<p>ಬೈಂದೂರು: ಪಡುವರಿ ಗ್ರಾಮದ ಹೇನಬೇರಿನಲ್ಲಿ ಜಾನುವಾರು ಸರಣಿ ಸಾವಿಗೆ ತ್ಯಾಜ್ಯ ಕಾರಣ ಎಂಬ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ವಿಧಿಸಿದ್ದರೂ ಮತ್ತೊಂದು ದಿಕ್ಕಿನಲ್ಲಿ ತ್ಯಾಜ್ಯ ಎಸೆದಿರುವುದು ಶುಕ್ರವಾರ ಕಂಡುಬಂದಿದೆ. <br /> <br /> ಸ್ಥಳೀಯರ ಕರೆ ಅನುಸರಿಸಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಹೇನಬೇರಿನ ಗೋಪಾಲ ದೇವಾಡಿಗ, ಮಂಜುನಾಥ ದೇವಾಡಿಗ, ಶಶಿಧರ ದೇವಾಡಿಗ, ಮಹಾಬಲ ದೇವಾಡಿಗ ಅವರು ಅಲ್ಲಿ ಎಸೆದಿದ್ದ ಸೆಯಲಾಗಿದ್ದ ಆರು ಮೂಟೆ ಕೋಳಿ ತ್ಯಾಜ್ಯ ಮತ್ತು ಆರು ಹಂದಿಗಳ ಶವವನ್ನು ತೋರಿಸಿದರು.<br /> <br /> ಕೋಳಿ ತ್ಯಾಜ್ಯವನ್ನು ಹೆದ್ದಾರಿಯ ಪೂರ್ವ ದಿಕ್ಕಿನಲ್ಲಿ ಎಸೆದಿದ್ದರೆ, ಹಂದಿಯ ಶವಗಳನ್ನು ಹೆದ್ದಾರಿ ಅಂಚಿನ ಸುರ್ಗಿಹಳ್ಳಕ್ಕೆ ಎಸೆಯಲಾಗಿತ್ತು. ಕೋಳಿ ತ್ಯಾಜ್ಯದಲ್ಲಿ ಹುಳಗಳು ಹರಿದಾಡುತ್ತಿದ್ದು, ದುರ್ನಾತ ಬೀರುತ್ತಿತ್ತು. ಹಂದಿ ಶವಗಳು ವಾಹನದಲ್ಲಿ ಸಾಗಿಸುವಾಗ, ಅಥವಾ ಆ ಬಳಿಕ ಕಾರದಿಂದ ಸಾವನ್ನಪ್ಪಿರಬಹುದು ಎಂಬುದು ಇವರ ಯುವಕರ ಅಭಿಪ್ರಾಯ. <br /> <br /> ಇದೇ 11ರಂದು ಒತ್ತಿನೆಣೆಯ ಹೆದ್ದಾರಿಯ ಪೂರ್ವ ಬದಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಪ್ರಾಣಿ ತ್ಯಾಜ್ಯಗಳ ಜತೆ ಹಳೆಯ ಔಷಧಿ ಮತ್ತು ಆಸ್ಪತ್ರೆ ತ್ಯಾಜ್ಯದ ರಾಶಿ ಕಂಡುಬಂದಿದ್ದವು. 16ರಂದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಪ್ರದೇಶಕ್ಕೆ ವಾಹನಗಳು ಪ್ರವೇಶಿಸದಂತೆ ಟ್ರೆಂಚ್ ತೆಗೆದಿದ್ದು, ಮಣ್ಣಿನ ದಂಡೆ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅರಣ್ಯ ಇಲಾಖೆ ಕೆಲಸ ನಿರ್ವಹಿಸಿತ್ತು. ಆದರೆ ಈಗ ಪಶ್ಚಿಮ ದಿಕ್ಕಿನಲ್ಲಿ ತ್ಯಾಜ್ಯ ಎಸೆದಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. <br /> <br /> <strong>ಪ್ರತಿಭಟನೆ ಎಚ್ಚರಿಕೆ </strong><br /> ಜಾನುವಾರು ಸಾವಿನಿಂದ ಸಂಕಷ್ಟದಲ್ಲಿರುವ ಇಲ್ಲಿನ ನಿವಾಸಿಗಳು ಪ್ರಸಕ್ತ ಬೆಳವಣಿಗೆಯಿಂದ ಇನ್ನಷ್ಟು ಆಕ್ರೋಶಗೊಂಡಿದ್ದಾರೆ. ಒಂದೆಡೆ ತಮಗಾಗಿರುವ ನಷ್ಟಗಳಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಸಾಂತ್ವನ ಬಿಟ್ಟರೆ ಬೇರೆ ಯಾವ ಪರಿಹಾರವು ದೊರೆತಿಲ್ಲ. ಮತ್ತೊಂದೆಡೆ ತ್ಯಾಜ್ಯ ವಿಸರ್ಜನೆ ತಡೆಯುವ ಗಂಭೀರ ಪ್ರಯತ್ನ ನಡೆಯುತ್ತಿಲ್ಲ.<br /> <br /> ಕೂಡಲೇ ಇದನ್ನು ತಡೆಗಟ್ಟದೇ ಇದ್ದಲ್ಲಿ ಬೈಂದೂರು ವಿಶೇಷ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯುವಕರು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೈಂದೂರು: ಪಡುವರಿ ಗ್ರಾಮದ ಹೇನಬೇರಿನಲ್ಲಿ ಜಾನುವಾರು ಸರಣಿ ಸಾವಿಗೆ ತ್ಯಾಜ್ಯ ಕಾರಣ ಎಂಬ ಹಿನ್ನೆಲೆಯಲ್ಲಿ ಸಂಚಾರ ನಿರ್ಬಂಧ ವಿಧಿಸಿದ್ದರೂ ಮತ್ತೊಂದು ದಿಕ್ಕಿನಲ್ಲಿ ತ್ಯಾಜ್ಯ ಎಸೆದಿರುವುದು ಶುಕ್ರವಾರ ಕಂಡುಬಂದಿದೆ. <br /> <br /> ಸ್ಥಳೀಯರ ಕರೆ ಅನುಸರಿಸಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳಿಗೆ ಹೇನಬೇರಿನ ಗೋಪಾಲ ದೇವಾಡಿಗ, ಮಂಜುನಾಥ ದೇವಾಡಿಗ, ಶಶಿಧರ ದೇವಾಡಿಗ, ಮಹಾಬಲ ದೇವಾಡಿಗ ಅವರು ಅಲ್ಲಿ ಎಸೆದಿದ್ದ ಸೆಯಲಾಗಿದ್ದ ಆರು ಮೂಟೆ ಕೋಳಿ ತ್ಯಾಜ್ಯ ಮತ್ತು ಆರು ಹಂದಿಗಳ ಶವವನ್ನು ತೋರಿಸಿದರು.<br /> <br /> ಕೋಳಿ ತ್ಯಾಜ್ಯವನ್ನು ಹೆದ್ದಾರಿಯ ಪೂರ್ವ ದಿಕ್ಕಿನಲ್ಲಿ ಎಸೆದಿದ್ದರೆ, ಹಂದಿಯ ಶವಗಳನ್ನು ಹೆದ್ದಾರಿ ಅಂಚಿನ ಸುರ್ಗಿಹಳ್ಳಕ್ಕೆ ಎಸೆಯಲಾಗಿತ್ತು. ಕೋಳಿ ತ್ಯಾಜ್ಯದಲ್ಲಿ ಹುಳಗಳು ಹರಿದಾಡುತ್ತಿದ್ದು, ದುರ್ನಾತ ಬೀರುತ್ತಿತ್ತು. ಹಂದಿ ಶವಗಳು ವಾಹನದಲ್ಲಿ ಸಾಗಿಸುವಾಗ, ಅಥವಾ ಆ ಬಳಿಕ ಕಾರದಿಂದ ಸಾವನ್ನಪ್ಪಿರಬಹುದು ಎಂಬುದು ಇವರ ಯುವಕರ ಅಭಿಪ್ರಾಯ. <br /> <br /> ಇದೇ 11ರಂದು ಒತ್ತಿನೆಣೆಯ ಹೆದ್ದಾರಿಯ ಪೂರ್ವ ಬದಿಯ ರಕ್ಷಿತಾರಣ್ಯ ಪ್ರದೇಶದಲ್ಲಿ ಪ್ರಾಣಿ ತ್ಯಾಜ್ಯಗಳ ಜತೆ ಹಳೆಯ ಔಷಧಿ ಮತ್ತು ಆಸ್ಪತ್ರೆ ತ್ಯಾಜ್ಯದ ರಾಶಿ ಕಂಡುಬಂದಿದ್ದವು. 16ರಂದು ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಈ ಪ್ರದೇಶಕ್ಕೆ ವಾಹನಗಳು ಪ್ರವೇಶಿಸದಂತೆ ಟ್ರೆಂಚ್ ತೆಗೆದಿದ್ದು, ಮಣ್ಣಿನ ದಂಡೆ ಹಾಕುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಅರಣ್ಯ ಇಲಾಖೆ ಕೆಲಸ ನಿರ್ವಹಿಸಿತ್ತು. ಆದರೆ ಈಗ ಪಶ್ಚಿಮ ದಿಕ್ಕಿನಲ್ಲಿ ತ್ಯಾಜ್ಯ ಎಸೆದಿದ್ದಾರೆ ಎನ್ನುವುದು ಸ್ಥಳೀಯರ ಅಭಿಪ್ರಾಯ. <br /> <br /> <strong>ಪ್ರತಿಭಟನೆ ಎಚ್ಚರಿಕೆ </strong><br /> ಜಾನುವಾರು ಸಾವಿನಿಂದ ಸಂಕಷ್ಟದಲ್ಲಿರುವ ಇಲ್ಲಿನ ನಿವಾಸಿಗಳು ಪ್ರಸಕ್ತ ಬೆಳವಣಿಗೆಯಿಂದ ಇನ್ನಷ್ಟು ಆಕ್ರೋಶಗೊಂಡಿದ್ದಾರೆ. ಒಂದೆಡೆ ತಮಗಾಗಿರುವ ನಷ್ಟಗಳಿಗೆ ಜನಪ್ರತಿನಿಧಿಗಳ, ಅಧಿಕಾರಿಗಳ ಸಾಂತ್ವನ ಬಿಟ್ಟರೆ ಬೇರೆ ಯಾವ ಪರಿಹಾರವು ದೊರೆತಿಲ್ಲ. ಮತ್ತೊಂದೆಡೆ ತ್ಯಾಜ್ಯ ವಿಸರ್ಜನೆ ತಡೆಯುವ ಗಂಭೀರ ಪ್ರಯತ್ನ ನಡೆಯುತ್ತಿಲ್ಲ.<br /> <br /> ಕೂಡಲೇ ಇದನ್ನು ತಡೆಗಟ್ಟದೇ ಇದ್ದಲ್ಲಿ ಬೈಂದೂರು ವಿಶೇಷ ತಹಶೀಲ್ದಾರರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಯುವಕರು ಎಚ್ಚರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>