<p><strong>ಗೋಕರ್ಣ: </strong>ಭಾನುವಾರ ರಥೋತ್ಸವದ ಸಮಯದಲ್ಲಿ ಆಕ್ಸೆಲ್ ತುಂಡಾಗಿ ನಿಂತ ರಥದ ಕುರಿತು ವರದಿ ನೀಡಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಶಿಕಾಂತ ಕೋಳೆಕರ್ ಸೋಮವಾರ ರಥದ ಚಕ್ರವನ್ನು ಪರಿಶೀಲಿಸಿದರು.<br /> <br /> ಎರಡು ಚಕ್ರಗಳ ಮಧ್ಯದ ಬಿಮ್ ಬಿರುಕು ಬಿಟ್ಟು ಒಂದು ತುದಿ ಮುರಿದ ಕಾರಣ ಬಿಮ್ಗೆ ಮತ್ತು ಚಕ್ರಕ್ಕೆ ಇದ್ದ ಇಂಟರಲಾಕ್ ಕೀ ತುಂಡಾಗಿ ಮೇಲೆ ಸರಿದಿದೆ. ಇದೇ ಕಾರಣದಿಂದ ಚಕ್ರ ರಥಕ್ಕೆ ವಾಲಿದೆ ಎಂದು ತಿಳಿಸಿದರು.<br /> <br /> ‘ಫೆ.19ರಂದು ರಥ ಪರಿಶೀಲಿಸಿ ಕೆಲವು ಷರತ್ತುಗಳೊಂದಿಗೆ ರಥ ಎಳೆಯಬಹುದು ಎಂದು ತಿಳಿಸಿದ್ದೆ. ರಥಕ್ಕೆ ನಟ್ ಬೋಲ್ಟ್ ಗಳ ಸಿಸ್ಟಮ್ ಇಲ್ಲ. ಇಂಟರಲಾಕ್ ಇದ್ದು ಅದನ್ನು ತೆಗೆಯುವುದು ಅಸಾಧ್ಯದ ಮಾತು’ ಎಂದು ಅವರು ಹೇಳಿದರು.<br /> <br /> ರಥೋತ್ಸವದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ರಥಬೀದಿಯ ಮಧ್ಯದಲ್ಲಿಯೇ ರಥ ನಿಂತಿರುವುದರಿಂದ ಯಾವುದೇ ವಾಹನ ಚಲಿಸದಂತೆ ಆಗಿದೆ. ರಥೋತ್ಸವ ಅಪೂರ್ಣಗೊಂಡಿರುವುದು ಅಸಂಖ್ಯಾತ ಶಿವ ಭಕ್ತರಿಗೆ ಬೇಸರ ಉಂಟುಮಾಡಿದೆ.<br /> <br /> <strong>ಆಡಳಿತ ಮಂಡಳಿ ಹೇಳಿಕೆ</strong><br /> ‘ಮಹಾರಥೋತ್ಸವದ ಮಧ್ಯೆ ರಥದ ಚಲನೆಗೆ ತೊಂದರೆಯಾದ್ದರಿಂದ ಮಧ್ಯಂತರದಲ್ಲಿ ನಿಲ್ಲಿಸಲಾಯಿತು. ಇದೊಂದು ಆಕಸ್ಮಿಕ ಘಟನೆ. ಆದರೆ ಈ ಘಟನೆ ನಡೆದರೂ ಯಾವುದೇ ಅವಘಡ ನಡೆಯದೇ ಭಗವಂತನೇ ರಕ್ಷಿಸಿದ ಎನ್ನುವುದು ಸಮಾಧಾನದ ಸಂಗತಿ.<br /> <br /> ಈ ಮಹಾರಥೋತ್ಸವು ಒಂದು ಸಂಘಟಿತ ಕಾರ್ಯಕ್ರಮ. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಾಕಷ್ಟು ಎಚ್ಚರಿಕೆ ಯನ್ನು ವಹಿಸಿದಾಗಿಯೂ ಮಾನವನ ಶಕ್ತಿ ಮೀರಿ ಆದ ಅನಾನುಕೂಲದಿಂದ ಭಕ್ತರು ಗೊಂದಲಗೊಳ್ಳವ ಅಗತ್ಯವಿಲ್ಲ’ ಎಂದು ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗೋಕರ್ಣ: </strong>ಭಾನುವಾರ ರಥೋತ್ಸವದ ಸಮಯದಲ್ಲಿ ಆಕ್ಸೆಲ್ ತುಂಡಾಗಿ ನಿಂತ ರಥದ ಕುರಿತು ವರದಿ ನೀಡಲು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಶಶಿಕಾಂತ ಕೋಳೆಕರ್ ಸೋಮವಾರ ರಥದ ಚಕ್ರವನ್ನು ಪರಿಶೀಲಿಸಿದರು.<br /> <br /> ಎರಡು ಚಕ್ರಗಳ ಮಧ್ಯದ ಬಿಮ್ ಬಿರುಕು ಬಿಟ್ಟು ಒಂದು ತುದಿ ಮುರಿದ ಕಾರಣ ಬಿಮ್ಗೆ ಮತ್ತು ಚಕ್ರಕ್ಕೆ ಇದ್ದ ಇಂಟರಲಾಕ್ ಕೀ ತುಂಡಾಗಿ ಮೇಲೆ ಸರಿದಿದೆ. ಇದೇ ಕಾರಣದಿಂದ ಚಕ್ರ ರಥಕ್ಕೆ ವಾಲಿದೆ ಎಂದು ತಿಳಿಸಿದರು.<br /> <br /> ‘ಫೆ.19ರಂದು ರಥ ಪರಿಶೀಲಿಸಿ ಕೆಲವು ಷರತ್ತುಗಳೊಂದಿಗೆ ರಥ ಎಳೆಯಬಹುದು ಎಂದು ತಿಳಿಸಿದ್ದೆ. ರಥಕ್ಕೆ ನಟ್ ಬೋಲ್ಟ್ ಗಳ ಸಿಸ್ಟಮ್ ಇಲ್ಲ. ಇಂಟರಲಾಕ್ ಇದ್ದು ಅದನ್ನು ತೆಗೆಯುವುದು ಅಸಾಧ್ಯದ ಮಾತು’ ಎಂದು ಅವರು ಹೇಳಿದರು.<br /> <br /> ರಥೋತ್ಸವದಲ್ಲಿ ನಡೆದ ಘಟನೆ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ರಥಬೀದಿಯ ಮಧ್ಯದಲ್ಲಿಯೇ ರಥ ನಿಂತಿರುವುದರಿಂದ ಯಾವುದೇ ವಾಹನ ಚಲಿಸದಂತೆ ಆಗಿದೆ. ರಥೋತ್ಸವ ಅಪೂರ್ಣಗೊಂಡಿರುವುದು ಅಸಂಖ್ಯಾತ ಶಿವ ಭಕ್ತರಿಗೆ ಬೇಸರ ಉಂಟುಮಾಡಿದೆ.<br /> <br /> <strong>ಆಡಳಿತ ಮಂಡಳಿ ಹೇಳಿಕೆ</strong><br /> ‘ಮಹಾರಥೋತ್ಸವದ ಮಧ್ಯೆ ರಥದ ಚಲನೆಗೆ ತೊಂದರೆಯಾದ್ದರಿಂದ ಮಧ್ಯಂತರದಲ್ಲಿ ನಿಲ್ಲಿಸಲಾಯಿತು. ಇದೊಂದು ಆಕಸ್ಮಿಕ ಘಟನೆ. ಆದರೆ ಈ ಘಟನೆ ನಡೆದರೂ ಯಾವುದೇ ಅವಘಡ ನಡೆಯದೇ ಭಗವಂತನೇ ರಕ್ಷಿಸಿದ ಎನ್ನುವುದು ಸಮಾಧಾನದ ಸಂಗತಿ.<br /> <br /> ಈ ಮಹಾರಥೋತ್ಸವು ಒಂದು ಸಂಘಟಿತ ಕಾರ್ಯಕ್ರಮ. ಈ ಕಾರ್ಯಕ್ರಮವು ಯಶಸ್ವಿಯಾಗಲು ಸಾಕಷ್ಟು ಎಚ್ಚರಿಕೆ ಯನ್ನು ವಹಿಸಿದಾಗಿಯೂ ಮಾನವನ ಶಕ್ತಿ ಮೀರಿ ಆದ ಅನಾನುಕೂಲದಿಂದ ಭಕ್ತರು ಗೊಂದಲಗೊಳ್ಳವ ಅಗತ್ಯವಿಲ್ಲ’ ಎಂದು ಆಡಳಿತ ಮಂಡಳಿ ತಿಳಿಸಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>