<p><strong>ಚಿಕ್ಕಬಳ್ಳಾಪುರ: </strong>ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ತುರ್ತುಸಭೆ ನಡೆಸಿ ಮಾರ್ಚ್ 3 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಎತ್ತಿನಹೊಳೆ ಶಂಕು ಸ್ಥಾಪನೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲು ನಿರ್ಧರಿಸಿದರು.<br /> <br /> ಬಯಲುಸೀಮೆ ಭಾಗಕ್ಕೆ ಕೆರೆ ಕುಂಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ಕೃಷಿಗೆ ಮತ್ತು ಕುಡಿಯುವ ನೀರಿನ ಯೋಜನೆಗೆ ಪೂರಕವಾಗಿರುವ ಪರಮಶಿವಯ್ಯ ವರದಿ ಅನುಷ್ಠಾನಕ್ಕಾಗಿ ದಶಕದಿಂದಲೂ ಹೋರಾಟ ನಡೆಸಲಾಗುತ್ತಿದೆ. ಜನರ ಧ್ವನಿ ಧಿಕ್ಕರಿಸಿ ಕುಡಿಯುವ ನೀರಿಗಷ್ಟೆ ಸೀಮಿತವಾಗಿರುವ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.<br /> <br /> ಸಾವಿರಾರು ಕೊಟಿ ರೂಪಾಯಿ ಖರ್ಚು ಮಾಡಿದರೂ ಎತ್ತಿನಹೊಳೆ ಯೋಜನೆಯು, ಕೃಷಿಯನ್ನು ನಂಬಿರುವ ಬಯಲು ಸೀಮೆ ಜಿಲ್ಲೆಗಳ ದಾಹ ಇಂಗಿಸಲಾರದು. ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅವೈಜ್ಞಾನಿಕ ಯೋಜನೆ ಜಾರಿ ಮಾಡಲು ಹೊರಟಿದೆ ಎಂದರು.<br /> <br /> ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯರೆಡ್ಡಿ, ಮುಖಂಡರಾದ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ರಾಯಪ್ಪನಹಳ್ಳಿ ಅಶ್ವತ್ಥರೆಡ್ಡಿ, ಅಗಲಗುರ್ಕಿ ಚಂದ್ರಶೇಖರ್, ಸುಧಾವೆಂಕಟೇಶ್, ಮಳ್ಳೂರು ಹರೀಶ್, ಅಗಲಗುರ್ಕಿ ಚಲಪತಿ, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಂಚನಬಲೆ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮೇಗೌಡ, ಬಾಗೇಪಲ್ಲಿ ಲಕ್ಷ್ಮೀನಾರಾಯಣರೆಡ್ಡಿ, ಸಿ.ಡಿ.ಗಂಗುಲಪ್ಪ, ಗೌರಿಬಿದನೂರು ಲಕ್ಷ್ಮೀನಾರಾಯಣ್, ಬಿ.ಎಚ್.ನರಸಿಂಹಪ್ಪ, ಬಾಗೇಪಲ್ಲಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಗೌರಿಬಿದನೂರು ರೇಣುಕಾ, ಬಾಗೇಪಲ್ಲಿ ನಿರ್ಮಲ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮೋಹನ್ ಕುಮಾರ್, ಹುನೇಗಲ್ ಕೇಶವ, ವಿ.ಆನಂದ್, ಅರಸನಹಳ್ಳಿ ವೆಂಕಟರಾಮ್ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಶಾಶ್ವತ ನೀರಾವರಿ ಹೋರಾಟ ಸಮಿತಿ ಸದಸ್ಯರು ಗುರುವಾರ ನಗರದಲ್ಲಿ ತುರ್ತುಸಭೆ ನಡೆಸಿ ಮಾರ್ಚ್ 3 ರಂದು ನಗರದಲ್ಲಿ ನಡೆಸಲು ಉದ್ದೇಶಿಸಿರುವ ಎತ್ತಿನಹೊಳೆ ಶಂಕು ಸ್ಥಾಪನೆ ವಿರೋಧಿಸಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಲು ನಿರ್ಧರಿಸಿದರು.<br /> <br /> ಬಯಲುಸೀಮೆ ಭಾಗಕ್ಕೆ ಕೆರೆ ಕುಂಟೆಗಳನ್ನು ತುಂಬಿಸುವ ಮೂಲಕ ಅಂತರ್ಜಲ ಹೆಚ್ಚಿಸಿ ಕೃಷಿಗೆ ಮತ್ತು ಕುಡಿಯುವ ನೀರಿನ ಯೋಜನೆಗೆ ಪೂರಕವಾಗಿರುವ ಪರಮಶಿವಯ್ಯ ವರದಿ ಅನುಷ್ಠಾನಕ್ಕಾಗಿ ದಶಕದಿಂದಲೂ ಹೋರಾಟ ನಡೆಸಲಾಗುತ್ತಿದೆ. ಜನರ ಧ್ವನಿ ಧಿಕ್ಕರಿಸಿ ಕುಡಿಯುವ ನೀರಿಗಷ್ಟೆ ಸೀಮಿತವಾಗಿರುವ ಎತ್ತಿನಹೊಳೆ ಯೋಜನೆಯನ್ನು ಅನುಷ್ಠಾನಗೊಳಿಸಲು ಹೊರಟಿದೆ ಎಂದು ಸರ್ಕಾರದ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.<br /> <br /> ಸಾವಿರಾರು ಕೊಟಿ ರೂಪಾಯಿ ಖರ್ಚು ಮಾಡಿದರೂ ಎತ್ತಿನಹೊಳೆ ಯೋಜನೆಯು, ಕೃಷಿಯನ್ನು ನಂಬಿರುವ ಬಯಲು ಸೀಮೆ ಜಿಲ್ಲೆಗಳ ದಾಹ ಇಂಗಿಸಲಾರದು. ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳದ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಅವೈಜ್ಞಾನಿಕ ಯೋಜನೆ ಜಾರಿ ಮಾಡಲು ಹೊರಟಿದೆ ಎಂದರು.<br /> <br /> ನೀರಾವರಿ ಹೋರಾಟ ಸಮಿತಿ ಅಧ್ಯಕ್ಷರಾದ ಆರ್.ಆಂಜನೇಯರೆಡ್ಡಿ, ಮುಖಂಡರಾದ ಸೊಣ್ಣೇನಹಳ್ಳಿ ನಾರಾಯಣಸ್ವಾಮಿ, ರಾಯಪ್ಪನಹಳ್ಳಿ ಅಶ್ವತ್ಥರೆಡ್ಡಿ, ಅಗಲಗುರ್ಕಿ ಚಂದ್ರಶೇಖರ್, ಸುಧಾವೆಂಕಟೇಶ್, ಮಳ್ಳೂರು ಹರೀಶ್, ಅಗಲಗುರ್ಕಿ ಚಲಪತಿ, ಯಲುವಹಳ್ಳಿ ಸೊಣ್ಣೇಗೌಡ, ಭಕ್ತರಹಳ್ಳಿ ಬೈರೇಗೌಡ, ಮಂಚನಬಲೆ ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹನುಮೇಗೌಡ, ಬಾಗೇಪಲ್ಲಿ ಲಕ್ಷ್ಮೀನಾರಾಯಣರೆಡ್ಡಿ, ಸಿ.ಡಿ.ಗಂಗುಲಪ್ಪ, ಗೌರಿಬಿದನೂರು ಲಕ್ಷ್ಮೀನಾರಾಯಣ್, ಬಿ.ಎಚ್.ನರಸಿಂಹಪ್ಪ, ಬಾಗೇಪಲ್ಲಿ ನಾರಾಯಣಸ್ವಾಮಿ, ಸುಷ್ಮಾ ಶ್ರೀನಿವಾಸ್, ಗೌರಿಬಿದನೂರು ರೇಣುಕಾ, ಬಾಗೇಪಲ್ಲಿ ನಿರ್ಮಲ, ತಿಪ್ಪೇನಹಳ್ಳಿ ನಾರಾಯಣಸ್ವಾಮಿ, ಮೋಹನ್ ಕುಮಾರ್, ಹುನೇಗಲ್ ಕೇಶವ, ವಿ.ಆನಂದ್, ಅರಸನಹಳ್ಳಿ ವೆಂಕಟರಾಮ್ ಮುಂತಾದವರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>