<p><strong>ಗಂಗಾವತಿ: </strong>ಸರ್ಕಾರ ಉರುಳಿಸಲು ಭಿನ್ನಮತೀಯ ಚಟುವಟಿಕೆ ನಡೆಸಿ ಶಾಸಕತ್ವ ಅನರ್ಹತೆಯ ತೂಗುಗತ್ತಿಗೆ ಸಿಲುಕಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಬಲ ಕುಗ್ಗಿಸಲು ಇದೀಗ ಸರ್ಕಾರ, ನಾಮ ನಿರ್ದೇಶನಗೊಂಡಿದ್ದ ಅವರ ಬೆಂಬಲಿಗರ ಸದಸ್ಯತ್ವ ರದ್ದುಗೊಳಿಸಿದೆ.<br /> <br /> ಶಿವರಾಜ ತಂಗಡಗಿ ನಾಮ ನಿರ್ದೇಶನ ಮಾಡಿದ್ದ ಗಂಗಾವತಿಯ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಮೂವರು ಮತ್ತು ಕಾರಟಗಿಯ ವಿಶೇಷ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಇಬ್ಬರ ಸದಸ್ಯತ್ವ ರದ್ದುಗೊಳಿಸಿ ಹೊಸದಾಗಿ ಮತ್ತೆ ಏಳು ಜನರನ್ನು ನಾಮ ನಿರ್ದೇಶನ ಮಾಡಲಾಗಿದೆ.<br /> <br /> ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಗೊಂಡಿದ್ದರೂ ಕಳೆದ ಜಿಲ್ಲಾ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ಮತ್ತು ಈಗಲೂ ತಂಗಡಗಿ ಅವರನ್ನು ಬೆಂಬಲಿಸುತ್ತಿರುವ ಸದಸ್ಯರು ಮಾತ್ರ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.<br /> <br /> ಕಾರಟಗಿ: ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಒಟ್ಟು 14 ಸದಸ್ಯ ಸ್ಥಾನಗಳಿಗೆ ತಂಗಡಗಿ 12 ಸ್ಥಾನಕ್ಕೆ ಮಾತ್ರ ನಾಮ ನಿರ್ದೇಶನಕ್ಕೆ ಶಿಫಾರಸ್ಸು ಮಾಡಿದ್ದರು. ಈಗ ಬಾಗೋಡಿ ಸಿದ್ದನಗೌಡ ಬೂದಗುಂಪಾ ಮತ್ತು ಸಿದ್ದಾಪುರ ಮೊಮ್ಮದ್ರೌಫ್ ಸದಸ್ಯತ್ವ ಕಳೆದುಕೊಂಡಿದ್ದಾರೆ.<br /> <br /> ಬೂದಗುಂಪಾದ ಸಿದ್ದನಗೌಡ ಮಾಲಿ ಪಾಟೀಲ, ಸಿದ್ದಾಪುರದ ಮುಕ್ತಂಸಾಬ ಕಟಾಂಬ್ಲಿ, ಯರಡೋಣಿ ಶಿವಶರಣಗೌಡ ಮತ್ತು ಕಾರಟಗಿಯ ಯಂಕಣ್ಣ ಶ್ರೇಷ್ಠಿ ಅವರನ್ನು ಹೊಸದಾಗಿ ನಾಮ ನಿರ್ದೇಶನ ಮಾಡಿ ಸರ್ಕಾರದ ಪರವಾಗಿ ಸಹಕಾರ ಇಲಾಖೆ ಆದೇಶ ನೀಡಿದೆ.<br /> <br /> ಗಂಗಾವತಿ: ಹಾಗೆಯೆ ಗಂಗಾವತಿ ಎಪಿಎಂಸಿಯಲ್ಲಿ ತಂಗಡಗಿ ಬೆಂಬಲಿಗರಾದ ಶಶಿಧರಗೌಡ ಮಾಲಿಪಾಟೀಲ ಹೇರೂರು, ಬಸವರಾಜ ಭೋವಿ ಹುಲಿಹೈದರ ಮತ್ತು ಚಿಕ್ಕಜಂತಕಲ್ ಗ್ರಾಮದ ಭಾಗ್ಯಮ್ಮ ಅವರ ಸದಸ್ಯತ್ವ ರದ್ದಾಗಿದೆ.<br /> <br /> ಈ ಮೂರು ಸ್ಥಾನದ ಪೈಕಿ ಶ್ರೀರಾಮನಗರದ ಪಿ (ಚುಟ್ಟಾ) ವೆಂಕಟೇಶ್ವರರಾವ್ ಮತ್ತು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹುಲಿಹೈದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ನಾಗಪ್ಪ ಶಿರವಾರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಸರ್ಕಾರ ಉರುಳಿಸಲು ಭಿನ್ನಮತೀಯ ಚಟುವಟಿಕೆ ನಡೆಸಿ ಶಾಸಕತ್ವ ಅನರ್ಹತೆಯ ತೂಗುಗತ್ತಿಗೆ ಸಿಲುಕಿರುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರ ಬಲ ಕುಗ್ಗಿಸಲು ಇದೀಗ ಸರ್ಕಾರ, ನಾಮ ನಿರ್ದೇಶನಗೊಂಡಿದ್ದ ಅವರ ಬೆಂಬಲಿಗರ ಸದಸ್ಯತ್ವ ರದ್ದುಗೊಳಿಸಿದೆ.<br /> <br /> ಶಿವರಾಜ ತಂಗಡಗಿ ನಾಮ ನಿರ್ದೇಶನ ಮಾಡಿದ್ದ ಗಂಗಾವತಿಯ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಮೂವರು ಮತ್ತು ಕಾರಟಗಿಯ ವಿಶೇಷ ಕೃಷಿ ಮಾರುಕಟ್ಟೆ ಸಮಿತಿಯಲ್ಲಿ ಇಬ್ಬರ ಸದಸ್ಯತ್ವ ರದ್ದುಗೊಳಿಸಿ ಹೊಸದಾಗಿ ಮತ್ತೆ ಏಳು ಜನರನ್ನು ನಾಮ ನಿರ್ದೇಶನ ಮಾಡಲಾಗಿದೆ.<br /> <br /> ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಗೊಂಡಿದ್ದರೂ ಕಳೆದ ಜಿಲ್ಲಾ ಮತ್ತು ತಾ.ಪಂ ಚುನಾವಣೆಯಲ್ಲಿ ಬಿಜೆಪಿಯ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಪ್ರಚಾರ ಮಾಡಿದ ಮತ್ತು ಈಗಲೂ ತಂಗಡಗಿ ಅವರನ್ನು ಬೆಂಬಲಿಸುತ್ತಿರುವ ಸದಸ್ಯರು ಮಾತ್ರ ತಮ್ಮ ಸದಸ್ಯತ್ವ ಕಳೆದುಕೊಂಡಿದ್ದಾರೆ.<br /> <br /> ಕಾರಟಗಿ: ವಿಶೇಷ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿನ ಒಟ್ಟು 14 ಸದಸ್ಯ ಸ್ಥಾನಗಳಿಗೆ ತಂಗಡಗಿ 12 ಸ್ಥಾನಕ್ಕೆ ಮಾತ್ರ ನಾಮ ನಿರ್ದೇಶನಕ್ಕೆ ಶಿಫಾರಸ್ಸು ಮಾಡಿದ್ದರು. ಈಗ ಬಾಗೋಡಿ ಸಿದ್ದನಗೌಡ ಬೂದಗುಂಪಾ ಮತ್ತು ಸಿದ್ದಾಪುರ ಮೊಮ್ಮದ್ರೌಫ್ ಸದಸ್ಯತ್ವ ಕಳೆದುಕೊಂಡಿದ್ದಾರೆ.<br /> <br /> ಬೂದಗುಂಪಾದ ಸಿದ್ದನಗೌಡ ಮಾಲಿ ಪಾಟೀಲ, ಸಿದ್ದಾಪುರದ ಮುಕ್ತಂಸಾಬ ಕಟಾಂಬ್ಲಿ, ಯರಡೋಣಿ ಶಿವಶರಣಗೌಡ ಮತ್ತು ಕಾರಟಗಿಯ ಯಂಕಣ್ಣ ಶ್ರೇಷ್ಠಿ ಅವರನ್ನು ಹೊಸದಾಗಿ ನಾಮ ನಿರ್ದೇಶನ ಮಾಡಿ ಸರ್ಕಾರದ ಪರವಾಗಿ ಸಹಕಾರ ಇಲಾಖೆ ಆದೇಶ ನೀಡಿದೆ.<br /> <br /> ಗಂಗಾವತಿ: ಹಾಗೆಯೆ ಗಂಗಾವತಿ ಎಪಿಎಂಸಿಯಲ್ಲಿ ತಂಗಡಗಿ ಬೆಂಬಲಿಗರಾದ ಶಶಿಧರಗೌಡ ಮಾಲಿಪಾಟೀಲ ಹೇರೂರು, ಬಸವರಾಜ ಭೋವಿ ಹುಲಿಹೈದರ ಮತ್ತು ಚಿಕ್ಕಜಂತಕಲ್ ಗ್ರಾಮದ ಭಾಗ್ಯಮ್ಮ ಅವರ ಸದಸ್ಯತ್ವ ರದ್ದಾಗಿದೆ.<br /> <br /> ಈ ಮೂರು ಸ್ಥಾನದ ಪೈಕಿ ಶ್ರೀರಾಮನಗರದ ಪಿ (ಚುಟ್ಟಾ) ವೆಂಕಟೇಶ್ವರರಾವ್ ಮತ್ತು ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಹುಲಿಹೈದರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡ ನಾಗಪ್ಪ ಶಿರವಾರ ಅವರನ್ನು ನಾಮ ನಿರ್ದೇಶನ ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>