<p><strong>ನವದೆಹಲಿ (ಪಿಟಿಐ): </strong>ಸಲಿಂಗರತಿ ಅಪರಾಧ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಬುಧವಾರ ನಿವೃತ್ತರಾದರು.<br /> <br /> ಸುಪ್ರೀಂಕೋರ್ಟ್ನ ಕ್ರಿಯಾಶೀಲ ಮತ್ತು ದಿಟ್ಟ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಸಿಂಘ್ವಿ, ಹಲವು ಪ್ರಕರಣಗಳಲ್ಲಿ ಸರ್ಕಾರ ತಲ್ಲಣಗೊಳ್ಳುವಂತಹ ತೀರ್ಪು ನೀಡಿದ್ದರು.<br /> <br /> ಸುಪ್ರೀಂಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರು, ಹಲವು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿ 2ಜಿ ತರಂಗಾಂತರ ಪರವಾನಗಿ ರದ್ದು ಸೇರಿದಂತೆ ಮಹತ್ವದ ತೀರ್ಪುಗಳನ್ನು ನೀಡಿದ್ದರು.<br /> <br /> ಕಾರುಗಳ ಮೇಲೆ ವಿವೇಚನಾರಹಿತ ಕೆಂಪು ದೀಪ ಬಳಕೆಗೆ ನಿರ್ಬಂಧ ಹೇರುವ ತೀರ್ಪನ್ನು ಮಂಗಳವಾರವಷ್ಟೇ ನೀಡಿದ್ದ ಸಿಂಘ್ವಿ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.<br /> <br /> ಸಲಿಂಗರತಿ ಕಾನೂನಬಾಹಿರ ಎಂಬ ಅವರ ಕೊನೆಯ ತೀರ್ಪು ಟೀಕೆಗೂ ಕಾರಣವಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ವಿಸ್ತರಿಸುವ ಅವಕಾಶವೊಂದು ಈ ನ್ಯಾಯ ಮೂರ್ತಿಯವರಿಂದಾಗಿ ತಪ್ಪಿ ಹೋಯಿತು ಎಂದು ಹಿರಿಯ ನ್ಯಾಯವಾದಿಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ): </strong>ಸಲಿಂಗರತಿ ಅಪರಾಧ ಎಂಬ ಮಹತ್ವದ ತೀರ್ಪು ನೀಡಿದ ನ್ಯಾಯಪೀಠದಲ್ಲಿದ್ದ ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಬುಧವಾರ ನಿವೃತ್ತರಾದರು.<br /> <br /> ಸುಪ್ರೀಂಕೋರ್ಟ್ನ ಕ್ರಿಯಾಶೀಲ ಮತ್ತು ದಿಟ್ಟ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ಸಿಂಘ್ವಿ, ಹಲವು ಪ್ರಕರಣಗಳಲ್ಲಿ ಸರ್ಕಾರ ತಲ್ಲಣಗೊಳ್ಳುವಂತಹ ತೀರ್ಪು ನೀಡಿದ್ದರು.<br /> <br /> ಸುಪ್ರೀಂಕೋರ್ಟ್ನ ಅತ್ಯಂತ ಹಿರಿಯ ನ್ಯಾಯಮೂರ್ತಿಯಾಗಿದ್ದ ಅವರು, ಹಲವು ಸೂಕ್ಷ್ಮ ಪ್ರಕರಣಗಳ ವಿಚಾರಣೆ ನಡೆಸಿ 2ಜಿ ತರಂಗಾಂತರ ಪರವಾನಗಿ ರದ್ದು ಸೇರಿದಂತೆ ಮಹತ್ವದ ತೀರ್ಪುಗಳನ್ನು ನೀಡಿದ್ದರು.<br /> <br /> ಕಾರುಗಳ ಮೇಲೆ ವಿವೇಚನಾರಹಿತ ಕೆಂಪು ದೀಪ ಬಳಕೆಗೆ ನಿರ್ಬಂಧ ಹೇರುವ ತೀರ್ಪನ್ನು ಮಂಗಳವಾರವಷ್ಟೇ ನೀಡಿದ್ದ ಸಿಂಘ್ವಿ, ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದರು.<br /> <br /> ಸಲಿಂಗರತಿ ಕಾನೂನಬಾಹಿರ ಎಂಬ ಅವರ ಕೊನೆಯ ತೀರ್ಪು ಟೀಕೆಗೂ ಕಾರಣವಾಗಿದೆ. ಸಾಂವಿಧಾನಿಕ ಮೌಲ್ಯಗಳನ್ನು ವಿಸ್ತರಿಸುವ ಅವಕಾಶವೊಂದು ಈ ನ್ಯಾಯ ಮೂರ್ತಿಯವರಿಂದಾಗಿ ತಪ್ಪಿ ಹೋಯಿತು ಎಂದು ಹಿರಿಯ ನ್ಯಾಯವಾದಿಗಳು ಸೇರಿದಂತೆ ಹಲವರು ಟೀಕಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>