು ಅಧರ್ಮ ಹೆಚ್ಚಾಗತೊಡಗಿದೆ. ಪ್ರತಿಯೊಬ್ಬರೂ ಧರ್ಮದಿಂದ ನಡೆದರೆ ಸಮಾಜ ಉತ್ತಮವಾಗಿ ನಡೆಯಬಲ್ಲದು. ಧಾರ್ಮಿಕ ಶಿಕ್ಷಣದಿಂದ ಉತ್ತಮ ಬದುಕು ಸಾಧ್ಯ~ ಎಂದು ಪಂ. ಪ್ರಭಂಜನಾಚಾರ್ಯ ಉಪಾಧ್ಯೆ ಹೇಳಿದರು. <br /> <br /> ನಗರದ ಕೋಟೆಯ ಉತ್ತರಾದಿಮಠದಲ್ಲಿ ಮಧ್ವ ಸೇವಾ ಸಂಘದ ಆಶ್ರಯದಲ್ಲಿ ಈಚೆಗೆ ಏಳು ದಿನಗಳ ಕಾಲ ಏರ್ಪಡಿಸಿದ್ದ ಧಾರ್ಮಿಕ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಪಂ.ಭೀಮಾಚಾರ್ಯ ಚಿಮ್ಮಲಗಿ ಮಾತನಾಡಿ, ಇಂದಿನ ಯುವ ಪೀಳಿಗೆ ಧಾರ್ಮಿಕ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ದೇಶಿ ಸಂಸ್ಕೃತಿ, ಧರ್ಮವನ್ನು ಅರಿತುಕೊಳ್ಳಬಹುದು ಎಂದರು.<br /> <br /> ಶಿಬಿರದಲ್ಲಿ ವಿದ್ಯಾರ್ಥಿಗಳಿಗೆ ಊಟ, ವಸತಿಯೊಂದಿಗೆ ಸಂಧ್ಯಾವಂದನೆ, ದೇವ ಪೂಜಾಪದ್ಧತಿ, ದೇವರ, ಗುರುಗಳ ಸ್ತೋತ್ರಗಳನ್ನು ಕಲಿಸಲಾಗುವುದು ಎಂದು ಸಮಿತಿಯವರು ತಿಳಿಸಿದರು. ಹುಬ್ಬಳ್ಳಿ, ಧಾರವಾಡ, ಶಿಗ್ಗಾಂವಿ, ಸವಣೂರು, ರಾಣೇಬೆನ್ನೂರಿಂದ 25 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. <br /> <br /> ಮಧ್ವ ಸಂಘದ ಅಧ್ಯಕ್ಷ ಪಿ.ಕೆ.ಹಂಚಿನಮನಿ ಸ್ವಾಗತಿಸಿದರು. ಕಾರ್ಯದರ್ಶಿ ಅಶೋಕ ನಾಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗವಿಠ್ಠಲಾಚಾರ್ಯ ಚಂದಿ ನಿರೂಪಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>