<p><strong>ಸಿಂದಗಿ: </strong>ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದರಿಂದ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟಿಸಿದ ಘಟನೆ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.<br /> <br /> ಜೋಡುಗುಡಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಹಳೇ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಕೆಲ ಕಾಲ ಧರಣಿ ನಡೆಸಲಾಯಿತು.<br /> <br /> ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರಾಜು ಅಡಕಿ, ಪ್ರವೀಣ ಜಗಶೆಟ್ಟಿ, ಬಾಬು ಬಡೇಮಗೋಳ ಮಾತನಾಡಿದರು.<br /> <br /> ಗ್ರಾಮದಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ದೂರದ ಭಾವಿಗಳಿಂದ ನೀರು ಹೊತ್ತು ತರಬೇಕಾದ ದುಃಸ್ಥಿತಿ ಇದೆ. <br /> <br /> ಬಿಸಿಲಿನ ತಾಪ ಮತ್ತು ವಿದ್ಯುತ್ ಅಭಾವದಿಂದ ನೀರು ತರುವುದೂ ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹೋರಾಟ ಅನಿವಾರ್ಯ ವಾಗಲಿದೆ ಎಂದಿದ್ದಾರೆ. <br /> <br /> ಪ್ರತಿಭಟನೆಯಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಎಸ್.ಬಿ. ಮೋಪಗಾರ, ಭೀಮಣ್ಣ ಸಜ್ಜನ, ಮಹಿಬೂಬ್ ಮುಲ್ಲಾ, ಗಂಗಾಧರ ಪಟ್ಟಣಶೆಟ್ಟಿ, ಅನಿಲ ಕಪ್ಪಡಿಮಠ, ಮಡಿವಾಳಪ್ಪ ವಾಲಿಕಾರ, ರಫೀಕ್ ಮಂದೇವಾಲಿ, ಅಲ್ಲಾಭಕ್ಷ ಹೊಸಮನಿ, ರಾಜು ಶಿರಸಗಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂದಗಿ: </strong>ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದ್ದರಿಂದ ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ಖಾಲಿ ಕೊಡಗಳನ್ನು ಪ್ರದರ್ಶಿಸಿ ಗ್ರಾಮ ಪಂಚಾಯಿತಿ ವಿರುದ್ಧ ಪ್ರತಿಭಟಿಸಿದ ಘಟನೆ ಸಿಂದಗಿ ತಾಲ್ಲೂಕಿನ ಕಲಕೇರಿ ಗ್ರಾಮದಲ್ಲಿ ನಡೆದಿದೆ.<br /> <br /> ಜೋಡುಗುಡಿಯಿಂದ ಪ್ರತಿಭಟನಾ ಮೆರವಣಿಗೆ ಆರಂಭಗೊಂಡು ಹಳೇ ಗ್ರಾಮ ಪಂಚಾಯತಿ ಕಾರ್ಯಾಲಯದ ಎದುರು ಕೆಲ ಕಾಲ ಧರಣಿ ನಡೆಸಲಾಯಿತು.<br /> <br /> ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ರಾಜು ಅಡಕಿ, ಪ್ರವೀಣ ಜಗಶೆಟ್ಟಿ, ಬಾಬು ಬಡೇಮಗೋಳ ಮಾತನಾಡಿದರು.<br /> <br /> ಗ್ರಾಮದಲ್ಲಿ ತಿಂಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗುತ್ತಿದೆ. ಇದರಿಂದಾಗಿ ಗ್ರಾಮಸ್ಥರು ದೂರದ ಭಾವಿಗಳಿಂದ ನೀರು ಹೊತ್ತು ತರಬೇಕಾದ ದುಃಸ್ಥಿತಿ ಇದೆ. <br /> <br /> ಬಿಸಿಲಿನ ತಾಪ ಮತ್ತು ವಿದ್ಯುತ್ ಅಭಾವದಿಂದ ನೀರು ತರುವುದೂ ಕಷ್ಟವಾಗಿದೆ. ಇದೇ ಪರಿಸ್ಥಿತಿ ಮುಂದುವರೆದರೆ ಹೋರಾಟ ಅನಿವಾರ್ಯ ವಾಗಲಿದೆ ಎಂದಿದ್ದಾರೆ. <br /> <br /> ಪ್ರತಿಭಟನೆಯಲ್ಲಿ ಕರವೇ ಗ್ರಾಮ ಘಟಕದ ಅಧ್ಯಕ್ಷ ಎಸ್.ಬಿ. ಮೋಪಗಾರ, ಭೀಮಣ್ಣ ಸಜ್ಜನ, ಮಹಿಬೂಬ್ ಮುಲ್ಲಾ, ಗಂಗಾಧರ ಪಟ್ಟಣಶೆಟ್ಟಿ, ಅನಿಲ ಕಪ್ಪಡಿಮಠ, ಮಡಿವಾಳಪ್ಪ ವಾಲಿಕಾರ, ರಫೀಕ್ ಮಂದೇವಾಲಿ, ಅಲ್ಲಾಭಕ್ಷ ಹೊಸಮನಿ, ರಾಜು ಶಿರಸಗಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>