<p>ಗರ್ಭಕೊರಳಿನ ಕ್ಯಾನ್ಸರ್ನಿಂದ ನಿಮ್ಮ ದೇವತೆಯನ್ನು ಸಂರಕ್ಷಿಸಿ ಎಂದು ಕುನಾಲ್ ಕಪೂರ್ ಕರೆ ನೀಡುತ್ತಿದ್ದಾರೆ. <br /> <br /> `ಭಾರತದಲ್ಲಿ ಪ್ರತಿ ಏಳು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೊರಳಿನ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾಳೆ. ಆಕೆ ನಿಮ್ಮ ಅಮ್ಮನಾಗಿರಬಹುದು. ಅಕ್ಕರೆಯ ಸಹೋದರಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ನಿಮ್ಮ ಬದುಕನ್ನು ಬೆಳಗುವ ಆ ದೇವತೆಯನ್ನು ಈ ಕ್ಯಾನ್ಸರ್ನಿಂದ ರಕ್ಷಿಸಿ~ ಎಂದು ಕುನಾಲ್ ಕಪೂರ್ ಹೇಳುತ್ತಿದ್ದಾರೆ.<br /> <br /> ಗರ್ಭಕೊರಳಿನ ಕ್ಯಾನ್ಸರ್ ವಿರುದ್ಧದ ಪ್ರಚಾರದಲ್ಲಿ ಭಾಗಿಯಾಗಿರುವ ಕುನಾಲ್ ಕಪೂರ್ಗೆ ಈ ಕೆಲಸ ಸಂತಸ ತಂದಿದೆಯಂತೆ. <br /> <br /> `ತಾರೆಗಳು ಕಾರು ಮಾರುತ್ತಾರೆ, ಕೋಲಾ ಮಾರುತ್ತಾರೆ. ಆದರೆ ಇಂಥ ಮಹತ್ವದ ವಿಷಯ ಬಂದಾಗ ಹಿಂಜರಿಯಬಾರದು. ಇದು ಬದುಕಿನ ವಿಷಯ~ ಎಂಬುದು ಅವರ ಕಿವಿಮಾತು. <br /> `ರಂಗ್ ದೇ ಬಸಂತಿ~ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಗುಂಗುರು ಕೂದಲಿನ ಕುನಾಲ್ `ಡಾನ್ 2~ ಚಿತ್ರದಲ್ಲೂ ಮಿಂಚಿದ್ದರು.<br /> <br /> ಭಾರತದಲ್ಲಿ ತಾರೆಯರ ಮಾತನ್ನು ನಂಬುತ್ತಾರೆ. ಆರಾಧಿಸುತ್ತಾರೆ. ಈ ಆರಾಧನೆಯನ್ನು ಜಾಗೃತಿಗಾಗಿ ಬಳಸುವುದು ಅತ್ಯುತ್ತಮ ಮಾರ್ಗವಾಗಿದೆ ಎಂದೂ ಅಭಿಪ್ರಾಯ ಪಟ್ಟಿರುವ ಅವರು, ಎಂಎಸ್ಡಿ ಫಾರ್ಮಾಸ್ಯುಟಿಕಲ್ಸ್ ಹಮ್ಮಿಕೊಂಡಿದ್ದ ಈ ಪ್ರಚಾರ ಆಂದೋಲನದಲ್ಲಿ ಭಾಗವಹಿಸಿದ್ದರು. ಪ್ರಚಾರಕ್ಕಾಗಿ ನವದೆಹಲಿಯಲ್ಲಿ ಫ್ಯಾಶನ್ ಶೋ ಒಂದನ್ನು ಕೂಡ ಆಯೋಜಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗರ್ಭಕೊರಳಿನ ಕ್ಯಾನ್ಸರ್ನಿಂದ ನಿಮ್ಮ ದೇವತೆಯನ್ನು ಸಂರಕ್ಷಿಸಿ ಎಂದು ಕುನಾಲ್ ಕಪೂರ್ ಕರೆ ನೀಡುತ್ತಿದ್ದಾರೆ. <br /> <br /> `ಭಾರತದಲ್ಲಿ ಪ್ರತಿ ಏಳು ನಿಮಿಷಕ್ಕೆ ಒಬ್ಬ ಮಹಿಳೆ ಗರ್ಭಕೊರಳಿನ ಕ್ಯಾನ್ಸರ್ಗೆ ಬಲಿಯಾಗುತ್ತಿದ್ದಾಳೆ. ಆಕೆ ನಿಮ್ಮ ಅಮ್ಮನಾಗಿರಬಹುದು. ಅಕ್ಕರೆಯ ಸಹೋದರಿಯಾಗಿರಬಹುದು ಅಥವಾ ಸಂಗಾತಿಯಾಗಿರಬಹುದು. ನಿಮ್ಮ ಬದುಕನ್ನು ಬೆಳಗುವ ಆ ದೇವತೆಯನ್ನು ಈ ಕ್ಯಾನ್ಸರ್ನಿಂದ ರಕ್ಷಿಸಿ~ ಎಂದು ಕುನಾಲ್ ಕಪೂರ್ ಹೇಳುತ್ತಿದ್ದಾರೆ.<br /> <br /> ಗರ್ಭಕೊರಳಿನ ಕ್ಯಾನ್ಸರ್ ವಿರುದ್ಧದ ಪ್ರಚಾರದಲ್ಲಿ ಭಾಗಿಯಾಗಿರುವ ಕುನಾಲ್ ಕಪೂರ್ಗೆ ಈ ಕೆಲಸ ಸಂತಸ ತಂದಿದೆಯಂತೆ. <br /> <br /> `ತಾರೆಗಳು ಕಾರು ಮಾರುತ್ತಾರೆ, ಕೋಲಾ ಮಾರುತ್ತಾರೆ. ಆದರೆ ಇಂಥ ಮಹತ್ವದ ವಿಷಯ ಬಂದಾಗ ಹಿಂಜರಿಯಬಾರದು. ಇದು ಬದುಕಿನ ವಿಷಯ~ ಎಂಬುದು ಅವರ ಕಿವಿಮಾತು. <br /> `ರಂಗ್ ದೇ ಬಸಂತಿ~ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ್ದ ಗುಂಗುರು ಕೂದಲಿನ ಕುನಾಲ್ `ಡಾನ್ 2~ ಚಿತ್ರದಲ್ಲೂ ಮಿಂಚಿದ್ದರು.<br /> <br /> ಭಾರತದಲ್ಲಿ ತಾರೆಯರ ಮಾತನ್ನು ನಂಬುತ್ತಾರೆ. ಆರಾಧಿಸುತ್ತಾರೆ. ಈ ಆರಾಧನೆಯನ್ನು ಜಾಗೃತಿಗಾಗಿ ಬಳಸುವುದು ಅತ್ಯುತ್ತಮ ಮಾರ್ಗವಾಗಿದೆ ಎಂದೂ ಅಭಿಪ್ರಾಯ ಪಟ್ಟಿರುವ ಅವರು, ಎಂಎಸ್ಡಿ ಫಾರ್ಮಾಸ್ಯುಟಿಕಲ್ಸ್ ಹಮ್ಮಿಕೊಂಡಿದ್ದ ಈ ಪ್ರಚಾರ ಆಂದೋಲನದಲ್ಲಿ ಭಾಗವಹಿಸಿದ್ದರು. ಪ್ರಚಾರಕ್ಕಾಗಿ ನವದೆಹಲಿಯಲ್ಲಿ ಫ್ಯಾಶನ್ ಶೋ ಒಂದನ್ನು ಕೂಡ ಆಯೋಜಿಸಲಾಗಿತ್ತು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>