<p>ಬೆಂಗಳೂರು: ಈಗಿನ ಕಾಂಗ್ರೆಸ್ ನಕಲಿ ಪಕ್ಷ. ಅಸಲಿತನ ಕಳೆದುಕೊಂಡಿರುವ ಆ ಪಕ್ಷಕ್ಕೆ ಆದರ್ಶ, ಬದ್ಧತೆ, ಸಿದ್ಧಾಂತ ಇಲ್ಲ. ಕೇವಲ ಭ್ರಷ್ಟಾಚಾರವೊಂದೇ ನಕಲಿ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯನಾಯ್ಡು ಅವರು ವ್ಯಂಗ್ಯವಾಡಿದರು.<br /> <br /> ಭಾನುವಾರ ನಗರದಲ್ಲಿ ನಡೆದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟ ಮುಂತಾದ ಕೋಟ್ಯಂತರ ರೂಪಾಯಿ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ಗೆ ಆಡಳಿತ ನಡೆಸುವ ನೈತಿಕತೆ ಇಲ್ಲ ಎಂದು ಟೀಕಿಸಿದರು.<br /> <br /> ಯುಪಿಎ ಆಡಳಿತದಲ್ಲಿ ಡಾಲರ್ ಮೌಲ್ಯ ಏರಿಕೆಯಾಯಿತು. ಆದರೆ, ರೂಪಾಯಿ ಮೌಲ್ಯ ಕುಸಿದು ತೀವ್ರ ನಿಗಾ ಘಟಕದಲ್ಲಿಡುವ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ದಿಟ್ಟತನದಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.<br /> ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಕೊರತೆ ಉಂಟಾಗಿದೆ. ಇದುವರೆಗೆ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಯಾರು ಎಂದು ಪ್ರಕಟಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ನುಡಿದರು.<br /> <br /> ತೃತೀಯ ರಂಗ ಒಂದು ರೀತಿಯಲ್ಲಿ ‘ಪಾರ್ಕಿಂಗ್ ಸ್ಥಳ’ವಾಗಿದೆ. ತೃತೀಯ ರಂಗ ಅಧಿಕಾರಕ್ಕೆ ಬಂದರೆ ವಾರದ ಏಳು ದಿನ ಏಳು ಮಂದಿ ಪ್ರಧಾನಿಯಾಗುತ್ತಾರೆ. ಮುಲಾಯಂ ಸಿಂಗ್, ಜಯಲಲಿತಾ, ಎಚ್.ಡಿ.ದೇವೇಗೌಡ, ನಿತೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಪ್ರಧಾನಿಯಾಗಲು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.<br /> <br /> ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ದೇಶದಾದ್ಯಂತ ಕಾಂಗ್ರೆಸ್ ದೂಳಿಪಟವಾಗುತ್ತಿದೆ. ದೆಹಲಿಯಲ್ಲೇ ಕಾಂಗ್ರೆಸ್ ನೆಲಕಚ್ಚಿದೆ.<br /> ದೇಶಕ್ಕೆ ಒಬ್ಬ ಸಮರ್ಥ ನಾಯಕ ಮತ್ತು ಸ್ಥಿರ ಸರ್ಕಾರ ಅಗತ್ಯವಿದೆ ಎಂದು ನುಡಿದರು.<br /> <br /> ಸಂಸದ ಅನಂತಕುಮಾರ್ ಮಾತನಾಡಿ, ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾರ್ಯಕರ್ತರು ಪಣ ತೊಡಬೇಕು. ಕಾಂಗ್ರೆಸ್ ಪಾಲಿಗೆ ನರೇಂದ್ರ ಮೋದಿ ಅಲೆ ಸುನಾಮಿಯಾಗಲಿದೆ.<br /> <br /> ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗುತ್ತದೆ ಎಂದು ನುಡಿದರು.<br /> <br /> ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಸುರೇಶ್ ಕುಮಾರ್, ಬಿ.ಎನ್.ವಿಜಯಕುಮಾರ್, ಅರವಿಂದ ಲಿಂಬಾವಳಿ, ಎಸ್. ರಘು, ವಿಧಾನಪರಿಷತ್ ಸದಸ್ಯರಾದ ವಿ. ಸೋಮಣ್ಣ, ತಾರಾ ಹಾಜರಿದ್ದರು.<br /> <br /> <strong>13ಕ್ಕೆ ಎರಡನೇ ಪಟ್ಟಿ</strong><br /> ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೇ 13ರಂದು ನಡೆಯಲಿದ್ದು, ಉಳಿದ 8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಂಸದ ಅನಂತಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಈಗಿನ ಕಾಂಗ್ರೆಸ್ ನಕಲಿ ಪಕ್ಷ. ಅಸಲಿತನ ಕಳೆದುಕೊಂಡಿರುವ ಆ ಪಕ್ಷಕ್ಕೆ ಆದರ್ಶ, ಬದ್ಧತೆ, ಸಿದ್ಧಾಂತ ಇಲ್ಲ. ಕೇವಲ ಭ್ರಷ್ಟಾಚಾರವೊಂದೇ ನಕಲಿ ಕಾಂಗ್ರೆಸ್ ಪಕ್ಷದ ಸಾಧನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಎಂ. ವೆಂಕಯ್ಯನಾಯ್ಡು ಅವರು ವ್ಯಂಗ್ಯವಾಡಿದರು.<br /> <br /> ಭಾನುವಾರ ನಗರದಲ್ಲಿ ನಡೆದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಲ್ಲಿದ್ದಲು ಹಗರಣ, 2ಜಿ ತರಂಗಾಂತರ ಹಂಚಿಕೆ, ಕಾಮನ್ವೆಲ್ತ್ ಕ್ರೀಡಾಕೂಟ ಮುಂತಾದ ಕೋಟ್ಯಂತರ ರೂಪಾಯಿ ಹಗರಣಗಳಲ್ಲಿ ಭಾಗಿಯಾಗಿರುವ ಕಾಂಗ್ರೆಸ್ಗೆ ಆಡಳಿತ ನಡೆಸುವ ನೈತಿಕತೆ ಇಲ್ಲ ಎಂದು ಟೀಕಿಸಿದರು.<br /> <br /> ಯುಪಿಎ ಆಡಳಿತದಲ್ಲಿ ಡಾಲರ್ ಮೌಲ್ಯ ಏರಿಕೆಯಾಯಿತು. ಆದರೆ, ರೂಪಾಯಿ ಮೌಲ್ಯ ಕುಸಿದು ತೀವ್ರ ನಿಗಾ ಘಟಕದಲ್ಲಿಡುವ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ಮನಮೋಹನ್ ಸಿಂಗ್ ದಿಟ್ಟತನದಿಂದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ.<br /> ಕಾಂಗ್ರೆಸ್ ಪಕ್ಷಕ್ಕೆ ನಾಯಕತ್ವ ಕೊರತೆ ಉಂಟಾಗಿದೆ. ಇದುವರೆಗೆ ಪ್ರಧಾನಿ ಹುದ್ದೆಗೆ ಅಭ್ಯರ್ಥಿ ಯಾರು ಎಂದು ಪ್ರಕಟಿಸಲು ಕಾಂಗ್ರೆಸ್ಗೆ ಸಾಧ್ಯವಾಗಿಲ್ಲ ಎಂದು ನುಡಿದರು.<br /> <br /> ತೃತೀಯ ರಂಗ ಒಂದು ರೀತಿಯಲ್ಲಿ ‘ಪಾರ್ಕಿಂಗ್ ಸ್ಥಳ’ವಾಗಿದೆ. ತೃತೀಯ ರಂಗ ಅಧಿಕಾರಕ್ಕೆ ಬಂದರೆ ವಾರದ ಏಳು ದಿನ ಏಳು ಮಂದಿ ಪ್ರಧಾನಿಯಾಗುತ್ತಾರೆ. ಮುಲಾಯಂ ಸಿಂಗ್, ಜಯಲಲಿತಾ, ಎಚ್.ಡಿ.ದೇವೇಗೌಡ, ನಿತೀಶ್ ಕುಮಾರ್ ಸೇರಿದಂತೆ ಹಲವಾರು ನಾಯಕರು ಪ್ರಧಾನಿಯಾಗಲು ಸರದಿ ಸಾಲಿನಲ್ಲಿ ನಿಂತಿದ್ದಾರೆ ಎಂದರು.<br /> <br /> ಶಾಸಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ದೇಶದಾದ್ಯಂತ ಕಾಂಗ್ರೆಸ್ ದೂಳಿಪಟವಾಗುತ್ತಿದೆ. ದೆಹಲಿಯಲ್ಲೇ ಕಾಂಗ್ರೆಸ್ ನೆಲಕಚ್ಚಿದೆ.<br /> ದೇಶಕ್ಕೆ ಒಬ್ಬ ಸಮರ್ಥ ನಾಯಕ ಮತ್ತು ಸ್ಥಿರ ಸರ್ಕಾರ ಅಗತ್ಯವಿದೆ ಎಂದು ನುಡಿದರು.<br /> <br /> ಸಂಸದ ಅನಂತಕುಮಾರ್ ಮಾತನಾಡಿ, ಬೂತ್ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವ ಮೂಲಕ ಕಾಂಗ್ರೆಸ್ ಮುಕ್ತ ಭಾರತಕ್ಕೆ ಕಾರ್ಯಕರ್ತರು ಪಣ ತೊಡಬೇಕು. ಕಾಂಗ್ರೆಸ್ ಪಾಲಿಗೆ ನರೇಂದ್ರ ಮೋದಿ ಅಲೆ ಸುನಾಮಿಯಾಗಲಿದೆ.<br /> <br /> ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ 20ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗುತ್ತದೆ ಎಂದು ನುಡಿದರು.<br /> <br /> ಸಂಸದ ಪಿ.ಸಿ. ಮೋಹನ್, ಶಾಸಕರಾದ ಎಸ್.ಸುರೇಶ್ ಕುಮಾರ್, ಬಿ.ಎನ್.ವಿಜಯಕುಮಾರ್, ಅರವಿಂದ ಲಿಂಬಾವಳಿ, ಎಸ್. ರಘು, ವಿಧಾನಪರಿಷತ್ ಸದಸ್ಯರಾದ ವಿ. ಸೋಮಣ್ಣ, ತಾರಾ ಹಾಜರಿದ್ದರು.<br /> <br /> <strong>13ಕ್ಕೆ ಎರಡನೇ ಪಟ್ಟಿ</strong><br /> ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ಇದೇ 13ರಂದು ನಡೆಯಲಿದ್ದು, ಉಳಿದ 8 ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಸಂಸದ ಅನಂತಕುಮಾರ್ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>