<p><strong>ನವದೆಹಲಿ (ಪಿಟಿಐ): </strong>ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರು ಸೋಮವಾರ ನಡೆದ ಸಂಸದೀಯ ಸಮಿತಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದು ಇತರ ಸದಸ್ಯರ ಅಸಮಾಧಾನಕ್ಕೆ ಕಾರಣರಾದರು.<br /> <br /> ಚೆನ್ನೈ ಪ್ರವಾಹ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಮಹರ್ಷಿ ಅವರು ಚರ್ಚೆಯ ನಡುವೆಯೇ ಎದ್ದು ಹೋದರು. ಇದನ್ನು ಪ್ರತಿಭಟಿಸಿ ಟಿಎಂಸಿಯ ಇಬ್ಬರು ಸಂಸದರು ಕೂಡಾ ಸಭೆಯಿಂದ ಹೊರನಡೆದರು.<br /> <br /> ಸಂಸದೀಯ ಸಮಿತಿ ಮುಖ್ಯಸ್ಥ ಮತ್ತು ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಎಂ.ಪಿ. ಭಟ್ಟಾಚಾರ್ಯ ಅವರು ಮಹರ್ಷಿ ಅವರನ್ನು ಮತ್ತೆ ಕರೆದರಲ್ಲದೆ, ಮುಂದಿನ ದಿನಗಳಲ್ಲಿ ಈ ವರ್ತನೆ ಪುನರಾವರ್ತಿಸದಂತೆ ಸೂಚಿಸಿದ್ದಾರೆ.<br /> <br /> ಆದರೆ ಮಹರ್ಷಿ ಅವರ ನಡೆಯನ್ನು ಪ್ರತಿಭಟಿಸಿ ಆ ವೇಳೆಗಾಗಲೇ ಹೆಚ್ಚಿನ ಸದಸ್ಯರು ಸಭೆಯಿಂದ ಹೊರನಡೆದಿದ್ದರು. ಈ ಕಾರಣ ಸಭೆಯನ್ನು ಮುಂದೂಡಲಾಯಿತು.<br /> <br /> ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯನ್ ಅವರು ಈ ವಿವಾದದ ಬಗ್ಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಗೃಹ ಕಾರ್ಯದರ್ಶಿಯವರು ಸಂಸದೀಯ ಸಮಿತಿಯ ಎರಡು ಸಭೆಗಳಿಗೆ ಬಂದಿರಲಿಲ್ಲ. ಈ ಬಾರಿ ಕೇವಲ 30 ನಿಮಿಷ ಮಾತ್ರ ಸಭೆಯಲ್ಲಿ ಪಾಲ್ಗೊಂಡರು’ ಎಂದು ‘ಟ್ವೀಟ್’ ಮಾಡಿದ್ದಾರೆ.<br /> <br /> ಸೋಮವಾರ ನಡೆದ ಸಭೆಯಲ್ಲಿ ಪಠಾಣ್ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿ ಘಟನೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಈ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿರುವುದರಿಂದ ಗೃಹ ಸಚಿವಾಲಯ ಇನ್ನಷ್ಟು ಕಾಲಾವಕಾಶ ಕೇಳಿಕೊಂಡಿತ್ತು. ಆದ್ದರಿಂದ ವಿಷಯವನ್ನು ಬದಲಿಸಿ, ಚೆನ್ನೈ ಪ್ರವಾಹದ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿತ್ತು.<br /> <br /> ಮಹರ್ಷಿ ಅವರು ಚೆನ್ನೈ ಪ್ರವಾಹಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಸಭೆಯ ಮುಂದಿಟ್ಟರು. ಆ ಬಳಿಕ ತಮಿಳುನಾಡು ಸರ್ಕಾರದ ಪ್ರತಿನಿಧಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಆದರೆ ಆ ವೇಳೆಗಾಗಲೇ ಮಹರ್ಷಿ ಸಭೆಯಿಂದ ಹೊರನಡೆದಿದ್ದರು.<br /> <br /> ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಎಂನ ಸೀತಾರಾಂ ಯೆಚೂರಿ ಅವರೂ ಮಹರ್ಷಿ ಕ್ರಮವನ್ನು ಟೀಕಿಸಿದರು.</p>.<p>‘ನಾವು ಗಂಭೀರ ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗ ಅವರು ಹೊರನಡೆದರು. ಇದು ಯಾವ ರೀತಿಯ ವರ್ತನೆ’ ಎಂದು ಖರ್ಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಕೇಂದ್ರ ಗೃಹ ಕಾರ್ಯದರ್ಶಿ ರಾಜೀವ್ ಮಹರ್ಷಿ ಅವರು ಸೋಮವಾರ ನಡೆದ ಸಂಸದೀಯ ಸಮಿತಿ ಸಭೆಯಿಂದ ಅರ್ಧದಲ್ಲೇ ಹೊರ ನಡೆದು ಇತರ ಸದಸ್ಯರ ಅಸಮಾಧಾನಕ್ಕೆ ಕಾರಣರಾದರು.<br /> <br /> ಚೆನ್ನೈ ಪ್ರವಾಹ ಒಳಗೊಂಡಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಮಹರ್ಷಿ ಅವರು ಚರ್ಚೆಯ ನಡುವೆಯೇ ಎದ್ದು ಹೋದರು. ಇದನ್ನು ಪ್ರತಿಭಟಿಸಿ ಟಿಎಂಸಿಯ ಇಬ್ಬರು ಸಂಸದರು ಕೂಡಾ ಸಭೆಯಿಂದ ಹೊರನಡೆದರು.<br /> <br /> ಸಂಸದೀಯ ಸಮಿತಿ ಮುಖ್ಯಸ್ಥ ಮತ್ತು ಕಾಂಗ್ರೆಸ್ನ ರಾಜ್ಯಸಭಾ ಸದಸ್ಯ ಎಂ.ಪಿ. ಭಟ್ಟಾಚಾರ್ಯ ಅವರು ಮಹರ್ಷಿ ಅವರನ್ನು ಮತ್ತೆ ಕರೆದರಲ್ಲದೆ, ಮುಂದಿನ ದಿನಗಳಲ್ಲಿ ಈ ವರ್ತನೆ ಪುನರಾವರ್ತಿಸದಂತೆ ಸೂಚಿಸಿದ್ದಾರೆ.<br /> <br /> ಆದರೆ ಮಹರ್ಷಿ ಅವರ ನಡೆಯನ್ನು ಪ್ರತಿಭಟಿಸಿ ಆ ವೇಳೆಗಾಗಲೇ ಹೆಚ್ಚಿನ ಸದಸ್ಯರು ಸಭೆಯಿಂದ ಹೊರನಡೆದಿದ್ದರು. ಈ ಕಾರಣ ಸಭೆಯನ್ನು ಮುಂದೂಡಲಾಯಿತು.<br /> <br /> ಟಿಎಂಸಿ ಸದಸ್ಯ ಡೆರೆಕ್ ಒಬ್ರಿಯನ್ ಅವರು ಈ ವಿವಾದದ ಬಗ್ಗೆ ಬಹಿರಂಗವಾಗಿ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ‘ಗೃಹ ಕಾರ್ಯದರ್ಶಿಯವರು ಸಂಸದೀಯ ಸಮಿತಿಯ ಎರಡು ಸಭೆಗಳಿಗೆ ಬಂದಿರಲಿಲ್ಲ. ಈ ಬಾರಿ ಕೇವಲ 30 ನಿಮಿಷ ಮಾತ್ರ ಸಭೆಯಲ್ಲಿ ಪಾಲ್ಗೊಂಡರು’ ಎಂದು ‘ಟ್ವೀಟ್’ ಮಾಡಿದ್ದಾರೆ.<br /> <br /> ಸೋಮವಾರ ನಡೆದ ಸಭೆಯಲ್ಲಿ ಪಠಾಣ್ಕೋಟ್ ವಾಯು ನೆಲೆ ಮೇಲಿನ ಉಗ್ರರ ದಾಳಿ ಘಟನೆ ಬಗ್ಗೆ ಚರ್ಚೆ ನಡೆಯಬೇಕಿತ್ತು. ಆದರೆ ಈ ಘಟನೆ ಕುರಿತು ಇನ್ನೂ ತನಿಖೆ ನಡೆಯುತ್ತಿರುವುದರಿಂದ ಗೃಹ ಸಚಿವಾಲಯ ಇನ್ನಷ್ಟು ಕಾಲಾವಕಾಶ ಕೇಳಿಕೊಂಡಿತ್ತು. ಆದ್ದರಿಂದ ವಿಷಯವನ್ನು ಬದಲಿಸಿ, ಚೆನ್ನೈ ಪ್ರವಾಹದ ಬಗ್ಗೆ ಚರ್ಚಿಸಲು ನಿರ್ಧರಿಸಲಾಗಿತ್ತು.<br /> <br /> ಮಹರ್ಷಿ ಅವರು ಚೆನ್ನೈ ಪ್ರವಾಹಕ್ಕೆ ಸಂಬಂಧಿಸಿದಂತೆ ಕೆಲವು ವಿವರಗಳನ್ನು ಸಭೆಯ ಮುಂದಿಟ್ಟರು. ಆ ಬಳಿಕ ತಮಿಳುನಾಡು ಸರ್ಕಾರದ ಪ್ರತಿನಿಧಿ ಪರಿಹಾರ ಮತ್ತು ಪುನರ್ವಸತಿ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಆದರೆ ಆ ವೇಳೆಗಾಗಲೇ ಮಹರ್ಷಿ ಸಭೆಯಿಂದ ಹೊರನಡೆದಿದ್ದರು.<br /> <br /> ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಪಿಎಂನ ಸೀತಾರಾಂ ಯೆಚೂರಿ ಅವರೂ ಮಹರ್ಷಿ ಕ್ರಮವನ್ನು ಟೀಕಿಸಿದರು.</p>.<p>‘ನಾವು ಗಂಭೀರ ಚರ್ಚೆಯಲ್ಲಿ ಪಾಲ್ಗೊಂಡಿದ್ದಾಗ ಅವರು ಹೊರನಡೆದರು. ಇದು ಯಾವ ರೀತಿಯ ವರ್ತನೆ’ ಎಂದು ಖರ್ಗೆ ಹೇಳಿದ್ದಾಗಿ ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>