<p><strong>ನವದೆಹಲಿ: </strong>ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಮಂಗಳವಾರ ಪ್ರಕಟವಾ ಗಿದೆ.<br /> <br /> ಗುಜರಾತ್ನ ಹೇತ್ ಷಾ ಮೊದಲ ರ್ಯಾಂಕ್ ಪಡೆದಿದ್ದಾರೆ. ಷಾ ಅವರು 720ರಲ್ಲಿ 685 ಅಂಕ ಗಳಿಸಿದ್ದಾರೆ.<br /> <br /> ಎರಡನೆಯ ರ್ಯಾಂಕ್ ಒಡಿಶಾದ ಏಕಾಂಶ್ ಗೋಯಲ್ ಅವರಿಗೆ (682 ಅಂಕ), ಮೂರನೆಯ ರ್ಯಾಂಕ್ ರಾಜಸ್ತಾನದ ನಿಖಿಲ್ ಬಜಿಯಾ ಅವರಿಗೆ (678 ಅಂಕ) ಸಿಕ್ಕಿದೆ.<br /> <br /> ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ಬಾರಿ ಎರಡು ಬಾರಿ ನೀಟ್ ಪರೀಕ್ಷೆ ನಡೆಸಿತ್ತು.<br /> <br /> ಮೊದಲ ಬಾರಿ ನಡೆದ ಪರೀಕ್ಷೆಗೆ ಸುಮಾರು ಆರು ಲಕ್ಷ ವಿದ್ಯಾರ್ಥಿಗಳು, ಎರಡನೇ ಬಾರಿಯ ಪರೀಕ್ಷೆಗೆ 4.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.<br /> <br /> <strong>ರಾಜ್ಯದ ವಿದ್ಯಾರ್ಥಿಗಳು: </strong> ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ)ಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳಾದ ಎಂ.ಸೂರಜ್ 78 ಮತ್ತು ಸಂಜಯ್ ಎಸ್.ಗೌಡರ್ 122ನೇ ರ್ಯಾಂಕ್ ಪಡೆದಿದ್ದಾರೆ. ವಿವೇಕ್ ಭಟ್ ಅವರು 281ನೇ ರ್ಯಾಂಕ್ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ವೈದ್ಯಕೀಯ ಕೋರ್ಸ್ಗಳ ಪ್ರವೇಶಕ್ಕೆ ನಡೆದಿದ್ದ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯ (ನೀಟ್) ಫಲಿತಾಂಶ ಮಂಗಳವಾರ ಪ್ರಕಟವಾ ಗಿದೆ.<br /> <br /> ಗುಜರಾತ್ನ ಹೇತ್ ಷಾ ಮೊದಲ ರ್ಯಾಂಕ್ ಪಡೆದಿದ್ದಾರೆ. ಷಾ ಅವರು 720ರಲ್ಲಿ 685 ಅಂಕ ಗಳಿಸಿದ್ದಾರೆ.<br /> <br /> ಎರಡನೆಯ ರ್ಯಾಂಕ್ ಒಡಿಶಾದ ಏಕಾಂಶ್ ಗೋಯಲ್ ಅವರಿಗೆ (682 ಅಂಕ), ಮೂರನೆಯ ರ್ಯಾಂಕ್ ರಾಜಸ್ತಾನದ ನಿಖಿಲ್ ಬಜಿಯಾ ಅವರಿಗೆ (678 ಅಂಕ) ಸಿಕ್ಕಿದೆ.<br /> <br /> ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್ಇ) ಈ ಬಾರಿ ಎರಡು ಬಾರಿ ನೀಟ್ ಪರೀಕ್ಷೆ ನಡೆಸಿತ್ತು.<br /> <br /> ಮೊದಲ ಬಾರಿ ನಡೆದ ಪರೀಕ್ಷೆಗೆ ಸುಮಾರು ಆರು ಲಕ್ಷ ವಿದ್ಯಾರ್ಥಿಗಳು, ಎರಡನೇ ಬಾರಿಯ ಪರೀಕ್ಷೆಗೆ 4.75 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು.<br /> <br /> <strong>ರಾಜ್ಯದ ವಿದ್ಯಾರ್ಥಿಗಳು: </strong> ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್ಇಇಟಿ)ಯಲ್ಲಿ ಬೆಂಗಳೂರಿನ ವಿದ್ಯಾರ್ಥಿಗಳಾದ ಎಂ.ಸೂರಜ್ 78 ಮತ್ತು ಸಂಜಯ್ ಎಸ್.ಗೌಡರ್ 122ನೇ ರ್ಯಾಂಕ್ ಪಡೆದಿದ್ದಾರೆ. ವಿವೇಕ್ ಭಟ್ ಅವರು 281ನೇ ರ್ಯಾಂಕ್ ಪಡೆದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>