<p>ಅರಸೀಕೆರೆ: ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ತಾಲ್ಲೂಕಿನ ಮಾಡಾಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಹಲವು ದಿನಗಳಿಂದ ನಾಗರಿಕರು ಕುಟುಂಬ ಸಮೇತ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. <br /> <br /> ವಿದ್ಯುತ್ ಕಡಿತದಿಂದ ಭಾವಚಿತ್ರ ತೆಗೆಸುವ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಬಾಣಂತಿಯರು, ವೃದ್ಧರು, ಗರ್ಭಿಣಿಯರು ಮುಂಜಾನೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಸುಸ್ತಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಆಗಾಗ ಮಳೆ ಬೀಳುತ್ತಿದ್ದು, ಮಳೆಯಲ್ಲೇ ಸರದಿಗಾಗಿ ಜನರು ಕಾಯಬೇಕಿದೆ. <br /> <br /> ಇನ್ನೊಂದೆಡೆ ವಿದ್ಯುತ್ ಅವ್ಯವಸ್ಥೆಯಿಂದ ಕಂಪ್ಯೂಟರ್ ಕೇಂದ್ರದ ಬಾಗಿಲು ಕಾಯುವುದೇ ಜನರ ಕಾಯಕವಾಗಿದೆ. ಈ ಭಾಗದಲ್ಲಿ ಬೆಳಿಗ್ಗೆ 8ರಿಂದ11ರ ವರೆಗೆ ಮಾತ್ರ ಕರೆಂಟ್ ಇರುತ್ತದೆ. 11ರಿಂದ ಸಂಜೆ 6ರ ವರೆಗೆ ವಿದ್ಯುತ್ ಕಡಿತಗೊಂಡಿರುತ್ತದೆ. ಮಧ್ಯಾಹ್ನ ಕರೆಂಟ್ ಬರುವ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತರೂ ಭಾವಚಿತ್ರ ತೆಗೆಸಲು ಆಗುತ್ತಿಲ್ಲ. <br /> <br /> `ಎರಡು ಮೂರು ದಿನಗಳಿಂದ ಕೂಲಿ ಕೆಲಸ ಬಿಟ್ಟು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕಾಯುತ್ತಿದ್ದೇನೆ. ನನಗೆ ಕೆಲಸ ಇಲ್ಲದೆ ಇರುವುದರಿಂದ ಕುಟುಂಬ ಉಪವಾಸದಲ್ಲಿದೆ~ ಎಂದು ದಲಿತ ಕಾಲೊನಿಯ ತಿಮ್ಮಯ್ಯ, ಪಲ್ಲಕೆಪ್ಪ, ಚಿಕ್ಕಣ್ಣ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಯಲು ಕುಟುಂಬದ ನಾಲ್ಕು ಸದಸ್ಯರಿಗೆ 20 ರೂಪಾಯಿ ನಂತರದ ಪ್ರತಿ ಸದಸ್ಯರಿಗೆ 5 ರೂಪಾಯಿ ವಿಧಿಸಬಹುದು ಎಂದು ತಹಶೀಲ್ದಾರರು ಹೊರಡಿಸಿದ ಆದೇಶದಲ್ಲಿದೆ. ಆದರೆ ಭಾವಚಿತ್ರ ತೆಗೆಯುವವರು ಪ್ರತಿ ಕಾರ್ಡಿಗೆ 40ರಿಂದ 50 ರೂಪಾಯಿ ಸಂಗ್ರಹಿಸುತ್ತಿದ್ದಾರೆ. <br /> <br /> ಒಟ್ಟಾರೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ಒಂದು ಕುಟುಂಬಕ್ಕೆ ಕನಿಷ್ಠ 400 ರೂಪಾಯಿ ವೆಚ್ಚವಾಗುತ್ತಿದೆ ಎಂದು ಅರ್ಜಿ ಸಲ್ಲಿಸಲು ನಿಂತವರು ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ: ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ತಾಲ್ಲೂಕಿನ ಮಾಡಾಳು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಹಲವು ದಿನಗಳಿಂದ ನಾಗರಿಕರು ಕುಟುಂಬ ಸಮೇತ ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. <br /> <br /> ವಿದ್ಯುತ್ ಕಡಿತದಿಂದ ಭಾವಚಿತ್ರ ತೆಗೆಸುವ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಬಾಣಂತಿಯರು, ವೃದ್ಧರು, ಗರ್ಭಿಣಿಯರು ಮುಂಜಾನೆಯಿಂದ ಸಂಜೆವರೆಗೆ ಸಾಲಿನಲ್ಲಿ ನಿಂತು ಸುಸ್ತಾಗುತ್ತಿದ್ದಾರೆ. ಕಳೆದ ಎರಡು ದಿನಗಳಿಂದ ಗ್ರಾಮದಲ್ಲಿ ಆಗಾಗ ಮಳೆ ಬೀಳುತ್ತಿದ್ದು, ಮಳೆಯಲ್ಲೇ ಸರದಿಗಾಗಿ ಜನರು ಕಾಯಬೇಕಿದೆ. <br /> <br /> ಇನ್ನೊಂದೆಡೆ ವಿದ್ಯುತ್ ಅವ್ಯವಸ್ಥೆಯಿಂದ ಕಂಪ್ಯೂಟರ್ ಕೇಂದ್ರದ ಬಾಗಿಲು ಕಾಯುವುದೇ ಜನರ ಕಾಯಕವಾಗಿದೆ. ಈ ಭಾಗದಲ್ಲಿ ಬೆಳಿಗ್ಗೆ 8ರಿಂದ11ರ ವರೆಗೆ ಮಾತ್ರ ಕರೆಂಟ್ ಇರುತ್ತದೆ. 11ರಿಂದ ಸಂಜೆ 6ರ ವರೆಗೆ ವಿದ್ಯುತ್ ಕಡಿತಗೊಂಡಿರುತ್ತದೆ. ಮಧ್ಯಾಹ್ನ ಕರೆಂಟ್ ಬರುವ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತರೂ ಭಾವಚಿತ್ರ ತೆಗೆಸಲು ಆಗುತ್ತಿಲ್ಲ. <br /> <br /> `ಎರಡು ಮೂರು ದಿನಗಳಿಂದ ಕೂಲಿ ಕೆಲಸ ಬಿಟ್ಟು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಕಾಯುತ್ತಿದ್ದೇನೆ. ನನಗೆ ಕೆಲಸ ಇಲ್ಲದೆ ಇರುವುದರಿಂದ ಕುಟುಂಬ ಉಪವಾಸದಲ್ಲಿದೆ~ ಎಂದು ದಲಿತ ಕಾಲೊನಿಯ ತಿಮ್ಮಯ್ಯ, ಪಲ್ಲಕೆಪ್ಪ, ಚಿಕ್ಕಣ್ಣ ಮತ್ತಿತರರು ಅಸಮಾಧಾನ ವ್ಯಕ್ತಪಡಿಸಿದರು. <br /> <br /> ಪಡಿತರ ಚೀಟಿಗೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಯಲು ಕುಟುಂಬದ ನಾಲ್ಕು ಸದಸ್ಯರಿಗೆ 20 ರೂಪಾಯಿ ನಂತರದ ಪ್ರತಿ ಸದಸ್ಯರಿಗೆ 5 ರೂಪಾಯಿ ವಿಧಿಸಬಹುದು ಎಂದು ತಹಶೀಲ್ದಾರರು ಹೊರಡಿಸಿದ ಆದೇಶದಲ್ಲಿದೆ. ಆದರೆ ಭಾವಚಿತ್ರ ತೆಗೆಯುವವರು ಪ್ರತಿ ಕಾರ್ಡಿಗೆ 40ರಿಂದ 50 ರೂಪಾಯಿ ಸಂಗ್ರಹಿಸುತ್ತಿದ್ದಾರೆ. <br /> <br /> ಒಟ್ಟಾರೆ ಹೆಸರು ನೋಂದಣಿ ಹಾಗೂ ಭಾವಚಿತ್ರ ತೆಗೆಸಲು ಒಂದು ಕುಟುಂಬಕ್ಕೆ ಕನಿಷ್ಠ 400 ರೂಪಾಯಿ ವೆಚ್ಚವಾಗುತ್ತಿದೆ ಎಂದು ಅರ್ಜಿ ಸಲ್ಲಿಸಲು ನಿಂತವರು ದೂರಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>