<p><strong>ಭುವನೇಶ್ವರ (ಪಿಟಿಐ):</strong> ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಗೆ ಪ್ರತಿಯಾಗಿ, ಜೈಲಿನಲ್ಲಿರುವ ತಮ್ಮ 13 ಅನುಯಾಯಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂಬ ನಕ್ಸಲೀಯರ ಬೇಡಿಕೆಯನ್ನು ಒಡಿಶಾ ಸರ್ಕಾರ ಒಪ್ಪಿಕೊಂಡಿದೆ.<br /> <br /> ತಮ್ಮ ಬೇಡಿಕೆ ಈಡೇರಿಕೆಗೆ ನಕ್ಸಲೀಯರು ವಿಧಿಸಿದ್ದ ಗಡುವು ಬುಧವಾರ ಸಂಜೆ 5 ಗಂಟೆಗೆ ಕೊನೆಗೊಂಡ ಬಳಿಕ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.<br /> <br /> `13 ಜನರ ವಿರುದ್ಧದ ಪ್ರಕರಣಗಳನ್ನು ಕಾನೂನಿನ ಪ್ರಕಾರ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಿಂದ ತೃಪ್ತರಾಗಿ ನಕ್ಸಲೀಯರು ಶಾಸಕರ ಬಿಡುಗಡೆಗೆ ಮುಂದಾಗುವರು ಎಂಬ ವಿಶ್ವಾಸ ಇದೆ~ ಎಂದು ಗೃಹ ಕಾರ್ಯದರ್ಶಿ ಯು.ಎನ್.ಬೆಹೆರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ಮೊದಲು, ತಮ್ಮ ಗಡುವಿನ ಸಮಯ ಹತ್ತಿರ ಬರುತ್ತಿದ್ದರೂ ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬೀಳದ್ದನ್ನು ಕಂಡು ಬಂಡುಕೋರರು ಕುಪಿತರಾಗಿದ್ದರು. ಮತ್ತೆ ಗಡುವು ವಿಸ್ತರಣೆಗೆ ನಿರಾಕರಿಸಿದ್ದ ಅವರು, ಒಡಿಶಾ ಸರ್ಕಾರದಲ್ಲಿ ತಾವು ವಿಶ್ವಾಸ ಕಳೆದುಕೊಂಡಿರುವುದರಿಂದ 37 ವರ್ಷದ ಶಾಸಕರ ಭವಿಷ್ಯವನ್ನು ತಮ್ಮ `ಪ್ರಜಾ ನ್ಯಾಯಾಲಯ~ವೇ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದರು.<br /> <br /> ಈ ಕುರಿತು ಮಾಧ್ಯಮವೊಂದಕ್ಕೆ ಸಂದೇಶ ಕಳುಹಿಸಿದ್ದ ಸಿಪಿಐ (ಮಾವೊವಾದಿ) ಆಂಧ್ರ- ಒಡಿಶಾ ಗಡಿ ವಿಶೇಷ ವಲಯ ಸಮಿತಿ ಮುಖಂಡರೊಬ್ಬರು, ನಕ್ಸಲೀಯರ ಬಿಡುಗಡೆ ವಿಷಯವನ್ನು ಸರ್ಕಾರ ಲಘುವಾಗಿ ತೆಗೆದುಕೊಂಡಿದೆ ಎಂದು ಟೀಕಿಸಿದ್ದರು.<br /> <br /> ನಕ್ಸಲೀಯರ ಷರತ್ತಿನಂತೆ ಅವರ ಸಹವರ್ತಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದರಿಂದ ಹಿಕಾಕ ಅವರ ಬಿಡುಗಡೆಯಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಭರವಸೆ ವ್ಯಕ್ತಪಡಿಸಿದ ಬೆನ್ನಲ್ಲೇ ಮಾವೊ ಮುಖಂಡರಿಂದ ಈ ಸಂದೇಶ ಹೊರಬಿದ್ದಿತ್ತು.<br /> <br /> `ಈಗಾಗಲೇ ನಾಲ್ಕು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಮುಂದೆಂದೂ ಅದನ್ನು ವಿಸ್ತರಿಸುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಜಾ ನ್ಯಾಯಾಲಯ ನಡೆಯಲಿದ್ದು ಅದರ ಸ್ಥಳ ಮತ್ತು ಸಮಯವನ್ನು ಬಳಿಕ ನಿರ್ಧರಿಸಲಾಗುವುದು~ ಎಂದು ನಕ್ಸಲ್ ಪರ ನ್ಯಾಯವಾದಿ ನಿಹಾರ್ ರಂಜನ್ ಪಟ್ನಾಯಕ್ ತಿಳಿಸಿದ್ದರು.<br /> <br /> ಬಿಡುಗಡೆಗೊಳಿಸಬೇಕಾದ ತಮ್ಮ ಬೆಂಬಲಿಗರನ್ನು ಸಂಪೂರ್ಣವಾಗಿ ಆರೋಪ ಮುಕ್ತಗೊಳಿಸಬೇಕು ಎಂದು ವಲಯ ಸಮಿತಿ ಸರ್ಕಾರಕ್ಕೆ ಷರತ್ತು ವಿಧಿಸಿತ್ತು.<br /> <br /> 55 ಪೊಲೀಸರ ಹತ್ಯೆಗೆ ಕಾರಣನಾದ ಚೆಂದ ಭೂಷಣಂ ಅಲಿಯಾಸ್ ಘಾಸಿ ಅವರ ಹೆಸರನ್ನು ವಲಯ ಸಮಿತಿ ಬೇಡಿಕೆ ಪಟ್ಟಿಯಿಂದ ಕೈಬಿಟ್ಟಿತ್ತು.</p>.<p><strong>ಸುರಕ್ಷಿತವಾಗಿರುವೆ- ಹಿಕಾಕ </strong> <br /> ಒತ್ತೆಯಾಳು ಹಿಕಾಕ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ಕೆ.ಪಟ್ನಾಯಕ್ ಮತ್ತು ಕೊರಾಪುಟ್ ಜಿಲ್ಲಾಧಿಕಾರಿ ಜೆ.ಎಸ್.ರಾಮಚಂದ್ರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ತಾವು ಸುರಕ್ಷಿತರಾಗಿರುವುದಾಗಿ ತಿಳಿಸ್ದ್ದಿದಾರೆ. ಕೊರಾಪುಟ್ ಸಂಸದ ಬಿಜೆಡಿಯ ಜಯರಾಮ್ ಪಾಂಗಿ ಜೊತೆಯೂ ಶಾಸಕರು ಮಾತುಕತೆ ನಡೆಸಿದರು.<br /> <br /> ಬುಧವಾರ ಸಂಜೆ 5 ಗಂಟೆಗೆ ಹಿಕಾಕ ಅವರನ್ನು ಬಿಡುಗಡೆ ಮಾಡಿದರೆ ಮಾತ್ರ ಸೆರೆಮನೆಯಲ್ಲಿರುವ ಮಾವೊವಾದಿಗಳ ಮೇಲಿರುವ ಆರೋಪಗಳಲ್ಲಿ `ಸೂಕ್ತ~ವಾದುದನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪಂಚಾಯತ್ ರಾಜ್ ಕಾರ್ಯದರ್ಶಿ ಪಿ.ಕೆ.ಜೆನಾ ಈ ಮುನ್ನ ತಿಳಿಸಿದ್ದರು.</p>.<p><strong>ಸುಪ್ರೀಂಕೋರ್ಟ್ಗೆ ಅರ್ಜಿ: ಇಂದೇ ವಿಚಾರಣೆ</strong><br /> ಶಾಸಕರ ಬಿಡುಗಡೆಗೆ ಪ್ರತಿಯಾಗಿ ನಕ್ಸಲೀಯರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಕೋರಿ ನಿವೃತ್ತ ಸೇನಾಧಿಕಾರಿಯೊಬ್ಬರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಗುರುವಾರವೇ ಇದರ ವಿಚಾರಣೆ ನಡೆಸಲಿದೆ.<br /> <br /> ಮಾವೊವಾದಿಗಳು ಸರ್ಕಾರಕ್ಕೆ ನೀಡಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇದ್ದಂತೆಯೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಪರಿಣತರಾದ ನಿವೃತ್ತ ಮೇಜರ್ ಜನರಲ್ ಗಗನ್ದೀಪ್ ಸಿಂಗ್ ಈ ಅರ್ಜಿ ಸಲ್ಲಿಸಿದರು.<br /> <br /> ಭದ್ರತಾ ಪಡೆ ಸಿಬ್ಬಂದಿ ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ನಕ್ಸಲೀಯರನ್ನು ಬಂಧಿಸಿರುವುದರಿಂದ ಅವರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಅವರು ಕೋರಿದ್ದಾರೆ. ಅಲ್ಲದೆ ಬುಧವಾರಕ್ಕೆ ಗುಡುವು ಕೊನೆಗೊಳ್ಳುವುದರಿಂದ ಕೂಡಲೇ ತಮ್ಮ ಅರ್ಜಿಯ ವಿಚಾರಣೆ ನಡೆಸಬೇಕೆಂದೂ ಅವರು ಮನವಿ ಮಾಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಪಿಟಿಐ):</strong> ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಗೆ ಪ್ರತಿಯಾಗಿ, ಜೈಲಿನಲ್ಲಿರುವ ತಮ್ಮ 13 ಅನುಯಾಯಿಗಳ ಮೇಲಿನ ಪ್ರಕರಣಗಳನ್ನು ವಾಪಸ್ ಪಡೆಯಬೇಕೆಂಬ ನಕ್ಸಲೀಯರ ಬೇಡಿಕೆಯನ್ನು ಒಡಿಶಾ ಸರ್ಕಾರ ಒಪ್ಪಿಕೊಂಡಿದೆ.<br /> <br /> ತಮ್ಮ ಬೇಡಿಕೆ ಈಡೇರಿಕೆಗೆ ನಕ್ಸಲೀಯರು ವಿಧಿಸಿದ್ದ ಗಡುವು ಬುಧವಾರ ಸಂಜೆ 5 ಗಂಟೆಗೆ ಕೊನೆಗೊಂಡ ಬಳಿಕ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.<br /> <br /> `13 ಜನರ ವಿರುದ್ಧದ ಪ್ರಕರಣಗಳನ್ನು ಕಾನೂನಿನ ಪ್ರಕಾರ ವಾಪಸ್ ಪಡೆಯಲು ಸರ್ಕಾರ ನಿರ್ಧರಿಸಿದೆ. ಇದರಿಂದ ತೃಪ್ತರಾಗಿ ನಕ್ಸಲೀಯರು ಶಾಸಕರ ಬಿಡುಗಡೆಗೆ ಮುಂದಾಗುವರು ಎಂಬ ವಿಶ್ವಾಸ ಇದೆ~ ಎಂದು ಗೃಹ ಕಾರ್ಯದರ್ಶಿ ಯು.ಎನ್.ಬೆಹೆರಾ ಸುದ್ದಿಗಾರರಿಗೆ ತಿಳಿಸಿದ್ದಾರೆ.<br /> <br /> ಈ ಮೊದಲು, ತಮ್ಮ ಗಡುವಿನ ಸಮಯ ಹತ್ತಿರ ಬರುತ್ತಿದ್ದರೂ ಸರ್ಕಾರದಿಂದ ಯಾವುದೇ ನಿರ್ಧಾರ ಹೊರಬೀಳದ್ದನ್ನು ಕಂಡು ಬಂಡುಕೋರರು ಕುಪಿತರಾಗಿದ್ದರು. ಮತ್ತೆ ಗಡುವು ವಿಸ್ತರಣೆಗೆ ನಿರಾಕರಿಸಿದ್ದ ಅವರು, ಒಡಿಶಾ ಸರ್ಕಾರದಲ್ಲಿ ತಾವು ವಿಶ್ವಾಸ ಕಳೆದುಕೊಂಡಿರುವುದರಿಂದ 37 ವರ್ಷದ ಶಾಸಕರ ಭವಿಷ್ಯವನ್ನು ತಮ್ಮ `ಪ್ರಜಾ ನ್ಯಾಯಾಲಯ~ವೇ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದ್ದರು.<br /> <br /> ಈ ಕುರಿತು ಮಾಧ್ಯಮವೊಂದಕ್ಕೆ ಸಂದೇಶ ಕಳುಹಿಸಿದ್ದ ಸಿಪಿಐ (ಮಾವೊವಾದಿ) ಆಂಧ್ರ- ಒಡಿಶಾ ಗಡಿ ವಿಶೇಷ ವಲಯ ಸಮಿತಿ ಮುಖಂಡರೊಬ್ಬರು, ನಕ್ಸಲೀಯರ ಬಿಡುಗಡೆ ವಿಷಯವನ್ನು ಸರ್ಕಾರ ಲಘುವಾಗಿ ತೆಗೆದುಕೊಂಡಿದೆ ಎಂದು ಟೀಕಿಸಿದ್ದರು.<br /> <br /> ನಕ್ಸಲೀಯರ ಷರತ್ತಿನಂತೆ ಅವರ ಸಹವರ್ತಿಗಳ ಬಿಡುಗಡೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತಿರುವುದರಿಂದ ಹಿಕಾಕ ಅವರ ಬಿಡುಗಡೆಯಾಗಲಿದೆ ಎಂದು ಮುಖ್ಯ ಕಾರ್ಯದರ್ಶಿ ಭರವಸೆ ವ್ಯಕ್ತಪಡಿಸಿದ ಬೆನ್ನಲ್ಲೇ ಮಾವೊ ಮುಖಂಡರಿಂದ ಈ ಸಂದೇಶ ಹೊರಬಿದ್ದಿತ್ತು.<br /> <br /> `ಈಗಾಗಲೇ ನಾಲ್ಕು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಮುಂದೆಂದೂ ಅದನ್ನು ವಿಸ್ತರಿಸುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಪ್ರಜಾ ನ್ಯಾಯಾಲಯ ನಡೆಯಲಿದ್ದು ಅದರ ಸ್ಥಳ ಮತ್ತು ಸಮಯವನ್ನು ಬಳಿಕ ನಿರ್ಧರಿಸಲಾಗುವುದು~ ಎಂದು ನಕ್ಸಲ್ ಪರ ನ್ಯಾಯವಾದಿ ನಿಹಾರ್ ರಂಜನ್ ಪಟ್ನಾಯಕ್ ತಿಳಿಸಿದ್ದರು.<br /> <br /> ಬಿಡುಗಡೆಗೊಳಿಸಬೇಕಾದ ತಮ್ಮ ಬೆಂಬಲಿಗರನ್ನು ಸಂಪೂರ್ಣವಾಗಿ ಆರೋಪ ಮುಕ್ತಗೊಳಿಸಬೇಕು ಎಂದು ವಲಯ ಸಮಿತಿ ಸರ್ಕಾರಕ್ಕೆ ಷರತ್ತು ವಿಧಿಸಿತ್ತು.<br /> <br /> 55 ಪೊಲೀಸರ ಹತ್ಯೆಗೆ ಕಾರಣನಾದ ಚೆಂದ ಭೂಷಣಂ ಅಲಿಯಾಸ್ ಘಾಸಿ ಅವರ ಹೆಸರನ್ನು ವಲಯ ಸಮಿತಿ ಬೇಡಿಕೆ ಪಟ್ಟಿಯಿಂದ ಕೈಬಿಟ್ಟಿತ್ತು.</p>.<p><strong>ಸುರಕ್ಷಿತವಾಗಿರುವೆ- ಹಿಕಾಕ </strong> <br /> ಒತ್ತೆಯಾಳು ಹಿಕಾಕ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಬಿ.ಕೆ.ಪಟ್ನಾಯಕ್ ಮತ್ತು ಕೊರಾಪುಟ್ ಜಿಲ್ಲಾಧಿಕಾರಿ ಜೆ.ಎಸ್.ರಾಮಚಂದ್ರ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ತಾವು ಸುರಕ್ಷಿತರಾಗಿರುವುದಾಗಿ ತಿಳಿಸ್ದ್ದಿದಾರೆ. ಕೊರಾಪುಟ್ ಸಂಸದ ಬಿಜೆಡಿಯ ಜಯರಾಮ್ ಪಾಂಗಿ ಜೊತೆಯೂ ಶಾಸಕರು ಮಾತುಕತೆ ನಡೆಸಿದರು.<br /> <br /> ಬುಧವಾರ ಸಂಜೆ 5 ಗಂಟೆಗೆ ಹಿಕಾಕ ಅವರನ್ನು ಬಿಡುಗಡೆ ಮಾಡಿದರೆ ಮಾತ್ರ ಸೆರೆಮನೆಯಲ್ಲಿರುವ ಮಾವೊವಾದಿಗಳ ಮೇಲಿರುವ ಆರೋಪಗಳಲ್ಲಿ `ಸೂಕ್ತ~ವಾದುದನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಪಂಚಾಯತ್ ರಾಜ್ ಕಾರ್ಯದರ್ಶಿ ಪಿ.ಕೆ.ಜೆನಾ ಈ ಮುನ್ನ ತಿಳಿಸಿದ್ದರು.</p>.<p><strong>ಸುಪ್ರೀಂಕೋರ್ಟ್ಗೆ ಅರ್ಜಿ: ಇಂದೇ ವಿಚಾರಣೆ</strong><br /> ಶಾಸಕರ ಬಿಡುಗಡೆಗೆ ಪ್ರತಿಯಾಗಿ ನಕ್ಸಲೀಯರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವಂತೆ ನಿರ್ದೇಶನ ನೀಡಬೇಕೆಂದು ಕೋರಿ ನಿವೃತ್ತ ಸೇನಾಧಿಕಾರಿಯೊಬ್ಬರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದು, ಕೋರ್ಟ್ ಗುರುವಾರವೇ ಇದರ ವಿಚಾರಣೆ ನಡೆಸಲಿದೆ.<br /> <br /> ಮಾವೊವಾದಿಗಳು ಸರ್ಕಾರಕ್ಕೆ ನೀಡಿದ್ದ ಗಡುವು ಪೂರ್ಣಗೊಳ್ಳಲು ಕೆಲವೇ ಗಂಟೆಗಳು ಬಾಕಿ ಇದ್ದಂತೆಯೇ ನಕ್ಸಲ್ ವಿರೋಧಿ ಕಾರ್ಯಾಚರಣೆ ಪರಿಣತರಾದ ನಿವೃತ್ತ ಮೇಜರ್ ಜನರಲ್ ಗಗನ್ದೀಪ್ ಸಿಂಗ್ ಈ ಅರ್ಜಿ ಸಲ್ಲಿಸಿದರು.<br /> <br /> ಭದ್ರತಾ ಪಡೆ ಸಿಬ್ಬಂದಿ ತಮ್ಮ ಪ್ರಾಣವನ್ನು ಒತ್ತೆಯಾಗಿಟ್ಟು ನಕ್ಸಲೀಯರನ್ನು ಬಂಧಿಸಿರುವುದರಿಂದ ಅವರನ್ನು ಬಿಡುಗಡೆ ಮಾಡುವ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಅವರು ಕೋರಿದ್ದಾರೆ. ಅಲ್ಲದೆ ಬುಧವಾರಕ್ಕೆ ಗುಡುವು ಕೊನೆಗೊಳ್ಳುವುದರಿಂದ ಕೂಡಲೇ ತಮ್ಮ ಅರ್ಜಿಯ ವಿಚಾರಣೆ ನಡೆಸಬೇಕೆಂದೂ ಅವರು ಮನವಿ ಮಾಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>