<p><strong>ಸವದತ್ತಿ:</strong> ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತನೇ ಬೆನ್ನೆಲುಬು. ಆದರೆ ಆತನ ಬೆನ್ನು ಮುರಿಯುವ ಕೆಲಸ ವಾಗಬಾರದು. ಒಕ್ಕಲುತನಕ್ಕೆ ನೀರು ಅಗತ್ಯವಿದೆ. ಭೂಮಿ ಹಸಿರಾದರೆ ಅದೇ ಸಮಸ್ತರ ಉಸಿರು ಎಂದು ಶಿರಕೊಳ್ಳದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.<br /> <br /> ಕಳೆದ ಮೂರು ದಿನದಿಂದ ಮಲಪ್ರಭಾ ನದಿಗೆ ಮಹದಾಯಿ ಜೋಡಿಸುವಂತೆ ಆಗ್ರಹಿಸಿ ರೈತ ಸೇನಾ ಮಿನಿ ವಿಧಾನಸೌಧದ ಎದುರು ಆಯೋಜಿಸಿದ್ದ ರೈತರ ಚಿಂತನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಸಮಸ್ತ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಅದನ್ನು ಅರಿತು ನ್ಯಾಯಾಧೀಕರಣ ಸಮಿತಿ ಸಾಧಕಬಾಧಕಗಳನ್ನು ತಿಳಿದು ಅನುಕೂಲ ಮಾಡಿಕೊಡುವುದು ಉತ್ತಮ ಎಂದರು.<br /> <br /> ಮಹಾದಾಯಿ ಯೋಜನೆ ಸರ್ಕಾರಕ್ಕೆ ಹೊರೆಯಲ್ಲ. ಇಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಅದನ್ನು ಸರಿಪಡಿಸಿಕೊಂಡು 3 ದಶಕದ ಸಮಸ್ಯೆಗೆ ಪರಿಹಾರ ನೀಡಲು ಇದು ಸೂಕ್ತ ಸಮಯ ಎಂದರು.<br /> <br /> ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಭಾರತ ಪ್ರಗತಿ ಪಥದತ್ತ ಸಾಗುತ್ತಿದೆ. ಗಣಕಯಂತ್ರದಿಂದ ಸಾಧನೆ ಮಾಡಿದೆ. ಆದರೆ ಅದೇ ಗಣಕಯಂತ್ರದಿಂದ ಜೋಳದಂಥ ಆಹಾರ ಧಾನ್ಯ ಬೆಳೆಯಲು ಸಾಧ್ಯವಿಲ್ಲ. ಅದನ್ನು ನೇಗಿಲಯೋಗಿಗೆ ಮಾತ್ರ ಬೆಳೆಯಲು ಸಾಧ್ಯ ಎಂದರು. <br /> <br /> ಇದೇ ತಿಂಗಳು 21 ರಂದು ಮಲಪ್ರಭಾ ಅಣೆಕಟ್ಟಿಗೆ ಮಹಾದಾಯಿ ನ್ಯಾಯಮಂಡಳಿ ನ್ಯಾಯಾಧೀಶರು ವಿಕ್ಷಣೆಗೆ ಬರುತ್ತಿದ್ದು, ಅವರಿಗೆ ಈ ಭಾಗದ ರೈತರ ಸಮಸ್ಯೆ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದರು. ನವಲಗುಂದ ಪಂಚಗ್ರಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ . ಈರಣ್ಣ ಕಾಂತಿಮಠ, ಎಲ್.ಎಸ್ ನಾಯಕ, ಬಸಪ್ಪ ಉತ್ತೂರ, ಚಿದಂಬರ ಮುಂಡಾಸ, ಎಸ್.ಎನ್. ಫಕ್ಕೀರಗೌಡರ, ಈರಪ್ಪ ಬಾಳೋಜಿ, ಶಿವಪ್ಪ ಚೌವಡಿ, ರುದ್ರಪ್ಪ ನಾಯ್ಕರ, ಪಂಚಪ್ಪ ಗಾಣಿಗೇರ, ಶಿವಪ್ಪ ಬನದೂರಬಿ, ನಿಂಬಣ್ಣ ಗಾಣಿಗೇರ, ಪಂಚಪ್ಪ ಮೊರಬದ, ರಾಮಪ್ಪ ಗಾಣಿಗೇರ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ಕೃಷಿ ಪ್ರಧಾನ ರಾಷ್ಟ್ರದಲ್ಲಿ ರೈತನೇ ಬೆನ್ನೆಲುಬು. ಆದರೆ ಆತನ ಬೆನ್ನು ಮುರಿಯುವ ಕೆಲಸ ವಾಗಬಾರದು. ಒಕ್ಕಲುತನಕ್ಕೆ ನೀರು ಅಗತ್ಯವಿದೆ. ಭೂಮಿ ಹಸಿರಾದರೆ ಅದೇ ಸಮಸ್ತರ ಉಸಿರು ಎಂದು ಶಿರಕೊಳ್ಳದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.<br /> <br /> ಕಳೆದ ಮೂರು ದಿನದಿಂದ ಮಲಪ್ರಭಾ ನದಿಗೆ ಮಹದಾಯಿ ಜೋಡಿಸುವಂತೆ ಆಗ್ರಹಿಸಿ ರೈತ ಸೇನಾ ಮಿನಿ ವಿಧಾನಸೌಧದ ಎದುರು ಆಯೋಜಿಸಿದ್ದ ರೈತರ ಚಿಂತನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಭಾಗದ ಸಮಸ್ತ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ ಅದನ್ನು ಅರಿತು ನ್ಯಾಯಾಧೀಕರಣ ಸಮಿತಿ ಸಾಧಕಬಾಧಕಗಳನ್ನು ತಿಳಿದು ಅನುಕೂಲ ಮಾಡಿಕೊಡುವುದು ಉತ್ತಮ ಎಂದರು.<br /> <br /> ಮಹಾದಾಯಿ ಯೋಜನೆ ಸರ್ಕಾರಕ್ಕೆ ಹೊರೆಯಲ್ಲ. ಇಲ್ಲಿ ರಾಜಕೀಯ ಇಚ್ಛಾಶಕ್ತಿಯ ಕೊರತೆ ಇದೆ. ಅದನ್ನು ಸರಿಪಡಿಸಿಕೊಂಡು 3 ದಶಕದ ಸಮಸ್ಯೆಗೆ ಪರಿಹಾರ ನೀಡಲು ಇದು ಸೂಕ್ತ ಸಮಯ ಎಂದರು.<br /> <br /> ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಮಾತನಾಡಿ, ಭಾರತ ಪ್ರಗತಿ ಪಥದತ್ತ ಸಾಗುತ್ತಿದೆ. ಗಣಕಯಂತ್ರದಿಂದ ಸಾಧನೆ ಮಾಡಿದೆ. ಆದರೆ ಅದೇ ಗಣಕಯಂತ್ರದಿಂದ ಜೋಳದಂಥ ಆಹಾರ ಧಾನ್ಯ ಬೆಳೆಯಲು ಸಾಧ್ಯವಿಲ್ಲ. ಅದನ್ನು ನೇಗಿಲಯೋಗಿಗೆ ಮಾತ್ರ ಬೆಳೆಯಲು ಸಾಧ್ಯ ಎಂದರು. <br /> <br /> ಇದೇ ತಿಂಗಳು 21 ರಂದು ಮಲಪ್ರಭಾ ಅಣೆಕಟ್ಟಿಗೆ ಮಹಾದಾಯಿ ನ್ಯಾಯಮಂಡಳಿ ನ್ಯಾಯಾಧೀಶರು ವಿಕ್ಷಣೆಗೆ ಬರುತ್ತಿದ್ದು, ಅವರಿಗೆ ಈ ಭಾಗದ ರೈತರ ಸಮಸ್ಯೆ ಕುರಿತು ಮನವಿ ಸಲ್ಲಿಸುವುದಾಗಿ ಹೇಳಿದರು. ನವಲಗುಂದ ಪಂಚಗ್ರಹ ಹಿರೇಮಠದ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ . ಈರಣ್ಣ ಕಾಂತಿಮಠ, ಎಲ್.ಎಸ್ ನಾಯಕ, ಬಸಪ್ಪ ಉತ್ತೂರ, ಚಿದಂಬರ ಮುಂಡಾಸ, ಎಸ್.ಎನ್. ಫಕ್ಕೀರಗೌಡರ, ಈರಪ್ಪ ಬಾಳೋಜಿ, ಶಿವಪ್ಪ ಚೌವಡಿ, ರುದ್ರಪ್ಪ ನಾಯ್ಕರ, ಪಂಚಪ್ಪ ಗಾಣಿಗೇರ, ಶಿವಪ್ಪ ಬನದೂರಬಿ, ನಿಂಬಣ್ಣ ಗಾಣಿಗೇರ, ಪಂಚಪ್ಪ ಮೊರಬದ, ರಾಮಪ್ಪ ಗಾಣಿಗೇರ ಮುಂತಾದವರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>