<p><strong>ಚಿಕ್ಕಮಗಳೂರು:</strong> ತುಮಕೂರು ಮತ್ತು ಕೋಲಾರ ತಂಡಗಳು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಸೆಮಿಫೈನಲ್ ಪ್ರವೇಶಿಸಿವೆ.<br /> <br /> ನಗರದ ನೇತಾಜಿ ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭವಾದ ಟೂರ್ನಿಯಲ್ಲಿ ತುಮಕೂರು ತಂಡ ಕ್ವಾರ್ಟರ್ ಫೈನಲ್ನಲ್ಲಿ ಹಾಸನ ತಂಡವನ್ನು 65 ರನ್ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. <br /> <br /> ತುಮಕೂರು ತಂಡ 8 ಓವರುಗಳಲ್ಲಿ 92 ರನ್ ಬಾರಿಸಿದರೆ, ಹಾಸನ ತಂಡ ನಿಗದಿ ಓವರುಗಳಲ್ಲಿ 7 ವಿಕೆಟ್ಗೆ 27 ರನ್ ಮಾತ್ರ ಗಳಿಸಿತು. ತುಮಕೂರಿನ ಮಧು ಮತ್ತು ಚೇತನ್ ತಲಾ ಮೂರು ವಿಕೆಟ್ ಪಡೆದರು.<br /> <br /> ಕೋಲಾರ ತಂಡ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಬೆಂಗಳೂರು ನಗರ ತಂಡದ ವಿರುದ್ಧ ಹತ್ತು ವಿಕೆಟ್ಗಳಿಂದ ಜಯಗಳಿಸಿದರು. ಬೆಂಗಳೂರು ನಗರ 19 ರನ್ಗಳಿಗೆ ಉರುಳಿದರೆ, ಕೋಲಾರ ತಂಡ ಕೇವಲ 3 ಓವರ್ಗಳಲ್ಲಿ ಗುರಿ ತಲುಪಿತು.<br /> <br /> ಬಾಗಲಕೋಟೆ ವಿರುದ್ಧ ಗೆಲುವು ಸಾಧಿಸಿರುವ ಮಡಿಕೇರಿ ತಂಡ, ಬೆಂಗಳೂರು ಗ್ರಾಮಾಂತರ ವಿರುದ್ಧ ಜಯಗಳಿಸಿರುವ ಮಂಡ್ಯ ವಿರುದ್ಧ ಭಾನುವಾರ ಕ್ವಾರ್ಟರ್ ಫೈನಲ್ ಆಡಲಿದೆ. ಬೈ ಪಡೆದಿರುವ ಆತಿಥೇಯ ಚಿಕ್ಕಮಗಳೂರು ತಂಡ ಮತ್ತು ಶಿವಮೊಗ್ಗ ಕ್ವಾರ್ಟರ್ ಫೈನಲ್ನಲ್ಲಿ ಪರಸ್ಪರ ಸೆಣಸಲಿವೆ. <br /> <br /> ಟೂರ್ನಿಯಲ್ಲಿ 12 ಜಿಲ್ಲಾ ತಂಡಗಳು ಭಾಗವಹಿಸಿವೆ. ಬಾಗಲಕೋಟೆ, ಮೈಸೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಮಗಳೂರು:</strong> ತುಮಕೂರು ಮತ್ತು ಕೋಲಾರ ತಂಡಗಳು, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಡೆಯುತ್ತಿರುವ ಪತ್ರಕರ್ತರ ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ, ಸೆಮಿಫೈನಲ್ ಪ್ರವೇಶಿಸಿವೆ.<br /> <br /> ನಗರದ ನೇತಾಜಿ ಸುಭಾಷಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಶನಿವಾರ ಆರಂಭವಾದ ಟೂರ್ನಿಯಲ್ಲಿ ತುಮಕೂರು ತಂಡ ಕ್ವಾರ್ಟರ್ ಫೈನಲ್ನಲ್ಲಿ ಹಾಸನ ತಂಡವನ್ನು 65 ರನ್ಗಳಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿದೆ. <br /> <br /> ತುಮಕೂರು ತಂಡ 8 ಓವರುಗಳಲ್ಲಿ 92 ರನ್ ಬಾರಿಸಿದರೆ, ಹಾಸನ ತಂಡ ನಿಗದಿ ಓವರುಗಳಲ್ಲಿ 7 ವಿಕೆಟ್ಗೆ 27 ರನ್ ಮಾತ್ರ ಗಳಿಸಿತು. ತುಮಕೂರಿನ ಮಧು ಮತ್ತು ಚೇತನ್ ತಲಾ ಮೂರು ವಿಕೆಟ್ ಪಡೆದರು.<br /> <br /> ಕೋಲಾರ ತಂಡ ಮತ್ತೊಂದು ಕ್ವಾರ್ಟರ್ಫೈನಲ್ನಲ್ಲಿ ಬೆಂಗಳೂರು ನಗರ ತಂಡದ ವಿರುದ್ಧ ಹತ್ತು ವಿಕೆಟ್ಗಳಿಂದ ಜಯಗಳಿಸಿದರು. ಬೆಂಗಳೂರು ನಗರ 19 ರನ್ಗಳಿಗೆ ಉರುಳಿದರೆ, ಕೋಲಾರ ತಂಡ ಕೇವಲ 3 ಓವರ್ಗಳಲ್ಲಿ ಗುರಿ ತಲುಪಿತು.<br /> <br /> ಬಾಗಲಕೋಟೆ ವಿರುದ್ಧ ಗೆಲುವು ಸಾಧಿಸಿರುವ ಮಡಿಕೇರಿ ತಂಡ, ಬೆಂಗಳೂರು ಗ್ರಾಮಾಂತರ ವಿರುದ್ಧ ಜಯಗಳಿಸಿರುವ ಮಂಡ್ಯ ವಿರುದ್ಧ ಭಾನುವಾರ ಕ್ವಾರ್ಟರ್ ಫೈನಲ್ ಆಡಲಿದೆ. ಬೈ ಪಡೆದಿರುವ ಆತಿಥೇಯ ಚಿಕ್ಕಮಗಳೂರು ತಂಡ ಮತ್ತು ಶಿವಮೊಗ್ಗ ಕ್ವಾರ್ಟರ್ ಫೈನಲ್ನಲ್ಲಿ ಪರಸ್ಪರ ಸೆಣಸಲಿವೆ. <br /> <br /> ಟೂರ್ನಿಯಲ್ಲಿ 12 ಜಿಲ್ಲಾ ತಂಡಗಳು ಭಾಗವಹಿಸಿವೆ. ಬಾಗಲಕೋಟೆ, ಮೈಸೂರು, ಹಾಸನ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>