<p><strong>ಬನ್ಯಾನ್ ಟ್ರಿ:</strong> ಶುಕ್ರವಾರ ಮುಂಗಾರು ಸಂಗೀತ ಉತ್ಸವ `ಬರ್ಕಾ ಋತು~. ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನ ಮತ್ತು ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಂದ ಹಿಂದುಸ್ತಾನಿ ಗಾಯನ.<br /> <br /> ಜಮ್ಮು ಮೂಲದ ಪಂಡಿತ್ ಶಿವಕುಮಾರ್ ಶರ್ಮಾ ವಿಶ್ವವಿಖ್ಯಾತ ಸಂತೂರ್ ವಾದಕ. ಸಂತೂರ್ ಕಾಶ್ಮೀರದ ಜಾನಪದ ವಾದ್ಯ. ಅದರಲ್ಲಿ ಹಿಂದುಸ್ತಾನಿ ರಾಗಗಳನ್ನು ಮೊದಲಿಗೆ ನುಡಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ.<br /> <br /> ಅದು ಅವರ ತಂದೆ ಸಂಗೀತಗಾರ ಉಮಾ ದತ್ ಶರ್ಮಾ ಅವರ ಸಂಶೋಧನೆಯ ಫಲ. ಮೊದಲು ಕೆಲ ವರ್ಷಗಳ ಕಾಲ ಹಿಂದುಸ್ತಾನಿ ಗಾಯಕರಾಗಿದ್ದ ಶಿವಕುಮಾರ್ ಶರ್ಮಾ ಆನಂತರ ಸಂತೂರ್ಗೆ ತಮ್ಮ ಸಂಗೀತ ಜೀವನ ಮೀಸಲಿಟ್ಟರು. <br /> <br /> ಮುಂಬೈ ಮೂಲದ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಜೀವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಆದರೆ ಸಂಗೀತದೆಡೆ ಸೆಳೆತ. ಅದು ಹೆಚ್ಚಾದಾಗ ಪಿಎಚ್ಡಿ. ಮುಗಿದ ನಂತರ ಸಂಗೀತವನ್ನೇ ವೃತ್ತಿಯಾಗಿಸಿಕೊಂಡರು. ಜೈಪುರ- ಅಟ್ರೌಲಿ ಘರಾನಾದ ಪ್ರಮುಖ ಗಾಯಕಿಯಾಗಿರುವ ಅಶ್ವಿನಿ ಸಪ್ತಕಗಳಲ್ಲಿ ಹಿಡಿತ ಸಾಧಿಸಿರುವ ಸಂಗೀತಗಾರ್ತಿ.<br /> <br /> <strong>ಸ್ಥಳ: </strong>ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 7. 200 ಮತ್ತು 300 ರೂ ದೇಣಿಗೆ ಪಾಸ್ಗಳಿಗೆ: ಕೋರಮಂಗಲದ ಲ್ಯಾಂಡ್ಮಾರ್ಕ್ (4240 4240), ಸೇಂಟ್ ಮಾರ್ಕ್ ರಸ್ತೆಯ ಕೆ.ಸಿ. ದಾಸ್ (2559 2021) ಮತ್ತು ಇಂದಿರಾನಗರದ ಒಡಿಸ್ಸಿ (4211 5341). ಆನ್ಲೈನ್ನಲ್ಲಿ ಟಿಕೆಟ್ <a href="http://www.bookmy">www.bookmy</a> show. comಗೆ ಅಥವಾ 3989 5050. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬನ್ಯಾನ್ ಟ್ರಿ:</strong> ಶುಕ್ರವಾರ ಮುಂಗಾರು ಸಂಗೀತ ಉತ್ಸವ `ಬರ್ಕಾ ಋತು~. ಪಂಡಿತ್ ಶಿವಕುಮಾರ್ ಶರ್ಮಾ ಅವರಿಂದ ಸಂತೂರ್ ವಾದನ ಮತ್ತು ವಿದುಷಿ ಅಶ್ವಿನಿ ಭಿಡೆ ದೇಶಪಾಂಡೆ ಅವರಿಂದ ಹಿಂದುಸ್ತಾನಿ ಗಾಯನ.<br /> <br /> ಜಮ್ಮು ಮೂಲದ ಪಂಡಿತ್ ಶಿವಕುಮಾರ್ ಶರ್ಮಾ ವಿಶ್ವವಿಖ್ಯಾತ ಸಂತೂರ್ ವಾದಕ. ಸಂತೂರ್ ಕಾಶ್ಮೀರದ ಜಾನಪದ ವಾದ್ಯ. ಅದರಲ್ಲಿ ಹಿಂದುಸ್ತಾನಿ ರಾಗಗಳನ್ನು ಮೊದಲಿಗೆ ನುಡಿಸಿದ ಕೀರ್ತಿ ಶಿವಕುಮಾರ್ ಅವರಿಗೆ ಸಲ್ಲುತ್ತದೆ.<br /> <br /> ಅದು ಅವರ ತಂದೆ ಸಂಗೀತಗಾರ ಉಮಾ ದತ್ ಶರ್ಮಾ ಅವರ ಸಂಶೋಧನೆಯ ಫಲ. ಮೊದಲು ಕೆಲ ವರ್ಷಗಳ ಕಾಲ ಹಿಂದುಸ್ತಾನಿ ಗಾಯಕರಾಗಿದ್ದ ಶಿವಕುಮಾರ್ ಶರ್ಮಾ ಆನಂತರ ಸಂತೂರ್ಗೆ ತಮ್ಮ ಸಂಗೀತ ಜೀವನ ಮೀಸಲಿಟ್ಟರು. <br /> <br /> ಮುಂಬೈ ಮೂಲದ ಡಾ. ಅಶ್ವಿನಿ ಭಿಡೆ ದೇಶಪಾಂಡೆ ಜೀವ ರಸಾಯನ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದವರು. ಆದರೆ ಸಂಗೀತದೆಡೆ ಸೆಳೆತ. ಅದು ಹೆಚ್ಚಾದಾಗ ಪಿಎಚ್ಡಿ. ಮುಗಿದ ನಂತರ ಸಂಗೀತವನ್ನೇ ವೃತ್ತಿಯಾಗಿಸಿಕೊಂಡರು. ಜೈಪುರ- ಅಟ್ರೌಲಿ ಘರಾನಾದ ಪ್ರಮುಖ ಗಾಯಕಿಯಾಗಿರುವ ಅಶ್ವಿನಿ ಸಪ್ತಕಗಳಲ್ಲಿ ಹಿಡಿತ ಸಾಧಿಸಿರುವ ಸಂಗೀತಗಾರ್ತಿ.<br /> <br /> <strong>ಸ್ಥಳ: </strong>ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 7. 200 ಮತ್ತು 300 ರೂ ದೇಣಿಗೆ ಪಾಸ್ಗಳಿಗೆ: ಕೋರಮಂಗಲದ ಲ್ಯಾಂಡ್ಮಾರ್ಕ್ (4240 4240), ಸೇಂಟ್ ಮಾರ್ಕ್ ರಸ್ತೆಯ ಕೆ.ಸಿ. ದಾಸ್ (2559 2021) ಮತ್ತು ಇಂದಿರಾನಗರದ ಒಡಿಸ್ಸಿ (4211 5341). ಆನ್ಲೈನ್ನಲ್ಲಿ ಟಿಕೆಟ್ <a href="http://www.bookmy">www.bookmy</a> show. comಗೆ ಅಥವಾ 3989 5050. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>