<p><strong>ಕಠ್ಮಂಡು (ಪಿಟಿಐ): </strong>ಭೂಕಂಪದ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಭಾನುವಾರ (ಇಲ್ಲಿ ವಾರದ ರಜೆ ಶನಿವಾರ) ಶಾಲೆಗಳು ಪುನರಾರಂಭಗೊಂಡಿವೆ.<br /> <br /> ಹಿಮಾಲಯದ ತಪ್ಪಲಿನಲ್ಲಿ ಇರುವ ನೇಪಾಳದಲ್ಲಿ ಏಪ್ರಿಲ್ 25 ರಂದು ಸಂಭವಿಸಿದ್ದ ಭೂಕಂಪದಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಭೂಕಂಪ ಸಂಭವಿಸಿದ ಸುಮಾರು 1 ತಿಂಗಳ ಬಳಿಕ ಶಾಲೆಗಳು ಶುರುವಾಗಿವೆ.<br /> <br /> ಭೂಕಂಪದಿಂದಾಗಿ ಹೆಚ್ಚಿನ ಶಾಲೆಗಳು ನೆಲಸಮಗೊಂಡಿವೆ. ಆದ್ದರಿಂದ ತಾತ್ಕಾಲಿಕವಾಗಿ ಟೆಂಟ್ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.<br /> <br /> ಮೊದಲ ದಿನ ಪಾಠಗಳು ನಡೆಯಲಿಲ್ಲ. ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದರು.<br /> <br /> ಗೋರ್ಖಾ, ಸಿಂಧೂಪಾಲ್ಚೌಕ್ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಶೇ 90 ಕ್ಕೂ ಅಧಿಕ ಶಾಲಾ– ಕಾಲೇಜುಗಳು ನೆಲಸಮಗೊಂಡಿವೆ. ಹಲವರು ತಮ್ಮ ಸಹಪಾಠಿಗಳು, ಶಿಕ್ಷಕರನ್ನು ಕಳೆದುಕೊಂಡಿದ್ದಾರೆ.<br /> <br /> ಮೇ 17 ರಂದು ಶಾಲೆಗಳನ್ನು ತೆರೆಯಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಮೇ 12 ರಂದು ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದರಿಂದ ಶಾಲೆಗಳ ಪುನರಾರಂಭ ಮತ್ತಷ್ಟು ತಡವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಠ್ಮಂಡು (ಪಿಟಿಐ): </strong>ಭೂಕಂಪದ ಆಘಾತದಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ನೇಪಾಳದಲ್ಲಿ ಭಾನುವಾರ (ಇಲ್ಲಿ ವಾರದ ರಜೆ ಶನಿವಾರ) ಶಾಲೆಗಳು ಪುನರಾರಂಭಗೊಂಡಿವೆ.<br /> <br /> ಹಿಮಾಲಯದ ತಪ್ಪಲಿನಲ್ಲಿ ಇರುವ ನೇಪಾಳದಲ್ಲಿ ಏಪ್ರಿಲ್ 25 ರಂದು ಸಂಭವಿಸಿದ್ದ ಭೂಕಂಪದಲ್ಲಿ 8 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದರು. ಭೂಕಂಪ ಸಂಭವಿಸಿದ ಸುಮಾರು 1 ತಿಂಗಳ ಬಳಿಕ ಶಾಲೆಗಳು ಶುರುವಾಗಿವೆ.<br /> <br /> ಭೂಕಂಪದಿಂದಾಗಿ ಹೆಚ್ಚಿನ ಶಾಲೆಗಳು ನೆಲಸಮಗೊಂಡಿವೆ. ಆದ್ದರಿಂದ ತಾತ್ಕಾಲಿಕವಾಗಿ ಟೆಂಟ್ಗಳನ್ನು ನಿರ್ಮಿಸಿ ತರಗತಿಗಳನ್ನು ನಡೆಸಲು ವ್ಯವಸ್ಥೆ ಮಾಡಲಾಗಿದೆ.<br /> <br /> ಮೊದಲ ದಿನ ಪಾಠಗಳು ನಡೆಯಲಿಲ್ಲ. ಶಿಕ್ಷಕರು ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಲು ಪ್ರಯತ್ನಿಸಿದರು.<br /> <br /> ಗೋರ್ಖಾ, ಸಿಂಧೂಪಾಲ್ಚೌಕ್ ಮತ್ತು ನುವಾಕೋಟ್ ಜಿಲ್ಲೆಗಳಲ್ಲಿ ಶೇ 90 ಕ್ಕೂ ಅಧಿಕ ಶಾಲಾ– ಕಾಲೇಜುಗಳು ನೆಲಸಮಗೊಂಡಿವೆ. ಹಲವರು ತಮ್ಮ ಸಹಪಾಠಿಗಳು, ಶಿಕ್ಷಕರನ್ನು ಕಳೆದುಕೊಂಡಿದ್ದಾರೆ.<br /> <br /> ಮೇ 17 ರಂದು ಶಾಲೆಗಳನ್ನು ತೆರೆಯಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಮೇ 12 ರಂದು ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದ್ದರಿಂದ ಶಾಲೆಗಳ ಪುನರಾರಂಭ ಮತ್ತಷ್ಟು ತಡವಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>