<p><strong>ಕುದೂರು: </strong>ತಾಲ್ಲೂಕಿನ ಕುದೂರು ಹೋಬಳಿ ಕೇಂದ್ರದಲ್ಲಿ ವಾಟರ್ ಹೆಲ್ತ್ ಇಂಡಿಯಾದವರಿಂದ ಸ್ಥಾಪಿತವಾದ ನೀರಿನ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲರಾಜು ಬುಧವಾರ ಉದ್ಘಾಟಿಸಿದರು.<br /> <br /> ಈ ನೀರಿನ ಶುದ್ಧೀಕರಣ ಘಟಕವನ್ನು ಶಿವಗಂಗೆ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾಗಿದ್ದು ಕುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಸ್ಥರು ಇದರ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ ಎಂದರು.<br /> ವಾಟರ್ ಹೆಲ್ತ್ ಇಂಡಿಯಾ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪರವಾನಗಿ ಪಡೆದು ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯಗಳಲ್ಲಿ 475 ಘಟಕಗಳನ್ನು ಸ್ಥಾಪಿಸಲಾಗಿದೆ.<br /> <br /> ಹಳ್ಳಿ ಮತ್ತು ನಗರವಾಸಿಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾಗುವ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುವ ಮತ್ತು ಜನತೆಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರನ್ನು ಒದಗಿಸುವ ಗುರಿಹೊಂದಿದೆ.<br /> <br /> ರಾಮನಗರ ಜಿಲ್ಲೆಯಲ್ಲಿ ಸ್ಥಾಪಿತವಾದ ಪ್ರಥಮ ನೀರಿನ ಶುದ್ಧೀಕರಣ ಘಟಕ ಕದೂರಿನಲ್ಲಿ ಸ್ಥಾಪಿತವಾಗಿದ್ದು ಖಾಸಗಿ ನೀರಿನ ಸಂಸ್ಥೆಗಳು ಒದಗಿಸುವ ನೀರಿಗಿಂತಲೂ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಶುಚಿಯಾದ ರುಚಿಕರವಾದ ಶುದ್ಧ ನೀರನ್ನು ಪೂರೈಸಲಾಗುತ್ತದೆ.<br /> <br /> ಈ ನೀರಿನ ಶುದ್ಧೀಕರಣ ಘಟಕ ನೀರಿನಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀಗಳನ್ನು ನಾಶಮಾಡಿ ಶುದ್ಧ ನೀರನ್ನು ಒದಗಿಸುವ ಕಾರ್ಯಮಾಡುತ್ತಿದೆ.ಪ್ರತಿ ಲೀಟರಿಗೆ 35 ಪೈಸೆಯಂತೆ 20 ಲೀಟರ್ನ ನೀರಿನ ಕ್ಯಾನ್ ಒಂದಕ್ಕೆ 7 ರೂಪಾಯಿ ನಿಗದಿ ಮಾಡಲಾಗಿದೆ. ನೀರನ್ನು ಸಂಗ್ರಹಿಸುವ ಕ್ಯಾನ್ಗಳನ್ನು ಸಂಸ್ಥೆಯವರೇ ಪೂರೈಸಲಿದ್ದು ಪ್ರತಿನಿತ್ಯ 300ಕ್ಕೂ ಅಧಿಕ ಕ್ಯಾನ್ಗಳ ಮಾರಟವಾಗುತ್ತಿವೆ. <br /> <br /> ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ನೀರಿನ ವಿತರಣೆ ಪ್ರಾರಂಭವಾಗಿ ರಾತ್ರಿ 7 ಗಂಟೆವರಗೆ ಈ ಘಟಕ ಕಾರ್ಯ ನಿರ್ವಹಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುದೂರು: </strong>ತಾಲ್ಲೂಕಿನ ಕುದೂರು ಹೋಬಳಿ ಕೇಂದ್ರದಲ್ಲಿ ವಾಟರ್ ಹೆಲ್ತ್ ಇಂಡಿಯಾದವರಿಂದ ಸ್ಥಾಪಿತವಾದ ನೀರಿನ ಶುದ್ಧೀಕರಣ ಘಟಕವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲರಾಜು ಬುಧವಾರ ಉದ್ಘಾಟಿಸಿದರು.<br /> <br /> ಈ ನೀರಿನ ಶುದ್ಧೀಕರಣ ಘಟಕವನ್ನು ಶಿವಗಂಗೆ ಮುಖ್ಯ ರಸ್ತೆಯ ಬಳಿ ನಿರ್ಮಿಸಲಾಗಿದ್ದು ಕುದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಎಲ್ಲಾ ಗ್ರಾಮಸ್ಥರು ಇದರ ಸೌಲಭ್ಯ ಪಡೆದು ಕೊಳ್ಳಬಹುದಾಗಿದೆ ಎಂದರು.<br /> ವಾಟರ್ ಹೆಲ್ತ್ ಇಂಡಿಯಾ ಸಂಸ್ಥೆ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಪರವಾನಗಿ ಪಡೆದು ಆಂಧ್ರಪ್ರದೇಶ, ಗುಜರಾತ್, ಕರ್ನಾಟಕ ಸೇರಿದಂತೆ ಪ್ರತಿ ರಾಜ್ಯಗಳಲ್ಲಿ 475 ಘಟಕಗಳನ್ನು ಸ್ಥಾಪಿಸಲಾಗಿದೆ.<br /> <br /> ಹಳ್ಳಿ ಮತ್ತು ನಗರವಾಸಿಗಳಲ್ಲಿ ಕಲುಷಿತ ನೀರಿನ ಸೇವನೆಯಿಂದ ಉಂಟಾಗುವ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಿಯಂತ್ರಿಸುವ ಮತ್ತು ಜನತೆಗೆ ಕಡಿಮೆ ಬೆಲೆಯಲ್ಲಿ ಶುದ್ಧ ನೀರನ್ನು ಒದಗಿಸುವ ಗುರಿಹೊಂದಿದೆ.<br /> <br /> ರಾಮನಗರ ಜಿಲ್ಲೆಯಲ್ಲಿ ಸ್ಥಾಪಿತವಾದ ಪ್ರಥಮ ನೀರಿನ ಶುದ್ಧೀಕರಣ ಘಟಕ ಕದೂರಿನಲ್ಲಿ ಸ್ಥಾಪಿತವಾಗಿದ್ದು ಖಾಸಗಿ ನೀರಿನ ಸಂಸ್ಥೆಗಳು ಒದಗಿಸುವ ನೀರಿಗಿಂತಲೂ ಜನಸಾಮಾನ್ಯರಿಗೆ ಕೈಗೆಟಕುವ ಬೆಲೆಯಲ್ಲಿ ಶುಚಿಯಾದ ರುಚಿಕರವಾದ ಶುದ್ಧ ನೀರನ್ನು ಪೂರೈಸಲಾಗುತ್ತದೆ.<br /> <br /> ಈ ನೀರಿನ ಶುದ್ಧೀಕರಣ ಘಟಕ ನೀರಿನಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀಗಳನ್ನು ನಾಶಮಾಡಿ ಶುದ್ಧ ನೀರನ್ನು ಒದಗಿಸುವ ಕಾರ್ಯಮಾಡುತ್ತಿದೆ.ಪ್ರತಿ ಲೀಟರಿಗೆ 35 ಪೈಸೆಯಂತೆ 20 ಲೀಟರ್ನ ನೀರಿನ ಕ್ಯಾನ್ ಒಂದಕ್ಕೆ 7 ರೂಪಾಯಿ ನಿಗದಿ ಮಾಡಲಾಗಿದೆ. ನೀರನ್ನು ಸಂಗ್ರಹಿಸುವ ಕ್ಯಾನ್ಗಳನ್ನು ಸಂಸ್ಥೆಯವರೇ ಪೂರೈಸಲಿದ್ದು ಪ್ರತಿನಿತ್ಯ 300ಕ್ಕೂ ಅಧಿಕ ಕ್ಯಾನ್ಗಳ ಮಾರಟವಾಗುತ್ತಿವೆ. <br /> <br /> ಪ್ರತಿ ದಿನ ಬೆಳಿಗ್ಗೆ 8 ಗಂಟೆಯಿಂದ ನೀರಿನ ವಿತರಣೆ ಪ್ರಾರಂಭವಾಗಿ ರಾತ್ರಿ 7 ಗಂಟೆವರಗೆ ಈ ಘಟಕ ಕಾರ್ಯ ನಿರ್ವಹಿಸುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>