<p>ಹರಿವಂಶ್ರಾಯ್ ಬಚ್ಚನ್ ಅವರ ಕಾವ್ಯ ಆಧಾರಿತ ಅಲ್ಬಂಗೆ ಧ್ವನಿ ನೀಡುತ್ತಿರುವ ಅಮಿತಾಬ್ ಬಚ್ಚನ್ ತಮ್ಮ ತಂದೆಯನ್ನು ಬಹಳ `ಮಿಸ್~ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.<br /> <br /> `ಸಿಲ್ಸಿಲಾ~ ಚಿತ್ರದ ಸಂದರ್ಭದಲ್ಲಿಯೂ ಹರಿವಂಶ್ ಅವರ ಸಾಹಿತ್ಯಕ್ಕೆ ಅಮಿತಾಬ್ ಧ್ವನಿಯಾಗಿದ್ದರು. ಆದರೆ ಅದಕ್ಕೆ ಭಾವದುಂಬಲು ಅಪ್ಪ ಜೊತೆಗಿದ್ದರು. ಕಾವ್ಯವನ್ನು ಪ್ರೀತಿಯಿಂದ ಓದಿ ಹೇಳುತ್ತಿದ್ದರು. ಅರ್ಥೈಸಿಕೊಳ್ಳಲು ವಿವರಣೆ ನೀಡುತ್ತಿದ್ದರು. <br /> <br /> ಭಾವದೆಳೆಯನ್ನು ಅರ್ಥ ಮಾಡಿಕೊಂಡಾಗಲೇ ಜೀವದುಂಬುವ ಸಾಧ್ಯತೆ ಇದೆ. ಈಗ ಅವರ ಕವಿತೆಗಳ ಆಲ್ಬಂ `ಮಧುಶಾಲಾ~ ಸಿದ್ಧವಾಗುತ್ತಿದೆ. ಈ ಕ್ಷಣದಲ್ಲಿ ಅಪ್ಪ ತುಂಬ ನೆನಪಾಗುತ್ತಾರೆ. ಅವರ ಧ್ವನಿ, ಅವರ ವಿಚಾರಗಳ ಬಗ್ಗೆ ನೆನಪಿಸಿಕೊಂಡಾಗ ಮನಸ್ಸು ಆರ್ದ್ರಗೊಳ್ಳುತ್ತದೆ.<br /> <br /> ನಾನು ಆಗಾಗ ಮತ್ತೆ ಮತ್ತೆ ಅಪ್ಪನ `ರುಬಾಯಿ~ಗಳನ್ನು ಹೇಳಿಕೊಳ್ಳುತ್ತೇನೆ. ಪ್ರತಿಯೊಂದು ಶಬ್ದವೂ ಅಪ್ಪ ಹೇಳಿದಂತೆಯೇ ಹೇಳಲು ಯತ್ನಿಸುತ್ತೇನೆ. ಅವರು ಓದಿದ್ದು ನೆನ್ನೆ -ಮೊನ್ನೆಯೋ ಎಂಬಂತಿದೆ. ಅದಿನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ. <br /> <br /> ನಾಲ್ಕು ಸಾಲುಗಳ ಈ ಪದ್ಯ ಅಪ್ಪನ ನೆನಪು ಗಾಢವಾಗಿ ಕಾಡುವಂತೆ ಮಾಡಿವೆ. ಒಮ್ಮಮ್ಮೆ ಹನಿಗಣ್ಣಾದರೂ ಕೆನ್ನೆಗಿಳಿಯದ ಕಂಬನಿ ಭಾವತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೆಲ್ಲ ಬಿಗ್ಬಿ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿವಂಶ್ರಾಯ್ ಬಚ್ಚನ್ ಅವರ ಕಾವ್ಯ ಆಧಾರಿತ ಅಲ್ಬಂಗೆ ಧ್ವನಿ ನೀಡುತ್ತಿರುವ ಅಮಿತಾಬ್ ಬಚ್ಚನ್ ತಮ್ಮ ತಂದೆಯನ್ನು ಬಹಳ `ಮಿಸ್~ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ.<br /> <br /> `ಸಿಲ್ಸಿಲಾ~ ಚಿತ್ರದ ಸಂದರ್ಭದಲ್ಲಿಯೂ ಹರಿವಂಶ್ ಅವರ ಸಾಹಿತ್ಯಕ್ಕೆ ಅಮಿತಾಬ್ ಧ್ವನಿಯಾಗಿದ್ದರು. ಆದರೆ ಅದಕ್ಕೆ ಭಾವದುಂಬಲು ಅಪ್ಪ ಜೊತೆಗಿದ್ದರು. ಕಾವ್ಯವನ್ನು ಪ್ರೀತಿಯಿಂದ ಓದಿ ಹೇಳುತ್ತಿದ್ದರು. ಅರ್ಥೈಸಿಕೊಳ್ಳಲು ವಿವರಣೆ ನೀಡುತ್ತಿದ್ದರು. <br /> <br /> ಭಾವದೆಳೆಯನ್ನು ಅರ್ಥ ಮಾಡಿಕೊಂಡಾಗಲೇ ಜೀವದುಂಬುವ ಸಾಧ್ಯತೆ ಇದೆ. ಈಗ ಅವರ ಕವಿತೆಗಳ ಆಲ್ಬಂ `ಮಧುಶಾಲಾ~ ಸಿದ್ಧವಾಗುತ್ತಿದೆ. ಈ ಕ್ಷಣದಲ್ಲಿ ಅಪ್ಪ ತುಂಬ ನೆನಪಾಗುತ್ತಾರೆ. ಅವರ ಧ್ವನಿ, ಅವರ ವಿಚಾರಗಳ ಬಗ್ಗೆ ನೆನಪಿಸಿಕೊಂಡಾಗ ಮನಸ್ಸು ಆರ್ದ್ರಗೊಳ್ಳುತ್ತದೆ.<br /> <br /> ನಾನು ಆಗಾಗ ಮತ್ತೆ ಮತ್ತೆ ಅಪ್ಪನ `ರುಬಾಯಿ~ಗಳನ್ನು ಹೇಳಿಕೊಳ್ಳುತ್ತೇನೆ. ಪ್ರತಿಯೊಂದು ಶಬ್ದವೂ ಅಪ್ಪ ಹೇಳಿದಂತೆಯೇ ಹೇಳಲು ಯತ್ನಿಸುತ್ತೇನೆ. ಅವರು ಓದಿದ್ದು ನೆನ್ನೆ -ಮೊನ್ನೆಯೋ ಎಂಬಂತಿದೆ. ಅದಿನ್ನೂ ಕಿವಿಯಲ್ಲಿ ಅನುರಣಿಸುತ್ತಿದೆ. <br /> <br /> ನಾಲ್ಕು ಸಾಲುಗಳ ಈ ಪದ್ಯ ಅಪ್ಪನ ನೆನಪು ಗಾಢವಾಗಿ ಕಾಡುವಂತೆ ಮಾಡಿವೆ. ಒಮ್ಮಮ್ಮೆ ಹನಿಗಣ್ಣಾದರೂ ಕೆನ್ನೆಗಿಳಿಯದ ಕಂಬನಿ ಭಾವತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದೆಲ್ಲ ಬಿಗ್ಬಿ ಹೇಳಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>