<p>`ಸಂಗೊಳ್ಳಿ ರಾಯಣ್ಣ~ನ ಬಗ್ಗೆ ಮಾತನಾಡಲು ಕುಳಿತ ದರ್ಶನ್ ತಮ್ಮ ಬಗ್ಗೆಯೇ ಹೇಳಿಕೊಂಡರು. ಬೇರೆಯವರು ಬೇಟೆಯಾಡಿ ಬಿಟ್ಟದ್ದನ್ನು ತಿನ್ನಲು ಕಲಿತಿರುವ ನರಿ ತಾವೆನ್ನುವುದು ಅವರ ಬಣ್ಣನೆ. <br /> <br /> `ನಾನು ಚಿತ್ರರಂಗದಲ್ಲಿ ಎಂದಿಗೂ ಸಿಂಹ ಅಥವಾ ಹುಲಿ ಆಗಿರಲೇ ಇಲ್ಲ. ನಾನು ನರಿ ಇದ್ದಂತೆ. ಬೇರೆಯವರು ಬೇಟೆ ಆಡಿ ಬಿಟ್ಟದ್ದನ್ನು ತಿನ್ನಲು ಕಲಿತಿದ್ದೇನೆ!~.<br /> ನಟ ದರ್ಶನ್ ಚಿತ್ರರಂಗದ ತಮ್ಮ ನಡೆಯನ್ನು ಸ್ವವಿಮರ್ಶೆಗೆ ತೊಡಗಿಸಿಕೊಂಡರು. <br /> <br /> ತಾವು ಬೆಳೆದದ್ದೇ ಬೇರೆಯವರು ಮಾಡದೇ ಬಿಟ್ಟ ಪಾತ್ರಗಳನ್ನು ಮಾಡಿದ್ದರಿಂದ ಎಂಬುದು ಅವರ ಮಾತಿನ ಅರ್ಥ. ಅವರ ಈ ಮಾತುಗಳು ಹೊರಬಂದದ್ದು `ಸಂಗೊಳ್ಳಿ ರಾಯಣ್ಣ~ ಚಿತ್ರದ ಸುದ್ದಿಗೋಷ್ಠಿಯಲ್ಲಿ. <br /> <br /> ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ನಾನು ಅರ್ಹನೇ ಎಂಬ ಯೋಚನೆ ನನ್ನನ್ನು ಹಲವು ಬಾರಿ ಕಾಡಿತು. ನಿರ್ಮಾಪಕ ಆನಂದ ಅಪ್ಪುಗೋಳ ಅವರಿಗೆ ಯೋಚಿಸುವಂತೆ ಹಲವು ಬಾರಿ ಹೇಳಿದೆ. ಆದರೆ ಅವರು ಬಿಡಲಿಲ್ಲ. ನೀವೇ ಈ ಪಾತ್ರ ಮಾಡಬೇಕೆಂದು ಹಟ ಮಾಡಿದರು. ತಡವಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ದರ್ಶನ್. ಯುದ್ಧ ಸನ್ನಿವೇಶದ ಚಿತ್ರೀಕರಣಕ್ಕೆ ಕುದುರೆ ಮತ್ತು ಆನೆಗಳನ್ನು ಬಳಸಿಕೊಂಡದ್ದರ ಅನುಭವಗಳನ್ನು ಹಂಚಿಕೊಂಡರು.<br /> <br /> ದೀರ್ಘ ಕಾಲದ ಬಳಿಕ ಚಿತ್ರ ಮುಗಿಸಿದ ಖುಷಿಯಲ್ಲಿದ್ದ ನಿರ್ದೇಶಕ ನಾಗಣ್ಣ ಅವರ ಮಾತುಗಳೂ ದೀರ್ಘವಾಗಿದ್ದವು. ಈಗಿನ ಜನರಿಗೆ ಕಾಣಲು ಸಾಧ್ಯವಾಗದಿದ್ದ ಸಂಗೊಳ್ಳಿ ರಾಯಣ್ಣನನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ತಮ್ಮದು ಎಂದರು. <br /> <br /> ಈಗಿನ ಟ್ರೆಂಡ್ ಬಿಟ್ಟು ಐತಿಹಾಸಿಕ ಚಿತ್ರ ಮಾಡುತ್ತಿರುವುದು ನಾಗಣ್ಣನವರ ಖುಷಿಗೆ ಮತ್ತೊಂದು ಕಾರಣ. ಹೆಚ್ಚು ಬಜೆಟ್ ಬಯಸುವ ಈ ಚಿತ್ರ ಮುಂದೆ ಏನಾಗುವುದೋ ಎಂಬ ಭಯ ಅವರನ್ನು ಕಾಡಿತ್ತಂತೆ. ಆದರೆ ಸಂಗೊಳ್ಳಿ ರಾಯಣ್ಣನ ಪರಮ ಅಭಿಮಾನಿಯಾದ ನಿರ್ಮಾಪಕರು ಧೈರ್ಯ ತುಂಬಿದರಂತೆ. ತಮ್ಮ ಕೊನೆಯ ಪಾತ್ರ ಮುಗಿಸಿ ಡಬ್ಬಿಂಗ್ ಪೂರ್ಣಗೊಳಿಸಿದ ಕರಿಬಸವಯ್ಯ ನಮ್ಮಿಂದಲೂ ದೂರ ಹೋಗಿಬಿಟ್ಟರು ಎಂದು ನಾಗಣ್ಣ ಭಾವುಕರಾದರು. <br /> <br /> ನಟರಾದ ಅವಿನಾಶ್, ರಮೇಶ್ ಭಟ್, ಶಶಿಕುಮಾರ್, ಶಿವಕುಮಾರ್, ನಿರ್ಮಾಪಕಿ ವಿಜಯಲಕ್ಷ್ಮೀ, ವಿತರಕ ಗಂಗರಾಜು ಮಾತಿನ ಮಳೆ ಸುರಿಸಿದರು.<br /> <br /> <strong>ಚೆನ್ನಮ್ಮನ ಆಶೀರ್ವಾದ</strong></p>.<p>ರಾಜ್ಯಸಭೆಗೆ ಆಯ್ಕೆಯಾದಾಗ ಮೊದಲ ಬಾರಿಗೆ ಕಿತ್ತೂರು ಚೆನ್ನಮ್ಮನ ಪ್ರತಿಮೆ ನೋಡಿ ನಮಸ್ಕರಿಸಿದ್ದೆ. ಮುಂದೆ ಅದೇ ಚೆನ್ನಮ್ಮನ ಪಾತ್ರ ಮಾಡುತ್ತೇನೆ ಎಂಬುದನ್ನು ಊಹಿಸಲೂ ಇರಲಿಲ್ಲ ಎಂದರು ಜಯಪ್ರದಾ. <br /> <br /> ಬಹುಶಃ ಚೆನ್ನಮ್ಮನ ಆಶೀರ್ವಾದವೇ ಇರಬೇಕು ನನ್ನಲ್ಲಿ ಹೋರಾಟದ ಮನೋಭಾವ ಬೆಳೆಯಿತು. ಆಕೆಯ ಸಾಹಸಿ ಗುಣ ನನ್ನೊಳಗೆ ಸಂಚಲನ ಉಂಟು ಮಾಡಿದೆ. ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಈ ಅವಧಿಯ ಎಲ್ಲಾ ಪ್ರಮುಖ ನಟರೊಂದಿಗೂ ನಟಿಸಿದ್ದೇನೆ. <br /> <br /> ಕನ್ನಡದಲ್ಲಿ ಅನೇಕ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಐತಿಹಾಸಿಕ, ಅದರಲ್ಲೂ ಚೆನ್ನಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಕನಸೊಂದು ನನಸಾದಂತೆ ಎಂದು ಅವರು ಬಣ್ಣಿಸಿದರು. ಜನ ನನ್ನನ್ನು ಜಯಪ್ರದಾ ಎಂಬುದಕ್ಕಿಂತ ಚೆನ್ನಮ್ಮ ಎಂದೇ ಗುರುತಿಸುತ್ತಾರೆ ಎಂಬ ಭರವಸೆ ನನ್ನದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಸಂಗೊಳ್ಳಿ ರಾಯಣ್ಣ~ನ ಬಗ್ಗೆ ಮಾತನಾಡಲು ಕುಳಿತ ದರ್ಶನ್ ತಮ್ಮ ಬಗ್ಗೆಯೇ ಹೇಳಿಕೊಂಡರು. ಬೇರೆಯವರು ಬೇಟೆಯಾಡಿ ಬಿಟ್ಟದ್ದನ್ನು ತಿನ್ನಲು ಕಲಿತಿರುವ ನರಿ ತಾವೆನ್ನುವುದು ಅವರ ಬಣ್ಣನೆ. <br /> <br /> `ನಾನು ಚಿತ್ರರಂಗದಲ್ಲಿ ಎಂದಿಗೂ ಸಿಂಹ ಅಥವಾ ಹುಲಿ ಆಗಿರಲೇ ಇಲ್ಲ. ನಾನು ನರಿ ಇದ್ದಂತೆ. ಬೇರೆಯವರು ಬೇಟೆ ಆಡಿ ಬಿಟ್ಟದ್ದನ್ನು ತಿನ್ನಲು ಕಲಿತಿದ್ದೇನೆ!~.<br /> ನಟ ದರ್ಶನ್ ಚಿತ್ರರಂಗದ ತಮ್ಮ ನಡೆಯನ್ನು ಸ್ವವಿಮರ್ಶೆಗೆ ತೊಡಗಿಸಿಕೊಂಡರು. <br /> <br /> ತಾವು ಬೆಳೆದದ್ದೇ ಬೇರೆಯವರು ಮಾಡದೇ ಬಿಟ್ಟ ಪಾತ್ರಗಳನ್ನು ಮಾಡಿದ್ದರಿಂದ ಎಂಬುದು ಅವರ ಮಾತಿನ ಅರ್ಥ. ಅವರ ಈ ಮಾತುಗಳು ಹೊರಬಂದದ್ದು `ಸಂಗೊಳ್ಳಿ ರಾಯಣ್ಣ~ ಚಿತ್ರದ ಸುದ್ದಿಗೋಷ್ಠಿಯಲ್ಲಿ. <br /> <br /> ಸಂಗೊಳ್ಳಿ ರಾಯಣ್ಣನ ಪಾತ್ರಕ್ಕೆ ನಾನು ಅರ್ಹನೇ ಎಂಬ ಯೋಚನೆ ನನ್ನನ್ನು ಹಲವು ಬಾರಿ ಕಾಡಿತು. ನಿರ್ಮಾಪಕ ಆನಂದ ಅಪ್ಪುಗೋಳ ಅವರಿಗೆ ಯೋಚಿಸುವಂತೆ ಹಲವು ಬಾರಿ ಹೇಳಿದೆ. ಆದರೆ ಅವರು ಬಿಡಲಿಲ್ಲ. ನೀವೇ ಈ ಪಾತ್ರ ಮಾಡಬೇಕೆಂದು ಹಟ ಮಾಡಿದರು. ತಡವಾದರೂ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದರು ದರ್ಶನ್. ಯುದ್ಧ ಸನ್ನಿವೇಶದ ಚಿತ್ರೀಕರಣಕ್ಕೆ ಕುದುರೆ ಮತ್ತು ಆನೆಗಳನ್ನು ಬಳಸಿಕೊಂಡದ್ದರ ಅನುಭವಗಳನ್ನು ಹಂಚಿಕೊಂಡರು.<br /> <br /> ದೀರ್ಘ ಕಾಲದ ಬಳಿಕ ಚಿತ್ರ ಮುಗಿಸಿದ ಖುಷಿಯಲ್ಲಿದ್ದ ನಿರ್ದೇಶಕ ನಾಗಣ್ಣ ಅವರ ಮಾತುಗಳೂ ದೀರ್ಘವಾಗಿದ್ದವು. ಈಗಿನ ಜನರಿಗೆ ಕಾಣಲು ಸಾಧ್ಯವಾಗದಿದ್ದ ಸಂಗೊಳ್ಳಿ ರಾಯಣ್ಣನನ್ನು ಚಿತ್ರದ ಮೂಲಕ ತೋರಿಸುವ ಪ್ರಯತ್ನ ತಮ್ಮದು ಎಂದರು. <br /> <br /> ಈಗಿನ ಟ್ರೆಂಡ್ ಬಿಟ್ಟು ಐತಿಹಾಸಿಕ ಚಿತ್ರ ಮಾಡುತ್ತಿರುವುದು ನಾಗಣ್ಣನವರ ಖುಷಿಗೆ ಮತ್ತೊಂದು ಕಾರಣ. ಹೆಚ್ಚು ಬಜೆಟ್ ಬಯಸುವ ಈ ಚಿತ್ರ ಮುಂದೆ ಏನಾಗುವುದೋ ಎಂಬ ಭಯ ಅವರನ್ನು ಕಾಡಿತ್ತಂತೆ. ಆದರೆ ಸಂಗೊಳ್ಳಿ ರಾಯಣ್ಣನ ಪರಮ ಅಭಿಮಾನಿಯಾದ ನಿರ್ಮಾಪಕರು ಧೈರ್ಯ ತುಂಬಿದರಂತೆ. ತಮ್ಮ ಕೊನೆಯ ಪಾತ್ರ ಮುಗಿಸಿ ಡಬ್ಬಿಂಗ್ ಪೂರ್ಣಗೊಳಿಸಿದ ಕರಿಬಸವಯ್ಯ ನಮ್ಮಿಂದಲೂ ದೂರ ಹೋಗಿಬಿಟ್ಟರು ಎಂದು ನಾಗಣ್ಣ ಭಾವುಕರಾದರು. <br /> <br /> ನಟರಾದ ಅವಿನಾಶ್, ರಮೇಶ್ ಭಟ್, ಶಶಿಕುಮಾರ್, ಶಿವಕುಮಾರ್, ನಿರ್ಮಾಪಕಿ ವಿಜಯಲಕ್ಷ್ಮೀ, ವಿತರಕ ಗಂಗರಾಜು ಮಾತಿನ ಮಳೆ ಸುರಿಸಿದರು.<br /> <br /> <strong>ಚೆನ್ನಮ್ಮನ ಆಶೀರ್ವಾದ</strong></p>.<p>ರಾಜ್ಯಸಭೆಗೆ ಆಯ್ಕೆಯಾದಾಗ ಮೊದಲ ಬಾರಿಗೆ ಕಿತ್ತೂರು ಚೆನ್ನಮ್ಮನ ಪ್ರತಿಮೆ ನೋಡಿ ನಮಸ್ಕರಿಸಿದ್ದೆ. ಮುಂದೆ ಅದೇ ಚೆನ್ನಮ್ಮನ ಪಾತ್ರ ಮಾಡುತ್ತೇನೆ ಎಂಬುದನ್ನು ಊಹಿಸಲೂ ಇರಲಿಲ್ಲ ಎಂದರು ಜಯಪ್ರದಾ. <br /> <br /> ಬಹುಶಃ ಚೆನ್ನಮ್ಮನ ಆಶೀರ್ವಾದವೇ ಇರಬೇಕು ನನ್ನಲ್ಲಿ ಹೋರಾಟದ ಮನೋಭಾವ ಬೆಳೆಯಿತು. ಆಕೆಯ ಸಾಹಸಿ ಗುಣ ನನ್ನೊಳಗೆ ಸಂಚಲನ ಉಂಟು ಮಾಡಿದೆ. ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಕೆಲಸ ಮಾಡಿದ್ದೇನೆ. ಈ ಅವಧಿಯ ಎಲ್ಲಾ ಪ್ರಮುಖ ನಟರೊಂದಿಗೂ ನಟಿಸಿದ್ದೇನೆ. <br /> <br /> ಕನ್ನಡದಲ್ಲಿ ಅನೇಕ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಆದರೆ ಐತಿಹಾಸಿಕ, ಅದರಲ್ಲೂ ಚೆನ್ನಮ್ಮನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಕನಸೊಂದು ನನಸಾದಂತೆ ಎಂದು ಅವರು ಬಣ್ಣಿಸಿದರು. ಜನ ನನ್ನನ್ನು ಜಯಪ್ರದಾ ಎಂಬುದಕ್ಕಿಂತ ಚೆನ್ನಮ್ಮ ಎಂದೇ ಗುರುತಿಸುತ್ತಾರೆ ಎಂಬ ಭರವಸೆ ನನ್ನದು ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>