<p><strong>ಬೆಂಗಳೂರು:</strong> `ನಾನು ದುರ್ಬಲ ಸಿಎಂ ಅಲ್ಲ. ನನಗೂ ಗೊತ್ತು ಹೇಗೆ ಕೆಲಸ ಮಾಡ್ಬೇಕು ಅಂತ ಹುಷಾರ್...!~<br /> - ಹೀಗೆ ಗುಡುಗಿದ್ದು ಬೇರೆ ಯಾರೂ ಅಲ್ಲ, ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.<br /> <br /> ಸಚಿವ ಸಂಪುಟ ಸಭೆ ನಂತರ ಎಲ್ಲ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ ಯಡಿಯೂರಪ್ಪ ಬೆಂಬಲಿಗ ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.<br /> <br /> `ನಾನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ಅಧ್ಯಕ್ಷ ಕೂಡ ಆಗಿದ್ದೆ. ಮುಖ್ಯಮಂತ್ರಿಯಾಗಿ ಏನೆಲ್ಲ ಕೆಲಸ ಮಾಡಬೇಕು ಎಂಬುದು ನನಗೂ ಗೊತ್ತಿದೆ. ಸಭೆಯಲ್ಲಿ ನಿಲ್ಲಿಸಿಕೊಂಡು ಅವಮಾನ ಮಾಡುವ ಪರಿ ಸರಿ ಅಲ್ಲ~ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.<br /> <br /> ಬೀಳಗಿಯಲ್ಲಿ ಬುಧವಾರ ಸಚಿವ ಮುರುಗೇಶ ನಿರಾಣಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ-ಹೊಗಳಿದ್ದಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ತಮ್ಮನ್ನು ಕಡೆಗಣಿಸಿದ್ದು ಸೇರಿದಂತೆ ಸಚಿವರ ಇತ್ತೀಚಿನ ಕೆಲವು ಹೇಳಿಕೆಗಳು ಮುಖ್ಯಮಂತ್ರಿಯವರನ್ನು ಕೆರಳಿಸಿವೆ ಎಂದು ಗೊತ್ತಾಗಿದೆ.<br /> <br /> `ಯಾರೋ ಒಬ್ಬರು ಮಾತ್ರ ಪಕ್ಷ ಕಟ್ಟಿದರು. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎಂದು ಹೇಳಿಕೊಂಡು ಮುಖ್ಯಮಂತ್ರಿಯನ್ನು ಅವಮಾನ ಮಾಡುವುದು ಸರಿಯಲ್ಲ. ಬಾಯಿಗೆ ಬೀಗ ಹಾಕಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ~ ಎಂದೂ ಸಚಿವರಿಗೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.<br /> <br /> `ಪಕ್ಷದ ಹೈಕಮಾಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂತ ಹೇಳಿದ ಒಂದು ಗಂಟೆಯಲ್ಲಿ ಕೇವಲ ರಾಜೀನಾಮೆ ನೀಡುವುದಲ್ಲ, `ಅನುಗ್ರಹ~ವನ್ನೇ ಖಾಲಿ ಮಾಡುತ್ತೇನೆ. ಯಾವ ಪರಿಸ್ಥಿತಿಯಲ್ಲಿ ನಾನು ಸಿಎಂ ಆಗಿದ್ದು ಎಂಬುದನ್ನು ಎಲ್ಲರೂ ಅರಿಯಬೇಕು. ಅವಮಾನ ಮಾಡುವ ಹಾಗೆ ಹೇಳಿಕೆ ನೀಡಿದರೆ ಅದನ್ನು ಸಹಿಸುವುದಿಲ್ಲ. ನನಗೂ ಶಕ್ತಿ ಇದ್ದು, ಅದನ್ನು ತೋರಿಸಬೇಕಾಗುತ್ತದೆ~ ಎಂದು ಕಟುಶಬ್ದಗಳಲ್ಲಿ ಆಕ್ಷೇಪಿಸಿದರು.<br /> <br /> ಸದಾನಂದ ಗೌಡರ ಆಕ್ರೋಶದಿಂದ ವಿಚಲಿತಗೊಂಡ ಯಡಿಯೂರಪ್ಪ ಬೆಂಬಲಿಗ ಸಚಿವರು ಮೌನಕ್ಕೆ ಶರಣಾಗಿದ್ದರು. ಒಂದು ಹಂತದಲ್ಲಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು `ಬಳ್ಳಾರಿಯಲ್ಲಿ ನಟಿ ಹೇಮಾಮಾಲಿನಿ ಅವರಿಗೆ ಪರಿಚಯಿಸುವಾಗ ನನ್ನನ್ನು ನೀವು ಡೇಂಜರಸ್ ಮಂತ್ರಿ ಅಂದು ಅವಮಾನ ಮಾಡಲಿಲ್ಲವೇ? ಅದು ಸರಿಯಾ~ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.<br /> <br /> ಇದಕ್ಕೆ ಸದಾನಂದ ಗೌಡರು `ತಮಾಷೆ ಮಾಡುವುದು ಬೇಡ ಅಂದರೆ ಬೇಡ. ನಾನು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲು ಉಗ್ರಗಾಮಿ ಗುಂಪಿನ ನಾಯಕ ಅನ್ನುತ್ತೇನೆ. ಕಾರಣ ಅವರ ಬಳಿ ಯಾವಾಗಲೂ 8-10 ಮಂದಿ ಶಾಸಕರು ಇರುತ್ತಾರೆ. ಆದರೆ, ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಲಿಲ್ಲ~ ಎಂದು ತಿರುಗೇಟು ನೀಡಿದರು ಎನ್ನಲಾಗಿದೆ.<br /> <br /> ಇದರ ನಂತರ ಸಚಿವರಾದ ಆರ್.ಅಶೋಕ, ಗೋವಿಂದ ಕಾರಜೋಳ, ಸಿ.ಪಿ.ಯೋಗೇಶ್ವರ್, ಎಸ್.ಎ.ರಾಮದಾಸ್, ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲ ಸಚಿವರು `ಮುಖ್ಯಮಂತ್ರಿ ವಿರುದ್ಧ ಯಾವುದೇ ಸಚಿವರು ಹೇಳಿಕೆ ನೀಡುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು ಎಂದು ಗೊತ್ತಾಗಿದೆ.<br /> <br /> ಸಚಿವರು ಪರಸ್ಪರ ಮಾತನಾಡಿಕೊಂಡು, ಮುಖ್ಯಮಂತ್ರಿಗೆ ಅವಮಾನ ಆಗುವ ಹಾಗೆ ಪ್ರತಿನಿತ್ಯ ಹೇಳಿಕೆ ನೀಡುವುದು ಸರಿಯಲ್ಲ. ಇದು ಪಕ್ಷ ಮತ್ತು ಸರ್ಕಾರಕ್ಕೂ ಅಗೌರವ ಸೂಚಿಸಿದಂತೆ. ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.<br /> <br /> ಹೀಗೆ ಎಲ್ಲರೂ ಚರ್ಚೆಯಲ್ಲಿ ಮಗ್ನರಾಗಿದ್ದಾಗ ಸಚಿವೆ ಶೋಭಾ ಕರಂದ್ಲಾಜೆ ಮಧ್ಯಪ್ರವೇಶ ಮಾಡಿ `ಈ ವಿಷಯವನ್ನು ಇಲ್ಲಿ ಚರ್ಚಿಸುವುದು ಬೇಡ. ಪತ್ರಿಕೆಗಳಲ್ಲಿ ನಾಳೆ ದೊಡ್ಡದಾಗಿ ಇದೇ ಸುದ್ದಿ ಬರುತ್ತದೆ~ ಎಂದು ಎಚ್ಚರಿಸಿದರು ಎನ್ನಲಾಗಿದೆ.<br /> <br /> ಇದಕ್ಕೆ ಸದಾನಂದ ಗೌಡರು ಉತ್ತರಿಸಿ, `ಬಂದರೆ ಬರಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ~ ಎಂದು ತಿರುಗೇಟು ನೀಡಿದರು ಎಂದು ಗೊತ್ತಾಗಿದೆ.<br /> <br /> <strong>ಸಂಪುಟದಿಂದ ಕೈಬಿಡಿ: </strong>ಒಂದು ಹಂತದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು `ಯಾರು ತಮ್ಮ ವಿರುದ್ಧ ಹೇಳಿಕೆ ನೀಡುತ್ತಾರೊ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಿ~ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ನಾನು ದುರ್ಬಲ ಸಿಎಂ ಅಲ್ಲ. ನನಗೂ ಗೊತ್ತು ಹೇಗೆ ಕೆಲಸ ಮಾಡ್ಬೇಕು ಅಂತ ಹುಷಾರ್...!~<br /> - ಹೀಗೆ ಗುಡುಗಿದ್ದು ಬೇರೆ ಯಾರೂ ಅಲ್ಲ, ರಾಜ್ಯದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ.<br /> <br /> ಸಚಿವ ಸಂಪುಟ ಸಭೆ ನಂತರ ಎಲ್ಲ ಅಧಿಕಾರಿಗಳನ್ನು ಹೊರಗೆ ಕಳುಹಿಸಿದ ಮುಖ್ಯಮಂತ್ರಿ ಸದಾನಂದ ಗೌಡ ತಮ್ಮ ವಿರುದ್ಧ ಹೇಳಿಕೆ ನೀಡುತ್ತಿರುವ ಯಡಿಯೂರಪ್ಪ ಬೆಂಬಲಿಗ ಸಚಿವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಗುರುವಾರ ನಡೆದಿದೆ.<br /> <br /> `ನಾನೂ ಪಕ್ಷಕ್ಕಾಗಿ ದುಡಿದಿದ್ದೇನೆ. ಪಕ್ಷದ ಅಧ್ಯಕ್ಷ ಕೂಡ ಆಗಿದ್ದೆ. ಮುಖ್ಯಮಂತ್ರಿಯಾಗಿ ಏನೆಲ್ಲ ಕೆಲಸ ಮಾಡಬೇಕು ಎಂಬುದು ನನಗೂ ಗೊತ್ತಿದೆ. ಸಭೆಯಲ್ಲಿ ನಿಲ್ಲಿಸಿಕೊಂಡು ಅವಮಾನ ಮಾಡುವ ಪರಿ ಸರಿ ಅಲ್ಲ~ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.<br /> <br /> ಬೀಳಗಿಯಲ್ಲಿ ಬುಧವಾರ ಸಚಿವ ಮುರುಗೇಶ ನಿರಾಣಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಹಾಡಿ-ಹೊಗಳಿದ್ದಲ್ಲದೆ ಶಿಷ್ಟಾಚಾರ ಉಲ್ಲಂಘಿಸಿ ತಮ್ಮನ್ನು ಕಡೆಗಣಿಸಿದ್ದು ಸೇರಿದಂತೆ ಸಚಿವರ ಇತ್ತೀಚಿನ ಕೆಲವು ಹೇಳಿಕೆಗಳು ಮುಖ್ಯಮಂತ್ರಿಯವರನ್ನು ಕೆರಳಿಸಿವೆ ಎಂದು ಗೊತ್ತಾಗಿದೆ.<br /> <br /> `ಯಾರೋ ಒಬ್ಬರು ಮಾತ್ರ ಪಕ್ಷ ಕಟ್ಟಿದರು. ಅವರಿಂದಲೇ ಪಕ್ಷ ಅಧಿಕಾರಕ್ಕೆ ಬಂತು ಎಂದು ಹೇಳಿಕೊಂಡು ಮುಖ್ಯಮಂತ್ರಿಯನ್ನು ಅವಮಾನ ಮಾಡುವುದು ಸರಿಯಲ್ಲ. ಬಾಯಿಗೆ ಬೀಗ ಹಾಕಿಕೊಳ್ಳದಿದ್ದರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ~ ಎಂದೂ ಸಚಿವರಿಗೆ ಎಚ್ಚರಿಕೆ ನೀಡಿದರು ಎನ್ನಲಾಗಿದೆ.<br /> <br /> `ಪಕ್ಷದ ಹೈಕಮಾಂಡ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ ಅಂತ ಹೇಳಿದ ಒಂದು ಗಂಟೆಯಲ್ಲಿ ಕೇವಲ ರಾಜೀನಾಮೆ ನೀಡುವುದಲ್ಲ, `ಅನುಗ್ರಹ~ವನ್ನೇ ಖಾಲಿ ಮಾಡುತ್ತೇನೆ. ಯಾವ ಪರಿಸ್ಥಿತಿಯಲ್ಲಿ ನಾನು ಸಿಎಂ ಆಗಿದ್ದು ಎಂಬುದನ್ನು ಎಲ್ಲರೂ ಅರಿಯಬೇಕು. ಅವಮಾನ ಮಾಡುವ ಹಾಗೆ ಹೇಳಿಕೆ ನೀಡಿದರೆ ಅದನ್ನು ಸಹಿಸುವುದಿಲ್ಲ. ನನಗೂ ಶಕ್ತಿ ಇದ್ದು, ಅದನ್ನು ತೋರಿಸಬೇಕಾಗುತ್ತದೆ~ ಎಂದು ಕಟುಶಬ್ದಗಳಲ್ಲಿ ಆಕ್ಷೇಪಿಸಿದರು.<br /> <br /> ಸದಾನಂದ ಗೌಡರ ಆಕ್ರೋಶದಿಂದ ವಿಚಲಿತಗೊಂಡ ಯಡಿಯೂರಪ್ಪ ಬೆಂಬಲಿಗ ಸಚಿವರು ಮೌನಕ್ಕೆ ಶರಣಾಗಿದ್ದರು. ಒಂದು ಹಂತದಲ್ಲಿ ಅಬಕಾರಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು `ಬಳ್ಳಾರಿಯಲ್ಲಿ ನಟಿ ಹೇಮಾಮಾಲಿನಿ ಅವರಿಗೆ ಪರಿಚಯಿಸುವಾಗ ನನ್ನನ್ನು ನೀವು ಡೇಂಜರಸ್ ಮಂತ್ರಿ ಅಂದು ಅವಮಾನ ಮಾಡಲಿಲ್ಲವೇ? ಅದು ಸರಿಯಾ~ ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದರು.<br /> <br /> ಇದಕ್ಕೆ ಸದಾನಂದ ಗೌಡರು `ತಮಾಷೆ ಮಾಡುವುದು ಬೇಡ ಅಂದರೆ ಬೇಡ. ನಾನು ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲು ಉಗ್ರಗಾಮಿ ಗುಂಪಿನ ನಾಯಕ ಅನ್ನುತ್ತೇನೆ. ಕಾರಣ ಅವರ ಬಳಿ ಯಾವಾಗಲೂ 8-10 ಮಂದಿ ಶಾಸಕರು ಇರುತ್ತಾರೆ. ಆದರೆ, ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಲಿಲ್ಲ~ ಎಂದು ತಿರುಗೇಟು ನೀಡಿದರು ಎನ್ನಲಾಗಿದೆ.<br /> <br /> ಇದರ ನಂತರ ಸಚಿವರಾದ ಆರ್.ಅಶೋಕ, ಗೋವಿಂದ ಕಾರಜೋಳ, ಸಿ.ಪಿ.ಯೋಗೇಶ್ವರ್, ಎಸ್.ಎ.ರಾಮದಾಸ್, ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಎಲ್ಲ ಸಚಿವರು `ಮುಖ್ಯಮಂತ್ರಿ ವಿರುದ್ಧ ಯಾವುದೇ ಸಚಿವರು ಹೇಳಿಕೆ ನೀಡುವುದು ಸರಿಯಲ್ಲ~ ಎಂದು ಅಭಿಪ್ರಾಯಪಟ್ಟರು ಎಂದು ಗೊತ್ತಾಗಿದೆ.<br /> <br /> ಸಚಿವರು ಪರಸ್ಪರ ಮಾತನಾಡಿಕೊಂಡು, ಮುಖ್ಯಮಂತ್ರಿಗೆ ಅವಮಾನ ಆಗುವ ಹಾಗೆ ಪ್ರತಿನಿತ್ಯ ಹೇಳಿಕೆ ನೀಡುವುದು ಸರಿಯಲ್ಲ. ಇದು ಪಕ್ಷ ಮತ್ತು ಸರ್ಕಾರಕ್ಕೂ ಅಗೌರವ ಸೂಚಿಸಿದಂತೆ. ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.<br /> <br /> ಹೀಗೆ ಎಲ್ಲರೂ ಚರ್ಚೆಯಲ್ಲಿ ಮಗ್ನರಾಗಿದ್ದಾಗ ಸಚಿವೆ ಶೋಭಾ ಕರಂದ್ಲಾಜೆ ಮಧ್ಯಪ್ರವೇಶ ಮಾಡಿ `ಈ ವಿಷಯವನ್ನು ಇಲ್ಲಿ ಚರ್ಚಿಸುವುದು ಬೇಡ. ಪತ್ರಿಕೆಗಳಲ್ಲಿ ನಾಳೆ ದೊಡ್ಡದಾಗಿ ಇದೇ ಸುದ್ದಿ ಬರುತ್ತದೆ~ ಎಂದು ಎಚ್ಚರಿಸಿದರು ಎನ್ನಲಾಗಿದೆ.<br /> <br /> ಇದಕ್ಕೆ ಸದಾನಂದ ಗೌಡರು ಉತ್ತರಿಸಿ, `ಬಂದರೆ ಬರಲಿ ಬಿಡಿ. ನಾನೇನೂ ತಪ್ಪು ಮಾತನಾಡುತ್ತಿಲ್ಲ~ ಎಂದು ತಿರುಗೇಟು ನೀಡಿದರು ಎಂದು ಗೊತ್ತಾಗಿದೆ.<br /> <br /> <strong>ಸಂಪುಟದಿಂದ ಕೈಬಿಡಿ: </strong>ಒಂದು ಹಂತದಲ್ಲಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು `ಯಾರು ತಮ್ಮ ವಿರುದ್ಧ ಹೇಳಿಕೆ ನೀಡುತ್ತಾರೊ ಅವರನ್ನು ತಕ್ಷಣವೇ ಸಂಪುಟದಿಂದ ಕೈಬಿಡಿ~ ಎನ್ನುವ ಸಲಹೆ ನೀಡಿದರು ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>