<p><strong>ಚಿಕ್ಕಬಳ್ಳಾಪುರ:</strong> ತಾಲ್ಲೂಕಿನ ನಂದಿ ಗ್ರಾಮದ ಸಮೀಪದ 15 ಅಡಿ ಎತ್ತರದ ಕಣಿವೆ ನಂದಿ ವಿಗ್ರಹಕ್ಕೆ ಸೋಮವಾರ ವಿಶಿಷ್ಟ ರೀತಿಯಲ್ಲಿ ಪೂಜಾಭಿಷೇಕ ಸಾಂಗೋಪಾಂಗವಾಗಿ ಜರುಗಿತು.<br /> <br /> ಪೂಜಾಭಿಷೇಕದ ಪ್ರಯುಕ್ತ 500ಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.<br /> ನಗರದ ಸತ್ಯಜ್ಞಾನ ಸಿದ್ಧಾಶ್ರಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿಷೇಕ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲದವರೆಗೆ ನಡೆಯಿತು. ಇದೇ ವೇಳೆ ಸುತ್ತಲಿನ ಗಾಯಕರಿಂದ ಮತ್ತು ಭಜನಾ ತಂಡದಿಂದ ಸಂಗೀತ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. <br /> <br /> ಇಡೀ ಪೂಜಾಭಿಷೇಕ ಪೂರ್ಣಗೊಳ್ಳುವವರೆಗೆ ಸಂಗೀತ ಕಾರ್ಯಕ್ರಮ ನಡೆಯಿತು. ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಮಾಡುವುದರಿಂದ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆಯಿದೆ. <br /> ಬರಗಾಲಕ್ಕೆ ತುತ್ತಾಗಿರುವ ನಮ್ಮ ಬಯಲುಸೀಮೆ ಜಿಲ್ಲೆಯಲ್ಲಿ ಮಳೆಯಾಗಬೇಕು. ಬಸವೇಶ್ವರ ಮೂರ್ತಿಯ ಈ ಭಾಗದಲ್ಲಿ ದೊಡ್ಡ ಮೂರ್ತಿಯಾಗಿದ್ದು, ಇಲ್ಲಿನ ಗ್ರಾಮಸ್ಥರಿಗೆ ಮೂರ್ತಿಯ ಮೇಲೆ ಗಾಢವಾದ ನಂಬಿಕೆಯಿದೆ ಎಂದು ಟ್ರಸ್ಟ್ ಪ್ರತಿನಿಧಿ ಅರುಣ್ ಭಗವಾನ್ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ನಂದಿಬೆಟ್ಟ, ದೊಡ್ಡಬಳ್ಳಾಪುರ, ತುಮಕೂರು ಮುಂತಾದ ಕಡೆ ಹೋಗುವ ಜನರು ಪ್ರಯಾಣ ಮುಂದುವರೆಸುವ ಮುನ್ನ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ನಂತರವಷ್ಟೇ ಪ್ರಯಾಣ ಬೆಳೆಸುತ್ತಾರೆ~ ಎಂದು ತಿಳಿಸಿದರು. ಅಪಾರ ಜನಸ್ತೋಮ ನೆರೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ತಾಲ್ಲೂಕಿನ ನಂದಿ ಗ್ರಾಮದ ಸಮೀಪದ 15 ಅಡಿ ಎತ್ತರದ ಕಣಿವೆ ನಂದಿ ವಿಗ್ರಹಕ್ಕೆ ಸೋಮವಾರ ವಿಶಿಷ್ಟ ರೀತಿಯಲ್ಲಿ ಪೂಜಾಭಿಷೇಕ ಸಾಂಗೋಪಾಂಗವಾಗಿ ಜರುಗಿತು.<br /> <br /> ಪೂಜಾಭಿಷೇಕದ ಪ್ರಯುಕ್ತ 500ಕ್ಕೂ ಹೆಚ್ಚು ಮಂದಿಗೆ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.<br /> ನಗರದ ಸತ್ಯಜ್ಞಾನ ಸಿದ್ಧಾಶ್ರಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಅಭಿಷೇಕ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲದವರೆಗೆ ನಡೆಯಿತು. ಇದೇ ವೇಳೆ ಸುತ್ತಲಿನ ಗಾಯಕರಿಂದ ಮತ್ತು ಭಜನಾ ತಂಡದಿಂದ ಸಂಗೀತ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. <br /> <br /> ಇಡೀ ಪೂಜಾಭಿಷೇಕ ಪೂರ್ಣಗೊಳ್ಳುವವರೆಗೆ ಸಂಗೀತ ಕಾರ್ಯಕ್ರಮ ನಡೆಯಿತು. ಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ಮತ್ತು ಅಭಿಷೇಕ ಮಾಡುವುದರಿಂದ ಉತ್ತಮ ಮಳೆ, ಬೆಳೆಯಾಗುತ್ತದೆ ಎಂಬ ನಂಬಿಕೆಯಿದೆ. <br /> ಬರಗಾಲಕ್ಕೆ ತುತ್ತಾಗಿರುವ ನಮ್ಮ ಬಯಲುಸೀಮೆ ಜಿಲ್ಲೆಯಲ್ಲಿ ಮಳೆಯಾಗಬೇಕು. ಬಸವೇಶ್ವರ ಮೂರ್ತಿಯ ಈ ಭಾಗದಲ್ಲಿ ದೊಡ್ಡ ಮೂರ್ತಿಯಾಗಿದ್ದು, ಇಲ್ಲಿನ ಗ್ರಾಮಸ್ಥರಿಗೆ ಮೂರ್ತಿಯ ಮೇಲೆ ಗಾಢವಾದ ನಂಬಿಕೆಯಿದೆ ಎಂದು ಟ್ರಸ್ಟ್ ಪ್ರತಿನಿಧಿ ಅರುಣ್ ಭಗವಾನ್ `ಪ್ರಜಾವಾಣಿ~ಗೆ ತಿಳಿಸಿದರು. <br /> <br /> ನಂದಿಬೆಟ್ಟ, ದೊಡ್ಡಬಳ್ಳಾಪುರ, ತುಮಕೂರು ಮುಂತಾದ ಕಡೆ ಹೋಗುವ ಜನರು ಪ್ರಯಾಣ ಮುಂದುವರೆಸುವ ಮುನ್ನ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಪೂಜೆ ನಂತರವಷ್ಟೇ ಪ್ರಯಾಣ ಬೆಳೆಸುತ್ತಾರೆ~ ಎಂದು ತಿಳಿಸಿದರು. ಅಪಾರ ಜನಸ್ತೋಮ ನೆರೆದಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>