<p><strong>ಬೆಂಗಳೂರು: </strong>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಹಿಂದೆ ಸಾಲ ಪಡೆಯಲು ಅಡಮಾನ ಇಟ್ಟಿದ್ದ 11 ಕಟ್ಟಡಗಳಲ್ಲಿ ಎರಡು ಕಟ್ಟಡಗಳನ್ನು ಶನಿವಾರ ಋಣಮುಕ್ತ ಮಾಡಲಾಗುತ್ತಿದೆ.<br /> <br /> ಮೇಯೊ ಹಾಲ್ ಮತ್ತು ಕೆಂಪೇಗೌಡ ಮ್ಯೂಸಿಯಂ ಆ ಎರಡು ಕಟ್ಟಡಗಳಾಗಿವೆ. ಬಿಬಿಎಂಪಿ ತಾನು ಪಡೆದಿದ್ದ ₹ 1676. 85 ಕೋಟಿ ಸಾಲಕ್ಕೆ ಪ್ರತಿಯಾಗಿ 2011–12 ಮತ್ತು 2012–13ನೇ ಸಾಲಿನಲ್ಲಿ ತನ್ನ 11 ಕಟ್ಟಡಗಳನ್ನು ಅಡಮಾನ ಇಟ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 245 ಕೋಟಿ ಸಾಲ ತೀರಿಸಲಾಗಿದ್ದು, ಎರಡು ಕಟ್ಟಡಗಳನ್ನು ಋಣಮುಕ್ತ ಮಾಡಲಾಗುತ್ತಿದೆ.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಅವರಿಗೆ ಹುಡ್ಕೊ ಅಧಿಕಾರಿಗಳು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ಮುಖ್ಯಮಂತ್ರಿ ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಈ ಹಸ್ತಾಂತರ ನಡೆಯಲಿದೆ.<br /> <br /> ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಮೇಯೊ ಹಾಲ್, ಕೆಂಪೇಗೌಡ ಮ್ಯೂಸಿಯಂ, ವೆಸ್ಟರ್ನ್ ರೇಜರ್್ಸ ಆಫೀಸ್, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಮಾರುಕಟ್ಟೆ ಹಾಗೂ ಟ್ಯಾನರಿ ರಸ್ತೆ ವಧಾಗಾರವನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು.<br /> <br /> ಮೇಯೊಹಾಲ್ ನಿರ್ಮಾಣವಾದ ಮೇಲೆ (ಉದ್ಘಾಟನೆ: 1883 ಜೂನ್ 6) ಈ ಕಟ್ಟಡವೇ ಬೆಂಗಳೂರು ಪಾಲಿಕೆ ಕೇಂದ್ರ ಕಚೇರಿ ಆಗಿತ್ತು. ಕೌನ್ಸಿಲ್ ಸಭೆ ಸಹ ಇಲ್ಲಿಯೇ ನಡೆಯುತ್ತಿತ್ತು. 1950ರ ದಶಕದಲ್ಲಿ ರಿಜಿಸ್ಟರ್ಡ್ ಮದುವೆಗಳ ತಾಣವಾಗಿ ಅದು ಹೆಸರು ಮಾಡಿತ್ತು. ಅದೇ ಮೇಯೊಹಾಲ್ನ ಮೊದಲ ಮಹಡಿಯಲ್ಲಿ ಕೆಂಪೇಗೌಡ ಮ್ಯೂಸಿಯಂ ಇದೆ.<br /> <br /> ‘ಮೇಯೊಹಾಲ್ ಮತ್ತು ಕೆಂಪೇಗೌಡ ಮ್ಯೂಸಿಯಂ ಎರಡೂ ನಗರದ ಹೆಮ್ಮೆಯ ಪಾರಂಪರಿಕ ತಾಣಗಳು. ಅವುಗಳನ್ನು ಅಡಮಾನ ಇಟ್ಟಿದ್ದು ಮುಖ್ಯಮಂತ್ರಿ ಅವರಿಗೆ ತುಂಬಾ ನೋವು ತರಿಸಿತ್ತು. ಅವರ ಸೂಚನೆ ಮೇರೆಗೆ ನಾವು ಸತತ ಪ್ರಯತ್ನ ಹಾಕಿ, ಸಾಲದ ಕಂತು ತೀರಿಸಿ ಈಗ ಆ ಕಟ್ಟಡಗಳನ್ನು ಮತ್ತೆ ನಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು.<br /> <br /> ‘ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಂತ–ಹಂತವಾಗಿ ಉಳಿದ ಕಟ್ಟಡಗಳನ್ನೂ ಋಣಮುಕ್ತ ಮಾಡಲಾಗುವುದು’ ಎಂದು ಅವರು ಹೇಳುತ್ತಾರೆ.<br /> <br /> ‘ಕಳೆದ 136 ದಿನಗಳಲ್ಲಿ ₹ 315 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಸಾಲದ ವಾರ್ಷಿಕ ಕಂತು ತುಂಬಿದ್ದಲ್ಲದೆ ಮುಂದಿನ ಹಣಕಾಸು ವರ್ಷದ ಕಂತಿನಲ್ಲೂ ₹ 98 ಕೋಟಿ ಈಗಲೇ ತುಂಬಿದ್ದೇವೆ. ಇದರಿಂದ ₹ 5.88 ಕೋಟಿ ಬಡ್ಡಿ ಉಳಿತಾಯವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈ ಹಿಂದೆ ಸಾಲ ಪಡೆಯಲು ಅಡಮಾನ ಇಟ್ಟಿದ್ದ 11 ಕಟ್ಟಡಗಳಲ್ಲಿ ಎರಡು ಕಟ್ಟಡಗಳನ್ನು ಶನಿವಾರ ಋಣಮುಕ್ತ ಮಾಡಲಾಗುತ್ತಿದೆ.<br /> <br /> ಮೇಯೊ ಹಾಲ್ ಮತ್ತು ಕೆಂಪೇಗೌಡ ಮ್ಯೂಸಿಯಂ ಆ ಎರಡು ಕಟ್ಟಡಗಳಾಗಿವೆ. ಬಿಬಿಎಂಪಿ ತಾನು ಪಡೆದಿದ್ದ ₹ 1676. 85 ಕೋಟಿ ಸಾಲಕ್ಕೆ ಪ್ರತಿಯಾಗಿ 2011–12 ಮತ್ತು 2012–13ನೇ ಸಾಲಿನಲ್ಲಿ ತನ್ನ 11 ಕಟ್ಟಡಗಳನ್ನು ಅಡಮಾನ ಇಟ್ಟಿತ್ತು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ₹ 245 ಕೋಟಿ ಸಾಲ ತೀರಿಸಲಾಗಿದ್ದು, ಎರಡು ಕಟ್ಟಡಗಳನ್ನು ಋಣಮುಕ್ತ ಮಾಡಲಾಗುತ್ತಿದೆ.<br /> <br /> ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ಮೇಯರ್ ಬಿ.ಎನ್. ಮಂಜುನಾಥ್ ರೆಡ್ಡಿ ಅವರಿಗೆ ಹುಡ್ಕೊ ಅಧಿಕಾರಿಗಳು ಕಟ್ಟಡಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಹಸ್ತಾಂತರ ಮಾಡಲಿದ್ದಾರೆ. ಮುಖ್ಯಮಂತ್ರಿ ಅವರ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಈ ಹಸ್ತಾಂತರ ನಡೆಯಲಿದೆ.<br /> <br /> ಕೆ.ಆರ್. ಮಾರುಕಟ್ಟೆ, ಮಲ್ಲೇಶ್ವರ ಮಾರುಕಟ್ಟೆ, ದಾಸಪ್ಪ ಆಸ್ಪತ್ರೆ, ಜಾನ್ಸನ್ ಮಾರುಕಟ್ಟೆ, ಪಬ್ಲಿಕ್ ಯುಟಿಲಿಟಿ ಬಿಲ್ಡಿಂಗ್, ಮೇಯೊ ಹಾಲ್, ಕೆಂಪೇಗೌಡ ಮ್ಯೂಸಿಯಂ, ವೆಸ್ಟರ್ನ್ ರೇಜರ್್ಸ ಆಫೀಸ್, ಕಲಾಸಿಪಾಳ್ಯ ಮಾರುಕಟ್ಟೆ, ರಾಜಾಜಿನಗರ ಮಾರುಕಟ್ಟೆ ಹಾಗೂ ಟ್ಯಾನರಿ ರಸ್ತೆ ವಧಾಗಾರವನ್ನು ಅಡಮಾನ ಇಟ್ಟು ಸಾಲ ಪಡೆಯಲಾಗಿತ್ತು.<br /> <br /> ಮೇಯೊಹಾಲ್ ನಿರ್ಮಾಣವಾದ ಮೇಲೆ (ಉದ್ಘಾಟನೆ: 1883 ಜೂನ್ 6) ಈ ಕಟ್ಟಡವೇ ಬೆಂಗಳೂರು ಪಾಲಿಕೆ ಕೇಂದ್ರ ಕಚೇರಿ ಆಗಿತ್ತು. ಕೌನ್ಸಿಲ್ ಸಭೆ ಸಹ ಇಲ್ಲಿಯೇ ನಡೆಯುತ್ತಿತ್ತು. 1950ರ ದಶಕದಲ್ಲಿ ರಿಜಿಸ್ಟರ್ಡ್ ಮದುವೆಗಳ ತಾಣವಾಗಿ ಅದು ಹೆಸರು ಮಾಡಿತ್ತು. ಅದೇ ಮೇಯೊಹಾಲ್ನ ಮೊದಲ ಮಹಡಿಯಲ್ಲಿ ಕೆಂಪೇಗೌಡ ಮ್ಯೂಸಿಯಂ ಇದೆ.<br /> <br /> ‘ಮೇಯೊಹಾಲ್ ಮತ್ತು ಕೆಂಪೇಗೌಡ ಮ್ಯೂಸಿಯಂ ಎರಡೂ ನಗರದ ಹೆಮ್ಮೆಯ ಪಾರಂಪರಿಕ ತಾಣಗಳು. ಅವುಗಳನ್ನು ಅಡಮಾನ ಇಟ್ಟಿದ್ದು ಮುಖ್ಯಮಂತ್ರಿ ಅವರಿಗೆ ತುಂಬಾ ನೋವು ತರಿಸಿತ್ತು. ಅವರ ಸೂಚನೆ ಮೇರೆಗೆ ನಾವು ಸತತ ಪ್ರಯತ್ನ ಹಾಕಿ, ಸಾಲದ ಕಂತು ತೀರಿಸಿ ಈಗ ಆ ಕಟ್ಟಡಗಳನ್ನು ಮತ್ತೆ ನಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳುತ್ತಿದ್ದೇವೆ’ ಎನ್ನುತ್ತಾರೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು.<br /> <br /> ‘ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದ್ದು, ಹಂತ–ಹಂತವಾಗಿ ಉಳಿದ ಕಟ್ಟಡಗಳನ್ನೂ ಋಣಮುಕ್ತ ಮಾಡಲಾಗುವುದು’ ಎಂದು ಅವರು ಹೇಳುತ್ತಾರೆ.<br /> <br /> ‘ಕಳೆದ 136 ದಿನಗಳಲ್ಲಿ ₹ 315 ಕೋಟಿ ತೆರಿಗೆ ಸಂಗ್ರಹ ಮಾಡಲಾಗಿದೆ. ಸಾಲದ ವಾರ್ಷಿಕ ಕಂತು ತುಂಬಿದ್ದಲ್ಲದೆ ಮುಂದಿನ ಹಣಕಾಸು ವರ್ಷದ ಕಂತಿನಲ್ಲೂ ₹ 98 ಕೋಟಿ ಈಗಲೇ ತುಂಬಿದ್ದೇವೆ. ಇದರಿಂದ ₹ 5.88 ಕೋಟಿ ಬಡ್ಡಿ ಉಳಿತಾಯವಾಗಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>