<p><span style="font-size: 26px;"><strong>ರಾಯಬಾಗ: </strong>ತಾಲ್ಲೂಕಿನ ಕುಡಚಿ ಪಟ್ಟಣ ಪಂಚಾಯ್ತಿಯಲ್ಲಿ 28-7-2000 ರಿಂದ 31-5-2003ರ ವರೆಗೆ ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಂದಾಯ ನಿರೀಕ್ಷಕ ಎಂದು ಕಾರ್ಯ ನಿರ್ವಹಿಸಿದ ಆರೋಪದಡಿ ಶ್ರೀಧರ ಕಲ್ಲಪ್ಪ ಬೆಳವಿ ಮತ್ತು ಸುರೇಶ ಮಲ್ಲಪ್ಪ ಸಂಪಗಾಂವ ಅವರಿಗೆ ರಾಯಬಾಗದ ಜೆ.ಎಂ.ಎಫ್.ಸಿ. ನ್ಯಾಯಾಲಯ ಈ ಇಬ್ಬರೂ ಆರೋಪಿತರಿಗೆ ತಲಾ ಮೂರು ವರ್ಷ ಸಾದಾ ಸೆರೆ ವಾಸ ಮತ್ತು ಎಂಟು ಸಾವಿರ ದಂಡ ವಿಧಿಸಿದೆ.</span><br /> <br /> ಸದರಿ ಪ್ರಕರಣವನ್ನು 2004ರಲ್ಲಿ ಆಗಿನ ಚಿಕ್ಕೋಡಿ ಉಪವಿಭಾಗಧಿಕಾರಿಗಳು ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಚ್ಚುವರಿ ನ್ಯಾಯಾಧೀಶ ವಿಜಯಕುಮಾರ ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ವಕೀಲರಾಗಿ ಎಂ.ಪಿ.ಗಾಂವಕರ ವಾದಿಸಿದ್ದರು.<br /> <br /> <strong>ಹಾಸ್ಟೇಲ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ</strong><br /> ಬೆಳಗಾವಿ: ನಗರದ ಗಣೇಶಪುರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೇಲ್ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.<br /> <br /> ನಗರದ ಗಣಾಚಾರಿ ಗಲ್ಲಿ ನಿವಾಸಿ, 10ನೇ ತರಗತಿ ವಿದ್ಯಾರ್ಥಿ ವಿಶಾಲ್ ವಿಲಾಸ್ ಶಾರಬಿದರೆ (16) ಮೃತಪಟ್ಟ ದುರ್ದೈವಿಯಾಗಿದ್ದಾರೆ.<br /> <br /> ಮನೆಯಿಂದ ಶನಿವಾರವಷ್ಟೇ ವಿಶಾಲ್ ಹಾಸ್ಟೇಲ್ಗೆ ಬಂದಿದ್ದನು. ಪಾಲಕರು ಬೈದಿರುವುದಕ್ಕೆ ಮನನೊಂದು ಆತನು ಹಾಸ್ಟೇಲ್ನ ಊಟದ ಕೋಣೆಯಲ್ಲಿ ರಾತ್ರಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ರಾಯಬಾಗ: </strong>ತಾಲ್ಲೂಕಿನ ಕುಡಚಿ ಪಟ್ಟಣ ಪಂಚಾಯ್ತಿಯಲ್ಲಿ 28-7-2000 ರಿಂದ 31-5-2003ರ ವರೆಗೆ ಖೊಟ್ಟಿ ಕಾಗದ ಪತ್ರಗಳನ್ನು ಸೃಷ್ಟಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಕಂದಾಯ ನಿರೀಕ್ಷಕ ಎಂದು ಕಾರ್ಯ ನಿರ್ವಹಿಸಿದ ಆರೋಪದಡಿ ಶ್ರೀಧರ ಕಲ್ಲಪ್ಪ ಬೆಳವಿ ಮತ್ತು ಸುರೇಶ ಮಲ್ಲಪ್ಪ ಸಂಪಗಾಂವ ಅವರಿಗೆ ರಾಯಬಾಗದ ಜೆ.ಎಂ.ಎಫ್.ಸಿ. ನ್ಯಾಯಾಲಯ ಈ ಇಬ್ಬರೂ ಆರೋಪಿತರಿಗೆ ತಲಾ ಮೂರು ವರ್ಷ ಸಾದಾ ಸೆರೆ ವಾಸ ಮತ್ತು ಎಂಟು ಸಾವಿರ ದಂಡ ವಿಧಿಸಿದೆ.</span><br /> <br /> ಸದರಿ ಪ್ರಕರಣವನ್ನು 2004ರಲ್ಲಿ ಆಗಿನ ಚಿಕ್ಕೋಡಿ ಉಪವಿಭಾಗಧಿಕಾರಿಗಳು ಇಲ್ಲಿನ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೆಚ್ಚುವರಿ ನ್ಯಾಯಾಧೀಶ ವಿಜಯಕುಮಾರ ತೀರ್ಪು ನೀಡಿ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರಿ ವಕೀಲರಾಗಿ ಎಂ.ಪಿ.ಗಾಂವಕರ ವಾದಿಸಿದ್ದರು.<br /> <br /> <strong>ಹಾಸ್ಟೇಲ್ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ</strong><br /> ಬೆಳಗಾವಿ: ನಗರದ ಗಣೇಶಪುರದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಹಾಸ್ಟೇಲ್ನಲ್ಲಿ ವಿದ್ಯಾರ್ಥಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ನಡೆದಿದೆ.<br /> <br /> ನಗರದ ಗಣಾಚಾರಿ ಗಲ್ಲಿ ನಿವಾಸಿ, 10ನೇ ತರಗತಿ ವಿದ್ಯಾರ್ಥಿ ವಿಶಾಲ್ ವಿಲಾಸ್ ಶಾರಬಿದರೆ (16) ಮೃತಪಟ್ಟ ದುರ್ದೈವಿಯಾಗಿದ್ದಾರೆ.<br /> <br /> ಮನೆಯಿಂದ ಶನಿವಾರವಷ್ಟೇ ವಿಶಾಲ್ ಹಾಸ್ಟೇಲ್ಗೆ ಬಂದಿದ್ದನು. ಪಾಲಕರು ಬೈದಿರುವುದಕ್ಕೆ ಮನನೊಂದು ಆತನು ಹಾಸ್ಟೇಲ್ನ ಊಟದ ಕೋಣೆಯಲ್ಲಿ ರಾತ್ರಿ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>