<p><strong>ಯಲಹಂಕ: </strong>ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದಿಂದ ಒಂದು ವಾರ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.<br /> <br /> ಬುಧವಾರ ಬೆಳಿಗ್ಗೆ 11ಕ್ಕೆ ಅದ್ದಿಗಾನಹಳ್ಳಿ, ಸಾದೇನಹಳ್ಳಿ ಹಾಗೂ ತರಹುಣಿಸೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಲಿದ್ದು, ಈ ಮೂರೂ ಗ್ರಾಮಗಳಿಂದ ಹೊರಟು ಬರುವ ರಥಗಳು ಪಟಾಲಮ್ಮ ದೇವಸ್ಥಾನದ ಬಳಿ ಬಂದು ಸೇರಲಿವೆ.<br /> <br /> ಮಾರಗೊಂಡನಹಳ್ಳಿ, ಅಗ್ರಹಾರ, ತಿಮ್ಮಸಂದ್ರ, ನಾಗದಾಸನಹಳ್ಳಿ, ರಾಜಾನುಕುಂಟೆ ಹಾಗೂ ಚೊಕ್ಕನಹಳ್ಳಿ ಗ್ರಾಮಗಳ ಪ್ರತಿ ಮನೆಗಳಿಂದ ಮಹಿಳೆಯರು ತಂಬಿಟ್ಟು ಮತ್ತು ಬೆಲ್ಲದ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬರಲಿದ್ದಾರೆ.<br /> <br /> ಎಲ್ಲಾ ಗ್ರಾಮಗಳ ಜನರು ದೇವಿಯಲ್ಲಿ ತಾವು ಮಾಡಿಕೊಂಡಿರುವ ಹರಕೆ ತೀರಿಸಲು ಗುರುವಾರ ಮಧ್ಯಾಹ್ನ 3.30ರ ನಂತರ ಬಾಯಿಗೆ ಬೀಗ ಚುಚ್ಚುವ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆಚಾರರು ಮನೆ ಮನೆಗೆ ತೆರಳಿ, ಹರಕೆ ಹೊತ್ತುಕೊಂಡಿರುವವರ ಬಾಯಿಗೆ ಬೀಗ ಚುಚ್ಚಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಸಂಜೆ ದೇವಿಗೆ ಆರತಿ ಬೆಳಗಿದ ನಂತರ ಬಾಯಿ ಬೀಗಗಳನ್ನು ತೆಗೆಯಲಾಗುತ್ತದೆ.<br /> <br /> ಶುಕ್ರವಾರ ಅದ್ದಿಗಾನಹಳ್ಳಿ ಗ್ರಾಮದಲ್ಲಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪಟಾಲಮ್ಮ ದೇವಿಯ ಬಗ್ಗೆ ಈ ಭಾಗದ ಜನರು ವಿಶೇಷವಾದ ನಂಬಿಕೆಯನ್ನಿಟ್ಟಿದ್ದು, ತಾವು ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಕಾದರೂ ದೇವಿಗೆ ಮೊದಲು ಪೂಜೆ ಸಲ್ಲಿಸಿದರೆ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ಪ್ರತೀತಿ ಹಿಂದಿನಿಂದಲೂ ಬಂದಿದೆ.<br /> <br /> ಬೆಂಗಳೂರು ಉತ್ತರ ತ್ಲ್ಲಾಲೂಕು, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳ ಸಾವಿರಾರು ಜನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: </strong>ಬೆಂಗಳೂರು ಉತ್ತರ ತಾಲ್ಲೂಕಿನ ಅದ್ದಿಗಾನಹಳ್ಳಿ ಗ್ರಾಮದಲ್ಲಿ ಪಟಾಲಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರದಿಂದ ಒಂದು ವಾರ ಕಾಲ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.<br /> <br /> ಬುಧವಾರ ಬೆಳಿಗ್ಗೆ 11ಕ್ಕೆ ಅದ್ದಿಗಾನಹಳ್ಳಿ, ಸಾದೇನಹಳ್ಳಿ ಹಾಗೂ ತರಹುಣಿಸೆ ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಲಿದ್ದು, ಈ ಮೂರೂ ಗ್ರಾಮಗಳಿಂದ ಹೊರಟು ಬರುವ ರಥಗಳು ಪಟಾಲಮ್ಮ ದೇವಸ್ಥಾನದ ಬಳಿ ಬಂದು ಸೇರಲಿವೆ.<br /> <br /> ಮಾರಗೊಂಡನಹಳ್ಳಿ, ಅಗ್ರಹಾರ, ತಿಮ್ಮಸಂದ್ರ, ನಾಗದಾಸನಹಳ್ಳಿ, ರಾಜಾನುಕುಂಟೆ ಹಾಗೂ ಚೊಕ್ಕನಹಳ್ಳಿ ಗ್ರಾಮಗಳ ಪ್ರತಿ ಮನೆಗಳಿಂದ ಮಹಿಳೆಯರು ತಂಬಿಟ್ಟು ಮತ್ತು ಬೆಲ್ಲದ ಆರತಿಯನ್ನು ಹೊತ್ತು ಮೆರವಣಿಗೆಯಲ್ಲಿ ಬರಲಿದ್ದಾರೆ.<br /> <br /> ಎಲ್ಲಾ ಗ್ರಾಮಗಳ ಜನರು ದೇವಿಯಲ್ಲಿ ತಾವು ಮಾಡಿಕೊಂಡಿರುವ ಹರಕೆ ತೀರಿಸಲು ಗುರುವಾರ ಮಧ್ಯಾಹ್ನ 3.30ರ ನಂತರ ಬಾಯಿಗೆ ಬೀಗ ಚುಚ್ಚುವ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಆಚಾರರು ಮನೆ ಮನೆಗೆ ತೆರಳಿ, ಹರಕೆ ಹೊತ್ತುಕೊಂಡಿರುವವರ ಬಾಯಿಗೆ ಬೀಗ ಚುಚ್ಚಿ ಅವರನ್ನು ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಸಂಜೆ ದೇವಿಗೆ ಆರತಿ ಬೆಳಗಿದ ನಂತರ ಬಾಯಿ ಬೀಗಗಳನ್ನು ತೆಗೆಯಲಾಗುತ್ತದೆ.<br /> <br /> ಶುಕ್ರವಾರ ಅದ್ದಿಗಾನಹಳ್ಳಿ ಗ್ರಾಮದಲ್ಲಿ ದೇವಿಯ ಹೂವಿನ ಪಲ್ಲಕ್ಕಿ ಉತ್ಸವ ನಡೆಯಲಿದೆ. ಪಟಾಲಮ್ಮ ದೇವಿಯ ಬಗ್ಗೆ ಈ ಭಾಗದ ಜನರು ವಿಶೇಷವಾದ ನಂಬಿಕೆಯನ್ನಿಟ್ಟಿದ್ದು, ತಾವು ಯಾವುದೇ ಶುಭ ಕಾರ್ಯಗಳನ್ನು ಆರಂಭಿಸಬೇಕಾದರೂ ದೇವಿಗೆ ಮೊದಲು ಪೂಜೆ ಸಲ್ಲಿಸಿದರೆ ಕಾರ್ಯಗಳು ಯಶಸ್ವಿಯಾಗುತ್ತವೆ ಎಂಬ ಪ್ರತೀತಿ ಹಿಂದಿನಿಂದಲೂ ಬಂದಿದೆ.<br /> <br /> ಬೆಂಗಳೂರು ಉತ್ತರ ತ್ಲ್ಲಾಲೂಕು, ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲ್ಲೂಕುಗಳ ಸಾವಿರಾರು ಜನ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸುತ್ತಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>