<p><strong>ಆನೇಕಲ್: </strong>ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಸಂಕ್ರಾಂತಿ ಹಬ್ಬದ ನೆಪದಲ್ಲಿ ತಮಿಳುನಾಡಿನವರು ನಡೆಸುತ್ತಿದ್ದ ನಿಷೇಧಿತ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯನ್ನು ಪೊಲೀಸರು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.<br /> <br /> ತಾಲ್ಲೂಕಿನ ಇಂಡ್ಲವಾಡಿಯಲ್ಲಿ ತಮಿಳುನಾಡಿನಿಂದ ಬಂದ ನೂರಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಜಲ್ಲಿಕಲ್ಲು ಸ್ಪರ್ಧೆಗೆ ಸಜ್ಜುಗೊಳಿಸಲಾಗಿತ್ತು. ಬೆಳಿಗ್ಗೆ 10ಕ್ಕೆ ವೇಳೆಗೆ ವಿಶೇಷ ಸ್ಪರ್ಧೆಯನ್ನು ವೀಕ್ಷಿಸಲು ಸಹಸ್ರಾರು ಜನರು ಬಂದಿದ್ದರು.<br /> <br /> ಎತ್ತುಗಳ ಕೊಂಬುಗಳಿಗೆ ಕುಚ್ಚುಗಳು, ನಗದು, ಚಿನ್ನದ ಉಂಗುರ, ಮತ್ತಿತರ ಬೆಲೆ ಬಾಳುವ ಬಹುಮಾನಗಳನ್ನು ಕಟ್ಟಲಾಗಿತ್ತು. ಬಹುಮಾನಗಳನ್ನು ಕೀಳಲು ಯುವಕರ ದಂಡು ಜಮಾಯಿಸಿತ್ತು. ಹದ್ದಿನಲ್ಲಿ ಎತ್ತುಗಳು ಓಡುತ್ತಿದಂತೆ ಸಾಹಸಿ ಯುವಕರು ಅಡ್ಡಗಟ್ಟಿ ಎತ್ತುಗಳನ್ನು ನಿಲ್ಲಿಸಲು ಮುಂದಾಗುತ್ತಿದ್ದರು.<br /> <br /> ಎತ್ತುಗಳು ಹದ್ದು ಮೀರಿ ಜನರತ್ತ ದಿಕ್ಕು ದಿಸೆ ಇಲ್ಲದೇ ನುಗ್ಗಿದ್ದರಿಂದ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಗಾಯಗೊಂಡರನ್ನು ಆನೇಕಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.<br /> <br /> ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎತ್ತು ಬೆದರಿಸುವ ಅಪಾಯಕಾರಿ ಸ್ಪರ್ಧೆಯನ್ನು ನಿಷೇಧಿಸಲಾಗಿತ್ತು, ಆಹ್ವಾನ ಪತ್ರಿಕೆಯಲ್ಲಿ ಸಹ ಓಟದ ಬಗ್ಗೆ ಮಾಹಿತಿ ಪ್ರಕಟಿಸಿರಲಿಲ್ಲ, ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆಯನ್ನು ತಡೆಯಲು ಪೊಲೀಸರು ಮುಂದಾದರು.<br /> <br /> ಸಿಪಿಐ ರಾಜೇಂದ್ರ, ಪಿಎಸ್ಐ ರಾಘವೇಂದ್ರ ಬೈಂದೂರು ಸ್ಪರ್ಧೆ ನಿಲ್ಲಿಸು-ವಂತೆ ಸೂಚನೆ ನೀಡಿದರೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಡಿವೈಎಸ್ಪಿ ಬಲರಾಮೇಗೌಡ, ಅತ್ತಿಬೆಲೆ ಸಿಪಿಐ ಬಿ.ಕೆ.ಕಿಶೋರ್ಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಲಾಠಿ ಚಾರ್ಜಿಗೆ ಮುಂದಾಗುತ್ತಿದ್ದಂತೆ ಜಲ್ಲಿಕಟ್ಟು ಸ್ಪರ್ಧೆಗೆ ಬಂದಿದ್ದವರು ಅಲ್ಲಿಂದ ಕಾಲ್ಕಿತ್ತರು.<br /> <br /> ಎತ್ತುಗಳೊಂದಿಗೆ ಟೆಂಪೋ, ಬೈಕ್ ಮತ್ತಿತರ ವಾಹನಗಳೊಂದಿಗೆ ಸಹಸ್ರಾರು ಜನರು ಗ್ರಾಮಕ್ಕೆ ಬಂದಿದ್ದರಿಂದ ಪರಿಣಾಮ ಪುಟ್ಟ ಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆನೇಕಲ್: </strong>ತಾಲ್ಲೂಕಿನ ಇಂಡ್ಲವಾಡಿಯಲ್ಲಿ ಸಂಕ್ರಾಂತಿ ಹಬ್ಬದ ನೆಪದಲ್ಲಿ ತಮಿಳುನಾಡಿನವರು ನಡೆಸುತ್ತಿದ್ದ ನಿಷೇಧಿತ ಜಲ್ಲಿಕಟ್ಟು (ಹೋರಿ ಬೆದರಿಸುವ) ಸ್ಪರ್ಧೆಯನ್ನು ಪೊಲೀಸರು ನಿಲ್ಲಿಸಿದ ಘಟನೆ ಗುರುವಾರ ನಡೆದಿದೆ.<br /> <br /> ತಾಲ್ಲೂಕಿನ ಇಂಡ್ಲವಾಡಿಯಲ್ಲಿ ತಮಿಳುನಾಡಿನಿಂದ ಬಂದ ನೂರಕ್ಕೂ ಹೆಚ್ಚು ಜೊತೆ ಎತ್ತುಗಳನ್ನು ಜಲ್ಲಿಕಲ್ಲು ಸ್ಪರ್ಧೆಗೆ ಸಜ್ಜುಗೊಳಿಸಲಾಗಿತ್ತು. ಬೆಳಿಗ್ಗೆ 10ಕ್ಕೆ ವೇಳೆಗೆ ವಿಶೇಷ ಸ್ಪರ್ಧೆಯನ್ನು ವೀಕ್ಷಿಸಲು ಸಹಸ್ರಾರು ಜನರು ಬಂದಿದ್ದರು.<br /> <br /> ಎತ್ತುಗಳ ಕೊಂಬುಗಳಿಗೆ ಕುಚ್ಚುಗಳು, ನಗದು, ಚಿನ್ನದ ಉಂಗುರ, ಮತ್ತಿತರ ಬೆಲೆ ಬಾಳುವ ಬಹುಮಾನಗಳನ್ನು ಕಟ್ಟಲಾಗಿತ್ತು. ಬಹುಮಾನಗಳನ್ನು ಕೀಳಲು ಯುವಕರ ದಂಡು ಜಮಾಯಿಸಿತ್ತು. ಹದ್ದಿನಲ್ಲಿ ಎತ್ತುಗಳು ಓಡುತ್ತಿದಂತೆ ಸಾಹಸಿ ಯುವಕರು ಅಡ್ಡಗಟ್ಟಿ ಎತ್ತುಗಳನ್ನು ನಿಲ್ಲಿಸಲು ಮುಂದಾಗುತ್ತಿದ್ದರು.<br /> <br /> ಎತ್ತುಗಳು ಹದ್ದು ಮೀರಿ ಜನರತ್ತ ದಿಕ್ಕು ದಿಸೆ ಇಲ್ಲದೇ ನುಗ್ಗಿದ್ದರಿಂದ ಐವತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು ಯಾವುದೇ ಪ್ರಾಣಾಪಾಯಗಳು ಸಂಭವಿಸಿಲ್ಲ. ಗಾಯಗೊಂಡರನ್ನು ಆನೇಕಲ್ ಆಸ್ಪತ್ರೆಗೆ ದಾಖಲು ಮಾಡಲಾಯಿತು.<br /> <br /> ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಎತ್ತು ಬೆದರಿಸುವ ಅಪಾಯಕಾರಿ ಸ್ಪರ್ಧೆಯನ್ನು ನಿಷೇಧಿಸಲಾಗಿತ್ತು, ಆಹ್ವಾನ ಪತ್ರಿಕೆಯಲ್ಲಿ ಸಹ ಓಟದ ಬಗ್ಗೆ ಮಾಹಿತಿ ಪ್ರಕಟಿಸಿರಲಿಲ್ಲ, ಪೊಲೀಸರಿಗೆ ಮಾಹಿತಿ ತಿಳಿಯುತ್ತಿದ್ದಂತೆ ನಿಷೇಧಿತ ಜಲ್ಲಿಕಟ್ಟು ಸ್ಪರ್ಧೆಯನ್ನು ತಡೆಯಲು ಪೊಲೀಸರು ಮುಂದಾದರು.<br /> <br /> ಸಿಪಿಐ ರಾಜೇಂದ್ರ, ಪಿಎಸ್ಐ ರಾಘವೇಂದ್ರ ಬೈಂದೂರು ಸ್ಪರ್ಧೆ ನಿಲ್ಲಿಸು-ವಂತೆ ಸೂಚನೆ ನೀಡಿದರೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ ಡಿವೈಎಸ್ಪಿ ಬಲರಾಮೇಗೌಡ, ಅತ್ತಿಬೆಲೆ ಸಿಪಿಐ ಬಿ.ಕೆ.ಕಿಶೋರ್ಕುಮಾರ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದು ಲಾಠಿ ಚಾರ್ಜಿಗೆ ಮುಂದಾಗುತ್ತಿದ್ದಂತೆ ಜಲ್ಲಿಕಟ್ಟು ಸ್ಪರ್ಧೆಗೆ ಬಂದಿದ್ದವರು ಅಲ್ಲಿಂದ ಕಾಲ್ಕಿತ್ತರು.<br /> <br /> ಎತ್ತುಗಳೊಂದಿಗೆ ಟೆಂಪೋ, ಬೈಕ್ ಮತ್ತಿತರ ವಾಹನಗಳೊಂದಿಗೆ ಸಹಸ್ರಾರು ಜನರು ಗ್ರಾಮಕ್ಕೆ ಬಂದಿದ್ದರಿಂದ ಪರಿಣಾಮ ಪುಟ್ಟ ಗ್ರಾಮದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>