<p>ಗುಂಡ್ಲುಪೇಟೆ ತಾಲೂಕಿನಲ್ಲಿ ಹುತ್ತದ ಕೋವಿ ಸೇರುವ ಶಿಶುವಿನ ಶವದ ಸಂಗತಿ ಇತ್ತೀಚೆಗೆ ವರದಿಯಾಗಿದೆ. (ಪ್ರ.ವಾ. ಜೂನ್ 7). ಈ ಆಚರಣೆ ಶಾಪ ರೂಪದ ಬಯ್ಗುಳವಾಗಿ ಈಗಲೂ ತೆಂಕಣ ಕರ್ನಾಟಕದ ಹಳ್ಳಿಗರ ಮಾತುಕತೆಗಳಲ್ಲಿ ಬಳಕೆಯಾಗುತ್ತಿದೆ. ಹೆತ್ತ ಮಕ್ಕಳು ಉಳಿಯದೆ ಕೂಡಲೇ ಸಾಯಲಿ ಎಂಬ ಉದ್ದೆೀಶದಿಂದ ಹಾಕುವ ಶಾಪದ ನುಡಿಯಿದು.<br /> <br /> ಮಗು ಹುಟ್ಟಿ ನಾಲ್ಕಾರು ದಿನಗಳಲ್ಲಿಯೇ ಸಾವನ್ನಪ್ಪಿದಾಗ, ಅದಕ್ಕೆ ಚಟ್ಟ ಕಟ್ಟಿ ಕೊಂಡು ಹೋಗಿ ಮಸಣದಲ್ಲಿ ಹೂಳುವುದಿಲ್ಲ, ಇ್ಲ್ಲಲ ವೇ ಸುಡುವುದಿಲ್ಲ. ಇದಕ್ಕೆ ಬದಲಾಗಿ ಮಗುವಿನ ಹೆಣವನ್ನು ಬಾಳೆ ಎಲೆಯ ಮೇಲಿಟ್ಟು, ಕೈಯಲ್ಲೇ ಎತ್ತಿಕೊಂಡು ಹೋಗಿ, ಹುತ್ತ ಬಗೆದು, ಹುತ್ತದ ಬಾಯಲ್ಲಿ ಇಲ್ಲವೇ ಬುಡದಲ್ಲಿ ಹೆಣವನ್ನು ಹೂಳಿ, ಅದರ ಮೇಲೆ ಅಂಕೋಲೆ ಕಡ್ಡಿ , ಇತರ ಮುಳ್ಳಿನ ಕೋಲುಗಳನ್ನು ಜೋಡಿಸಿ, ಮುಳ್ಳಿನ ರಾಶಿಯ ಮೇಲೆ ದಪ್ಪನೆ ಕಲ್ಲು ದಿಂಡುಗಳನ್ನು ಇಡುತ್ತಾರೆ. ನಾಯಿ, ನರಿಗಳು ಹೆಣವನ್ನು ಕಿತ್ತು ತಿನ್ನದಿರಲೆಂದು ಈ ರೀತಿ ಕಲ್ಲು ಮುಳ್ಳನ್ನು ಹೇರುತ್ತಾರೆ. ಕನ್ನಡಿಗರಲ್ಲಿ ಬಳಕೆಯಾಗುತ್ತಿರುವ ಶಾಪ ರೂಪದ ಬಯ್ಗುಳಗಳಲ್ಲಿ ಈ ಬಗೆಯ ನೂರಾರು ಆಚರಣೆಗಳು ದಾಖಲಾಗಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗುಂಡ್ಲುಪೇಟೆ ತಾಲೂಕಿನಲ್ಲಿ ಹುತ್ತದ ಕೋವಿ ಸೇರುವ ಶಿಶುವಿನ ಶವದ ಸಂಗತಿ ಇತ್ತೀಚೆಗೆ ವರದಿಯಾಗಿದೆ. (ಪ್ರ.ವಾ. ಜೂನ್ 7). ಈ ಆಚರಣೆ ಶಾಪ ರೂಪದ ಬಯ್ಗುಳವಾಗಿ ಈಗಲೂ ತೆಂಕಣ ಕರ್ನಾಟಕದ ಹಳ್ಳಿಗರ ಮಾತುಕತೆಗಳಲ್ಲಿ ಬಳಕೆಯಾಗುತ್ತಿದೆ. ಹೆತ್ತ ಮಕ್ಕಳು ಉಳಿಯದೆ ಕೂಡಲೇ ಸಾಯಲಿ ಎಂಬ ಉದ್ದೆೀಶದಿಂದ ಹಾಕುವ ಶಾಪದ ನುಡಿಯಿದು.<br /> <br /> ಮಗು ಹುಟ್ಟಿ ನಾಲ್ಕಾರು ದಿನಗಳಲ್ಲಿಯೇ ಸಾವನ್ನಪ್ಪಿದಾಗ, ಅದಕ್ಕೆ ಚಟ್ಟ ಕಟ್ಟಿ ಕೊಂಡು ಹೋಗಿ ಮಸಣದಲ್ಲಿ ಹೂಳುವುದಿಲ್ಲ, ಇ್ಲ್ಲಲ ವೇ ಸುಡುವುದಿಲ್ಲ. ಇದಕ್ಕೆ ಬದಲಾಗಿ ಮಗುವಿನ ಹೆಣವನ್ನು ಬಾಳೆ ಎಲೆಯ ಮೇಲಿಟ್ಟು, ಕೈಯಲ್ಲೇ ಎತ್ತಿಕೊಂಡು ಹೋಗಿ, ಹುತ್ತ ಬಗೆದು, ಹುತ್ತದ ಬಾಯಲ್ಲಿ ಇಲ್ಲವೇ ಬುಡದಲ್ಲಿ ಹೆಣವನ್ನು ಹೂಳಿ, ಅದರ ಮೇಲೆ ಅಂಕೋಲೆ ಕಡ್ಡಿ , ಇತರ ಮುಳ್ಳಿನ ಕೋಲುಗಳನ್ನು ಜೋಡಿಸಿ, ಮುಳ್ಳಿನ ರಾಶಿಯ ಮೇಲೆ ದಪ್ಪನೆ ಕಲ್ಲು ದಿಂಡುಗಳನ್ನು ಇಡುತ್ತಾರೆ. ನಾಯಿ, ನರಿಗಳು ಹೆಣವನ್ನು ಕಿತ್ತು ತಿನ್ನದಿರಲೆಂದು ಈ ರೀತಿ ಕಲ್ಲು ಮುಳ್ಳನ್ನು ಹೇರುತ್ತಾರೆ. ಕನ್ನಡಿಗರಲ್ಲಿ ಬಳಕೆಯಾಗುತ್ತಿರುವ ಶಾಪ ರೂಪದ ಬಯ್ಗುಳಗಳಲ್ಲಿ ಈ ಬಗೆಯ ನೂರಾರು ಆಚರಣೆಗಳು ದಾಖಲಾಗಿವೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>