<p><strong>ಚಿಕ್ಕಬಳ್ಳಾಪುರ:</strong> ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡೆ ಅತ್ಯಂತ ವಿಷಾದದ ಸಂಗತಿ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.<br /> <br /> ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರ ಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಡಾ.ಪರಮ ಶಿವಯ್ಯನವರ ವರದಿಯನ್ನು ಅವೈಜ್ಞಾ ನಿಕ ಎಂದು ಹೇಳಿ, ಕೆ.ಸಿ.ರೆಡ್ಡಿ ಅವರ ವರದಿಯನ್ನು ಜಾರಿ ಗೊಳಿಸಲು ಮುಂದಾಗಿದ್ದರು.<br /> <br /> ಪ್ರಾಂತ್ಯ ರೈತಸಂಘ ಹಾಗೂ ಜನಪರ ಸಂಘಟನೆಗಳು ಇದರ ವಿರುದ್ಧ ಚಳವಳಿ ನಡೆಸಿದಾಗ ಲಾಟಿ ಚಾರ್ಜ್ ಮಾಡಿ ಸಲಾಗಿತ್ತು. ಆದರೆ ಈಗ `ನಮ್ಮ ಪಕ್ಷಕ್ಕೆ ಅಧಿಕಾರ ನೀಡಿ ಪರಮಶಿವಯ್ಯನವರ ವರದಿ ಜಾರಿಗೊಳಿಸುತ್ತೇವೆ~ ಎನ್ನುತ್ತಿದ್ದಾರೆ. ನಮಗೆ ನೀರಿನ ರಾಜಕೀಯ ಬೇಡ ನೀರು ಬೇಕಷ್ಟೆ ಎಂದು ಹೇಳಿದರು.<br /> <br /> `ಶಾಶ್ವತ ನೀರಾವರಿ ಹೋರಾಟ ಸಮಿತಿ ಪಕ್ಷಾತೀತವಾಗಿ ಜಾತ್ಯತೀತವಾಗಿ ರಚನೆಯಾಗಿದೆ. ಇದಕ್ಕೆ ರಾಜಕೀಯದ ಬಣ್ಣ ಬೆರೆಸಬಾರದು. ಇದರಿಂದ ಹೋರಾಟ ಪಕ್ಷಕ್ಕೆ ಸೀಮಿತವಾಗಿ ಚಳವಳಿ ಖಾವು ಕುಂಠಿತಗೊಳ್ಳುತ್ತದೆ. ಹೋರಾ ಟಗಳು ರಾಜಕೀಯ ಮುಖಂಡರಿಂದಲ್ಲ, ಜನ ಬೀದಿಗಿಳಿದು ಚಳವಳಿ ನಡೆಸಿದಾಗ ಮಾತ್ರ ಯಶಸ್ವಿ ಯಾಗುತ್ತದೆ. <br /> <br /> ಮುಂದಿನ ದಿನಗಳಲ್ಲಿ ನೀರಾವರಿ ಹೋರಾಟ ಜನಪರ ಹೋರಾಟವನ್ನಾಗಿ ಮಾಡಲು ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜನರನ್ನು ಒಗ್ಗೂಡಿಸಲಾಗುವುದು. ಮನೆಗೊಬ್ಬರು ಭಾಗವಹಿಸಿದಾಗ ಮಾತ್ರ ಚಳವಳಿ ಯಶಸ್ವಿ ಯಾಗುತ್ತದೆ ಎಂದು ವಿವರಿಸಿದರು.<br /> <br /> ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಡಿವೈಎಫ್ಐ ಜಿಲ್ಲಾಧ್ಯಕ್ಷ ಚಂದ್ರಾ ಯಪ್ಪ, ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ಸಿ.ಗೋಪಿನಾಥ್, ಸಿಐಟಿಯು ಮುಖಂಡ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ನೀರಿಗಾಗಿ ನಡೆಯುತ್ತಿರುವ ಹೋರಾಟವನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ನಡೆ ಅತ್ಯಂತ ವಿಷಾದದ ಸಂಗತಿ ಎಂದು ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಂ.ಪಿ.ಮುನಿವೆಂಕಟಪ್ಪ ತಿಳಿಸಿದರು.<br /> <br /> ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕುಮಾರ ಸ್ವಾಮಿ ಅವರು ಅಧಿಕಾರದಲ್ಲಿದ್ದಾಗ ಡಾ.ಪರಮ ಶಿವಯ್ಯನವರ ವರದಿಯನ್ನು ಅವೈಜ್ಞಾ ನಿಕ ಎಂದು ಹೇಳಿ, ಕೆ.ಸಿ.ರೆಡ್ಡಿ ಅವರ ವರದಿಯನ್ನು ಜಾರಿ ಗೊಳಿಸಲು ಮುಂದಾಗಿದ್ದರು.<br /> <br /> ಪ್ರಾಂತ್ಯ ರೈತಸಂಘ ಹಾಗೂ ಜನಪರ ಸಂಘಟನೆಗಳು ಇದರ ವಿರುದ್ಧ ಚಳವಳಿ ನಡೆಸಿದಾಗ ಲಾಟಿ ಚಾರ್ಜ್ ಮಾಡಿ ಸಲಾಗಿತ್ತು. ಆದರೆ ಈಗ `ನಮ್ಮ ಪಕ್ಷಕ್ಕೆ ಅಧಿಕಾರ ನೀಡಿ ಪರಮಶಿವಯ್ಯನವರ ವರದಿ ಜಾರಿಗೊಳಿಸುತ್ತೇವೆ~ ಎನ್ನುತ್ತಿದ್ದಾರೆ. ನಮಗೆ ನೀರಿನ ರಾಜಕೀಯ ಬೇಡ ನೀರು ಬೇಕಷ್ಟೆ ಎಂದು ಹೇಳಿದರು.<br /> <br /> `ಶಾಶ್ವತ ನೀರಾವರಿ ಹೋರಾಟ ಸಮಿತಿ ಪಕ್ಷಾತೀತವಾಗಿ ಜಾತ್ಯತೀತವಾಗಿ ರಚನೆಯಾಗಿದೆ. ಇದಕ್ಕೆ ರಾಜಕೀಯದ ಬಣ್ಣ ಬೆರೆಸಬಾರದು. ಇದರಿಂದ ಹೋರಾಟ ಪಕ್ಷಕ್ಕೆ ಸೀಮಿತವಾಗಿ ಚಳವಳಿ ಖಾವು ಕುಂಠಿತಗೊಳ್ಳುತ್ತದೆ. ಹೋರಾ ಟಗಳು ರಾಜಕೀಯ ಮುಖಂಡರಿಂದಲ್ಲ, ಜನ ಬೀದಿಗಿಳಿದು ಚಳವಳಿ ನಡೆಸಿದಾಗ ಮಾತ್ರ ಯಶಸ್ವಿ ಯಾಗುತ್ತದೆ. <br /> <br /> ಮುಂದಿನ ದಿನಗಳಲ್ಲಿ ನೀರಾವರಿ ಹೋರಾಟ ಜನಪರ ಹೋರಾಟವನ್ನಾಗಿ ಮಾಡಲು ಪಂಚಾಯಿತಿ, ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜನರನ್ನು ಒಗ್ಗೂಡಿಸಲಾಗುವುದು. ಮನೆಗೊಬ್ಬರು ಭಾಗವಹಿಸಿದಾಗ ಮಾತ್ರ ಚಳವಳಿ ಯಶಸ್ವಿ ಯಾಗುತ್ತದೆ ಎಂದು ವಿವರಿಸಿದರು.<br /> <br /> ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಸಿದ್ದಗಂಗಪ್ಪ, ಡಿವೈಎಫ್ಐ ಜಿಲ್ಲಾಧ್ಯಕ್ಷ ಚಂದ್ರಾ ಯಪ್ಪ, ಕೆಪಿಆರ್ಎಸ್ ಜಿಲ್ಲಾ ಕಾರ್ಯದರ್ಶಿ ಸಿ.ಗೋಪಿನಾಥ್, ಸಿಐಟಿಯು ಮುಖಂಡ ಮುನಿಕೃಷ್ಣಪ್ಪ ಮತ್ತಿತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>