<p><strong>ಮಂಗಳೂರು:</strong>ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಂಆರ್ಪಿಎಲ್ನಲ್ಲಿನ 2 ಮತ್ತು 3ನೇ ಹಂತದ ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಬಂಟ್ವಾಳ ಸಮೀಪದ ಸರಪಾಡಿಯಲ್ಲಿ ನಿರ್ಮಿಸಲಾದ ಅಣೆಕಟ್ಟೆಯಿಂದ ಎಂಆರ್ಪಿಎಲ್ಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಎಂಆರ್ಪಿಎಲ್ ನೀರೆತ್ತುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. <br /> <br /> ನೇತ್ರಾವತಿ ಒಳಹರಿವು ಮತ್ತಷ್ಟು ಕುಸಿದಿರುವುದರಿಂದ ನೇತ್ರಾವತಿ ನದಿಯಿಂದ ನೀರೆತ್ತುವುದನ್ನು ಎಂಆರ್ಪಿಎಲ್ ಕಂಪೆನಿ ಬುಧವಾರದಿಂದ ಸಂಪೂರ್ಣ ಸ್ಥಗಿತಗೊಳಿಸಿದೆ. ಹೀಗಾಗಿ ಮಳೆ ಬಂದು ನೀರು ಲಭ್ಯವಾಗುವವರೆಗೆ 2 ಮತ್ತು 3ನೇ ಘಟಕಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕಂಪೆನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜಯ್ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ಎಂಆರ್ಪಿಎಲ್ ಯೋಜನಾ ಪ್ರದೇಶದಲ್ಲಿ ಒಟ್ಟು ನಾಲ್ಕು ಜಲಸಂಗ್ರಹ ತಾಣಗಳಿದ್ದು, ಈ ಸಂಗ್ರಹದಿಂದ ಒಂದು ಘಟಕವನ್ನು ಒಂದು ವಾರ ಕಾಲ ನಡೆಸಬಹುದು. ವಾರದೊಳಗೆ ಮಳೆ ಬಂದು ನೇತ್ರಾವತಿಯಲ್ಲಿ ನೀರು ಹರಿಯದಿದ್ದರೆ ಇನ್ನೊಂದು ಘಟಕವನ್ನೂ ಸ್ಥಗಿತಗೊಳಿಸಬೇಕಾಗಬಹುದು ಎಂದು ಹೇಳಲಾಗಿದೆ.<br /> <br /> ಎಂಆರ್ಪಿಎಲ್ನಲ್ಲಿನ ತೈಲ ಶುದ್ಧೀಕರಣ ಕಾರ್ಯ ಬಹುತೇಕ ಸ್ಥಗಿತಗೊಂಡಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಇತರ ಶುದ್ಧೀಕರಣ ಸ್ಥಾವರಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಂಡು ಕೊರತೆ ನಿವಾರಿಸುವ ಭರವಸೆಯನ್ನು ತೈಲ ಕಂಪೆನಿಗಳು ನೀಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong>ನೇತ್ರಾವತಿ ನದಿಯಲ್ಲಿ ನೀರಿನ ಒಳ ಹರಿವು ಪ್ರಮಾಣ ತೀರಾ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಎಂಆರ್ಪಿಎಲ್ನಲ್ಲಿನ 2 ಮತ್ತು 3ನೇ ಹಂತದ ಶುದ್ಧೀಕರಣ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ.<br /> <br /> ಬಂಟ್ವಾಳ ಸಮೀಪದ ಸರಪಾಡಿಯಲ್ಲಿ ನಿರ್ಮಿಸಲಾದ ಅಣೆಕಟ್ಟೆಯಿಂದ ಎಂಆರ್ಪಿಎಲ್ಗೆ ನೀರು ಸರಬರಾಜು ಆಗುತ್ತಿತ್ತು. ಆದರೆ ಮಂಗಳೂರು ನಗರಕ್ಕೆ ನೀರು ಪೂರೈಸುವ ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದರಿಂದ ಎಂಆರ್ಪಿಎಲ್ ನೀರೆತ್ತುವುದಕ್ಕೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. <br /> <br /> ನೇತ್ರಾವತಿ ಒಳಹರಿವು ಮತ್ತಷ್ಟು ಕುಸಿದಿರುವುದರಿಂದ ನೇತ್ರಾವತಿ ನದಿಯಿಂದ ನೀರೆತ್ತುವುದನ್ನು ಎಂಆರ್ಪಿಎಲ್ ಕಂಪೆನಿ ಬುಧವಾರದಿಂದ ಸಂಪೂರ್ಣ ಸ್ಥಗಿತಗೊಳಿಸಿದೆ. ಹೀಗಾಗಿ ಮಳೆ ಬಂದು ನೀರು ಲಭ್ಯವಾಗುವವರೆಗೆ 2 ಮತ್ತು 3ನೇ ಘಟಕಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕಂಪೆನಿಯ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಸಂಜಯ್ ದೀಕ್ಷಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> ಎಂಆರ್ಪಿಎಲ್ ಯೋಜನಾ ಪ್ರದೇಶದಲ್ಲಿ ಒಟ್ಟು ನಾಲ್ಕು ಜಲಸಂಗ್ರಹ ತಾಣಗಳಿದ್ದು, ಈ ಸಂಗ್ರಹದಿಂದ ಒಂದು ಘಟಕವನ್ನು ಒಂದು ವಾರ ಕಾಲ ನಡೆಸಬಹುದು. ವಾರದೊಳಗೆ ಮಳೆ ಬಂದು ನೇತ್ರಾವತಿಯಲ್ಲಿ ನೀರು ಹರಿಯದಿದ್ದರೆ ಇನ್ನೊಂದು ಘಟಕವನ್ನೂ ಸ್ಥಗಿತಗೊಳಿಸಬೇಕಾಗಬಹುದು ಎಂದು ಹೇಳಲಾಗಿದೆ.<br /> <br /> ಎಂಆರ್ಪಿಎಲ್ನಲ್ಲಿನ ತೈಲ ಶುದ್ಧೀಕರಣ ಕಾರ್ಯ ಬಹುತೇಕ ಸ್ಥಗಿತಗೊಂಡಿರುವುದರಿಂದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯಲ್ಲೂ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಇತರ ಶುದ್ಧೀಕರಣ ಸ್ಥಾವರಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ತರಿಸಿಕೊಂಡು ಕೊರತೆ ನಿವಾರಿಸುವ ಭರವಸೆಯನ್ನು ತೈಲ ಕಂಪೆನಿಗಳು ನೀಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>