<p>ಹೊಸ್ಮಾರು(ಉಡುಪಿ): `ಬಂದೂಕು ಮತ್ತು ರಕ್ತಕ್ರಾಂತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆ ವಿರುದ್ಧ ಹೋಗುತ್ತಿರುವ ಸಂಘಟನೆ ಜತೆಗೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.<br /> <br /> ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್ ಪೀಡಿತ ಗ್ರಾಮ, ಕಾರ್ಕಳ ತಾಲ್ಲೂಕಿನ ಹೊಸ್ಮಾರುವಿನಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರ ಆರಂಭಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.<br /> <br /> `ಬಂದೂಕಿನಿಂದ ಗೂಂಡಾಗಿರಿ ಮಾಡಿ ಸಮಾಜ ಪರಿವರ್ತನೆ ಮಾಡುತ್ತೇವೆ ಎಂದು ಜನಸಾಮಾನ್ಯರ ಮೇಲೆ ನಕ್ಸಲರು ಪ್ರಹಾರ ಮಾಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಕೋವಿ, ಕತ್ತಿ ಹಿಡಿದು ಹೋರಾಡುವವರ ವಿರುದ್ಧ ನಮ್ಮ ಸಮರ~ ಎಂದು ನಕ್ಸಲರಿಗೆ ಎಚ್ಚರಿಕೆ ನೀಡಿದ ಅವರು, `ಹಾಗಾಗಿಯೇ ಸ್ವಾಭಿಮಾನ, ಸ್ವಂತಿಕೆಯಿಂದ ಶ್ರಮಜೀವಿಗಳಾಗಿ ಬದುಕುತ್ತಿರುವ ಜನರಿರುವ ಈ ಭಾಗದಿಂದಲೇ ಮೊದಲ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ~ ಎಂದರು.<br /> <br /> ಯುಪಿಎ `ಕಿಚನ್ ಫ್ರೆಂಡ್ಸ್~: `ದೇಶದ ದೊಡ್ಡ ರಾಜಕಾರಣಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ದೇಶದ ರಾಜಕಾರಣಕ್ಕೆ ಬದಲಾವಣೆ ತಂದುಕೊಟ್ಟಿತು. ಅಲ್ಲದೇ ಇದು ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆಯಾಗಿರುವ ಕ್ಷೇತ್ರವೂ ಹೌದು. ಈ ಬಾರಿಯ ಫಲಿತಾಂಶವೂ ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆಯಾಗಲಿದೆ~ ಎಂದು ವಿಶ್ಲೇಷಿಸಿದರು.<br /> <br /> `ಯುಪಿಎ ಸರ್ಕಾರದಲ್ಲಿ `ಕಿಚನ್ ಫ್ರೆಂಡ್ಸ್~ ಆಗಿರುವ ಸೋನಿಯಾ ಗಾಂಧಿ ಅವರ ಪರಮಾಪ್ತರೂ, ಈ ಭಾಗದವರೇ ಆಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾದ ವೀರಪ್ಪ ಮೊಯಿಲಿ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ ಇಷ್ಟೊಂದು ಸಲ ಆಯ್ಕೆಯಾಗಿ ಕರಾವಳಿ ಭಾಗಕ್ಕೆ ಮಾಡಿದ್ದಾದರೂ ಏನು?~ ಎಂದು ಪ್ರಶ್ನಿಸಿದ ಅವರು, `ಕಾಂಗ್ರೆಸ್ ಸಂಸದರು ಮಾಡದೇ ಇರುವ ಹಲವು ಅಭಿವೃದ್ಧಿ ಕೆಲಸಗಳನ್ನು ಸಂಸದನಾಗಿ ನಾನು ಮಾಡ್ದ್ದಿದೇನೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೊಸ್ಮಾರು(ಉಡುಪಿ): `ಬಂದೂಕು ಮತ್ತು ರಕ್ತಕ್ರಾಂತಿಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯುವುದಿಲ್ಲ. ಪ್ರಜಾತಂತ್ರ ವ್ಯವಸ್ಥೆ ವಿರುದ್ಧ ಹೋಗುತ್ತಿರುವ ಸಂಘಟನೆ ಜತೆಗೆ ಸರ್ಕಾರ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದರು.<br /> <br /> ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ನಕ್ಸಲ್ ಪೀಡಿತ ಗ್ರಾಮ, ಕಾರ್ಕಳ ತಾಲ್ಲೂಕಿನ ಹೊಸ್ಮಾರುವಿನಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಸುನೀಲ್ ಕುಮಾರ್ ಪರ ಚುನಾವಣಾ ಪ್ರಚಾರ ಆರಂಭಿಸಿದ ಅವರು ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.<br /> <br /> `ಬಂದೂಕಿನಿಂದ ಗೂಂಡಾಗಿರಿ ಮಾಡಿ ಸಮಾಜ ಪರಿವರ್ತನೆ ಮಾಡುತ್ತೇವೆ ಎಂದು ಜನಸಾಮಾನ್ಯರ ಮೇಲೆ ನಕ್ಸಲರು ಪ್ರಹಾರ ಮಾಡುವುದನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ. ಕೋವಿ, ಕತ್ತಿ ಹಿಡಿದು ಹೋರಾಡುವವರ ವಿರುದ್ಧ ನಮ್ಮ ಸಮರ~ ಎಂದು ನಕ್ಸಲರಿಗೆ ಎಚ್ಚರಿಕೆ ನೀಡಿದ ಅವರು, `ಹಾಗಾಗಿಯೇ ಸ್ವಾಭಿಮಾನ, ಸ್ವಂತಿಕೆಯಿಂದ ಶ್ರಮಜೀವಿಗಳಾಗಿ ಬದುಕುತ್ತಿರುವ ಜನರಿರುವ ಈ ಭಾಗದಿಂದಲೇ ಮೊದಲ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ~ ಎಂದರು.<br /> <br /> ಯುಪಿಎ `ಕಿಚನ್ ಫ್ರೆಂಡ್ಸ್~: `ದೇಶದ ದೊಡ್ಡ ರಾಜಕಾರಣಿ ಇಂದಿರಾ ಗಾಂಧಿ ಅವರು ಸ್ಪರ್ಧಿಸಿದ್ದ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ದೇಶದ ರಾಜಕಾರಣಕ್ಕೆ ಬದಲಾವಣೆ ತಂದುಕೊಟ್ಟಿತು. ಅಲ್ಲದೇ ಇದು ಕಾಂಗ್ರೆಸ್ಗೆ ಎಚ್ಚರಿಕೆ ಗಂಟೆಯಾಗಿರುವ ಕ್ಷೇತ್ರವೂ ಹೌದು. ಈ ಬಾರಿಯ ಫಲಿತಾಂಶವೂ ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆಯಾಗಲಿದೆ~ ಎಂದು ವಿಶ್ಲೇಷಿಸಿದರು.<br /> <br /> `ಯುಪಿಎ ಸರ್ಕಾರದಲ್ಲಿ `ಕಿಚನ್ ಫ್ರೆಂಡ್ಸ್~ ಆಗಿರುವ ಸೋನಿಯಾ ಗಾಂಧಿ ಅವರ ಪರಮಾಪ್ತರೂ, ಈ ಭಾಗದವರೇ ಆಗಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಅತ್ಯಂತ ಪ್ರಭಾವಿ ಸಚಿವರಾದ ವೀರಪ್ಪ ಮೊಯಿಲಿ, ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್, ಜನಾರ್ದನ ಪೂಜಾರಿ ಇಷ್ಟೊಂದು ಸಲ ಆಯ್ಕೆಯಾಗಿ ಕರಾವಳಿ ಭಾಗಕ್ಕೆ ಮಾಡಿದ್ದಾದರೂ ಏನು?~ ಎಂದು ಪ್ರಶ್ನಿಸಿದ ಅವರು, `ಕಾಂಗ್ರೆಸ್ ಸಂಸದರು ಮಾಡದೇ ಇರುವ ಹಲವು ಅಭಿವೃದ್ಧಿ ಕೆಲಸಗಳನ್ನು ಸಂಸದನಾಗಿ ನಾನು ಮಾಡ್ದ್ದಿದೇನೆ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>