<p><strong>ಬೆಂಗಳೂರು:</strong> `ಪಕ್ಷದಲ್ಲಿರುವ ಎಲ್ಲರೂ ನನ್ನನ್ನು ಒಪ್ಪಿಕೊಳ್ಳಬೇಕು ಎಂದು ಬಯಸುವುದಿಲ್ಲ. ಆದರೆ ಅವರು ನಾನು ಮಾಡಿರುವ ಕೆಲಸಗಳನ್ನು ಒಪ್ಪಿಕೊಂಡರೆ ಸಾಕು. ರಾಜಕಾರಣವೇ ಹೀಗೆ, ಒಬ್ಬೊಬ್ಬರಿಂದ ಒಂದೊಂದು ಮಾತು ಬರುತ್ತದೆ...~<br /> <br /> - `ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ನಿಮ್ಮನ್ನು ಕೆಳಗಿಳಿಸಲಾಗುತ್ತದೆ ಎನ್ನುವ ಮಾತು ಎಷ್ಟು ನಿಜ~ ಎಂಬ ಸುದ್ದಿಗಾರರ ಪ್ರಶ್ನೆಗೆ ಡಾ.ಜಿ. ಪರಮೇಶ್ವರ್ ಅವರು ನೀಡಿದ ಉತ್ತರ ಇದು. ಪಕ್ಷದ ಕಚೇರಿಯಲ್ಲಿ `ಕೆಪಿಸಿಸಿ ವೃತ್ತಿಪರರ ಘಟಕ~ದ ವೆಬ್ಸೈಟ್ಗೆ ಮಂಗಳವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.<br /> <br /> <strong>ವೆಬ್ಸೈಟ್ಗೆ ಚಾಲನೆ:</strong> ಕೆಪಿಸಿಸಿ ವೃತ್ತಿಪರರ ಘಟಕದ ವೆಬ್ಸೈಟ್ಗೆ (<a href="http://www.kpccpc.com">www.kpccpc.com</a>) ಚಾಲನೆ ನೀಡಿದ ಪರಮೇಶ್ವರ್, `ಪ್ರದೇಶ ಕಾಂಗ್ರೆಸ್ ಸಮಿತಿಗಳ ಪೈಕಿ ವೃತ್ತಿಪರರ ಘಟಕವನ್ನು ಪ್ರಥಮವಾಗಿ ಆರಂಭಿಸಿದ್ದು ಕೆಪಿಸಿಸಿ. ಈ ಘಟಕಕ್ಕೆ ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಆಗುತ್ತದೆ~ ಎಂದು ತಿಳಿಸಿದರು. ಘಟಕದ ಸದಸ್ಯರಾದ ಸುದರ್ಶನ್, ಗಣೇಶ್, ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಪಕ್ಷದಲ್ಲಿರುವ ಎಲ್ಲರೂ ನನ್ನನ್ನು ಒಪ್ಪಿಕೊಳ್ಳಬೇಕು ಎಂದು ಬಯಸುವುದಿಲ್ಲ. ಆದರೆ ಅವರು ನಾನು ಮಾಡಿರುವ ಕೆಲಸಗಳನ್ನು ಒಪ್ಪಿಕೊಂಡರೆ ಸಾಕು. ರಾಜಕಾರಣವೇ ಹೀಗೆ, ಒಬ್ಬೊಬ್ಬರಿಂದ ಒಂದೊಂದು ಮಾತು ಬರುತ್ತದೆ...~<br /> <br /> - `ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ನಿಮ್ಮನ್ನು ಕೆಳಗಿಳಿಸಲಾಗುತ್ತದೆ ಎನ್ನುವ ಮಾತು ಎಷ್ಟು ನಿಜ~ ಎಂಬ ಸುದ್ದಿಗಾರರ ಪ್ರಶ್ನೆಗೆ ಡಾ.ಜಿ. ಪರಮೇಶ್ವರ್ ಅವರು ನೀಡಿದ ಉತ್ತರ ಇದು. ಪಕ್ಷದ ಕಚೇರಿಯಲ್ಲಿ `ಕೆಪಿಸಿಸಿ ವೃತ್ತಿಪರರ ಘಟಕ~ದ ವೆಬ್ಸೈಟ್ಗೆ ಮಂಗಳವಾರ ಚಾಲನೆ ನೀಡಿದ ನಂತರ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.<br /> <br /> <strong>ವೆಬ್ಸೈಟ್ಗೆ ಚಾಲನೆ:</strong> ಕೆಪಿಸಿಸಿ ವೃತ್ತಿಪರರ ಘಟಕದ ವೆಬ್ಸೈಟ್ಗೆ (<a href="http://www.kpccpc.com">www.kpccpc.com</a>) ಚಾಲನೆ ನೀಡಿದ ಪರಮೇಶ್ವರ್, `ಪ್ರದೇಶ ಕಾಂಗ್ರೆಸ್ ಸಮಿತಿಗಳ ಪೈಕಿ ವೃತ್ತಿಪರರ ಘಟಕವನ್ನು ಪ್ರಥಮವಾಗಿ ಆರಂಭಿಸಿದ್ದು ಕೆಪಿಸಿಸಿ. ಈ ಘಟಕಕ್ಕೆ ಶೀಘ್ರದಲ್ಲೇ ಪದಾಧಿಕಾರಿಗಳ ನೇಮಕ ಆಗುತ್ತದೆ~ ಎಂದು ತಿಳಿಸಿದರು. ಘಟಕದ ಸದಸ್ಯರಾದ ಸುದರ್ಶನ್, ಗಣೇಶ್, ಕೆಪಿಸಿಸಿ ವಕ್ತಾರ ಬಸವರಾಜ ರಾಯರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>