<p><strong>ಬೆಂಗಳೂರು:</strong> `ಮನುಷ್ಯನನ್ನು ನಿಧಾನವಾಗಿ ಗೋರಿಯೆಡೆಗೆಕೊಂಡೊಯ್ಯುವ ಹೊಗೆಯನ್ನು ನಿರಾಕರಿಸಬೇಕು' ಎಂದು ಆರ್ಟ್ ಆಫ್ ಲಿವಿಂಗ್ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದರು.<br /> <br /> ಆರ್ಟ್ ಆಫ್ ಲಿವಿಂಗ್ನ ಜೀವನ ಕಲಾಸಂಸ್ಥೆ ಹಾಗೂ ಬಿಜಿಎಸ್ ಆಸ್ಪತ್ರೆ ವತಿಯಿಂದ ವಿಶ್ವ ತಂಬಾಕು ನಿರಾಕರಣೆ ದಿನದಂದು ಆಯೋಜಿಸಿದ್ದ ಕ್ಯಾನ್ಸರ್ನ ಬಗ್ಗೆ ಅರಿವು ಮೂಡಿಸುವ ಆಂದೋಲನದಲ್ಲಿ ಅವರು ಮಾತನಾಡಿದರು.<br /> <br /> ಜೀವನ ಕಲಾ ಸಂಸ್ಥೆಯು ತಂಬಾಕು ನಿಯಂತ್ರಣಕ್ಕೆ `ಧೂಮಪಾನ ನಿಲ್ಲಿಸಿ, ಜೀವನ ಆರಂಭಿಸಿ' ಎಂಬ ಏಳು ದಿನಗಳ ವಿಶೇಷ ಶಿಬಿರವನ್ನು ಆರಂಭಿಸಿದೆ. ವ್ಯಸನದಿಂದ ಹೊರಬರಲು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಗಳನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಲಿದ್ದಾರೆ. ಈ ಶಿಬಿರ ವ್ಯಸನದಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಎಂದು ಚಿಕಿತ್ಸಕ ಸಂಶೋಧನಾಕಾರ ಹರೀಶ್ ರಾವತ್ ತಿಳಿಸಿದರು.<br /> <br /> ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಧೂಮಪಾನವನ್ನು ತೊರೆಯಲು ಸಾವಿರಾರು ವ್ಯಸನಿಗಳಿಗೆ ಈ ಶಿಬಿರ ಸಹಾಯಕವಾಗಿದೆ ಎಂದರು.<br /> <br /> ಯಶವಂತಪುರ ಶಾಸಕ ಎಸ್. ಟಿ.ಸೋಮಶೇಖರ್, ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್ನ ವ್ಯವಸ್ಥಾಪಕ ಡಾ. ಕೆ. ರವೀಂದ್ರನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಮನುಷ್ಯನನ್ನು ನಿಧಾನವಾಗಿ ಗೋರಿಯೆಡೆಗೆಕೊಂಡೊಯ್ಯುವ ಹೊಗೆಯನ್ನು ನಿರಾಕರಿಸಬೇಕು' ಎಂದು ಆರ್ಟ್ ಆಫ್ ಲಿವಿಂಗ್ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಲಹೆ ನೀಡಿದರು.<br /> <br /> ಆರ್ಟ್ ಆಫ್ ಲಿವಿಂಗ್ನ ಜೀವನ ಕಲಾಸಂಸ್ಥೆ ಹಾಗೂ ಬಿಜಿಎಸ್ ಆಸ್ಪತ್ರೆ ವತಿಯಿಂದ ವಿಶ್ವ ತಂಬಾಕು ನಿರಾಕರಣೆ ದಿನದಂದು ಆಯೋಜಿಸಿದ್ದ ಕ್ಯಾನ್ಸರ್ನ ಬಗ್ಗೆ ಅರಿವು ಮೂಡಿಸುವ ಆಂದೋಲನದಲ್ಲಿ ಅವರು ಮಾತನಾಡಿದರು.<br /> <br /> ಜೀವನ ಕಲಾ ಸಂಸ್ಥೆಯು ತಂಬಾಕು ನಿಯಂತ್ರಣಕ್ಕೆ `ಧೂಮಪಾನ ನಿಲ್ಲಿಸಿ, ಜೀವನ ಆರಂಭಿಸಿ' ಎಂಬ ಏಳು ದಿನಗಳ ವಿಶೇಷ ಶಿಬಿರವನ್ನು ಆರಂಭಿಸಿದೆ. ವ್ಯಸನದಿಂದ ಹೊರಬರಲು ಯೋಗ, ಪ್ರಾಣಾಯಾಮ, ಸುದರ್ಶನ ಕ್ರಿಯೆಗಳನ್ನು ಶಿಬಿರಾರ್ಥಿಗಳು ಅಭ್ಯಾಸ ಮಾಡಲಿದ್ದಾರೆ. ಈ ಶಿಬಿರ ವ್ಯಸನದಿಂದ ಮುಕ್ತಿ ಪಡೆಯಲು ಪರಿಣಾಮಕಾರಿ ಎಂದು ಚಿಕಿತ್ಸಕ ಸಂಶೋಧನಾಕಾರ ಹರೀಶ್ ರಾವತ್ ತಿಳಿಸಿದರು.<br /> <br /> ಜೀವನಶೈಲಿಯಲ್ಲಿ ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಧೂಮಪಾನವನ್ನು ತೊರೆಯಲು ಸಾವಿರಾರು ವ್ಯಸನಿಗಳಿಗೆ ಈ ಶಿಬಿರ ಸಹಾಯಕವಾಗಿದೆ ಎಂದರು.<br /> <br /> ಯಶವಂತಪುರ ಶಾಸಕ ಎಸ್. ಟಿ.ಸೋಮಶೇಖರ್, ಗ್ಲೋಬಲ್ ಹಾಸ್ಪಿಟಲ್ಸ್ ಗ್ರೂಪ್ನ ವ್ಯವಸ್ಥಾಪಕ ಡಾ. ಕೆ. ರವೀಂದ್ರನಾಥ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>