<p>ಮಲೇಬೆನ್ನೂರು: `ಪರಿಸರ ಸಂರಕ್ಷಣೆ ವಿಷಯವನ್ನು ಪ್ರಾಥಮಿಕ ಹಂತದಿಂದ ಪಠ್ಯಕ್ರಮದಲ್ಲಿ ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯ' ಎಂದು ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಜಾಮಿಯಾ ನ್ಯಾಷನಲ್ ಪ್ರೌಢಶಾಲೆಯಲ್ಲಿ ಬುಧವಾರ `ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಪರಿಸರ ಕಲುಷಿತವಾಗಿ ಜನಜಾನುವಾರು ರೋಗ ಪೀಡಿತರಾಗಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಕಂಕಣ ಬದ್ಧರಾಗಬೇಕಿದೆ ಎಂದರು.<br /> <br /> ಎಪಿಎಂಸಿ ನಿರ್ದೇಶಕ ಪಟೇಲ್ ಮಂಜುನಾಥ್, ಸೈಫುಲ್ಲಾ, ನಿವೃತ್ತ ಮುಖ್ಯಶಿಕ್ಷಕ ಸಜ್ಜನ್ ಮಾತನಾಡಿದರು.<br /> ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಾದ ಮುಸ್ಕಾನುಬಾನು, ಮುಸ್ಕಾನ್ತಾಜ್ ಮತ್ತು ಸೈಯದ್ ಜಸ್ಮೀನ್ಫಾತಿಮಾ ಅವರಿಗೆ ಬಹುಮಾನ ವಿತರಿಸಿದರು.<br /> <br /> ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಮುಂದಿನ ವರ್ಷದಿಂದ ಪಿಯು ಶಿಕ್ಷಣ ಆರಂಭಿಸಲಾಗುವುದು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಜಾಮಿಯಾ ಮಸೀದಿ ಮುತಾವಲಿ ಮಹಮ್ಮದ್ ರೋಷನ್ ಹೇಳಿದರು.<br /> <br /> ಸಂಸ್ಥೆ ನಿರ್ದೇಶಕ ಗುಲಾಬ್ ಷಾ, ಗ್ರಾ.ಪಂ ಸದಸ್ಯ ಫಾಜಿಲ್, ಗ್ರಾ.ಪಂ ಮಾಜಿ ಸದಸ್ಯ ಅಮಾನುಲ್ಲಾ, ಸಕ್ಲೈನ್ ಸಾಹೇಬ್, ಅಬಿದ್ ಅಲಿ ಇದ್ದರು.<br /> <br /> ಮುಖ್ಯಶಿಕ್ಷಕ ಸೈಯದ್ ಇಲಿಯಾಸ್ ಸ್ವಾಗತಿಸಿದರು, ಫೈಜ್ ಮಹಮ್ಮದ್ ವಂದಿಸಿದರು.<br /> <br /> <strong>ವಿದ್ಯುತ್ ವ್ಯತ್ಯಯ</strong><br /> ಮಲೇಬೆನ್ನೂರು: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣ ಕೊಠಡಿ ನವೀಕರಣ ಹಾಗೂ ಯಂತ್ರಗಳ ನಿರ್ವಹಣಾ ಕಾಮಗಾರಿ ಜೂನ್ 6,7 ಹಾಗೂ 8ರಂದು ನೆಡೆಯಲಿದೆ.<br /> <br /> ಹೀಗಾಗಿ, ಇಲ್ಲಿನ ವಿತರಣಾ ಕೇಂದ್ರದಿಂದ ಸರಬರಾಜಾಗುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಶ್ರೀನಿವಾಸ್ ಬುಧವಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಲೇಬೆನ್ನೂರು: `ಪರಿಸರ ಸಂರಕ್ಷಣೆ ವಿಷಯವನ್ನು ಪ್ರಾಥಮಿಕ ಹಂತದಿಂದ ಪಠ್ಯಕ್ರಮದಲ್ಲಿ ಅಳವಡಿಸಿ ಜಾಗೃತಿ ಮೂಡಿಸುವುದು ಅಗತ್ಯ' ಎಂದು ಜಿ.ಪಂ. ಸದಸ್ಯ ಬೆಣ್ಣೆಹಳ್ಳಿ ಹಾಲೇಶಪ್ಪ ಅಭಿಪ್ರಾಯಪಟ್ಟರು.<br /> <br /> ಇಲ್ಲಿನ ಜಾಮಿಯಾ ನ್ಯಾಷನಲ್ ಪ್ರೌಢಶಾಲೆಯಲ್ಲಿ ಬುಧವಾರ `ವಿಶ್ವ ಪರಿಸರ ದಿನಾಚರಣೆ' ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಪರಿಸರ ಕಲುಷಿತವಾಗಿ ಜನಜಾನುವಾರು ರೋಗ ಪೀಡಿತರಾಗಿದ್ದಾರೆ. ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ ನಿರ್ಮಿಸಲು ಕಂಕಣ ಬದ್ಧರಾಗಬೇಕಿದೆ ಎಂದರು.<br /> <br /> ಎಪಿಎಂಸಿ ನಿರ್ದೇಶಕ ಪಟೇಲ್ ಮಂಜುನಾಥ್, ಸೈಫುಲ್ಲಾ, ನಿವೃತ್ತ ಮುಖ್ಯಶಿಕ್ಷಕ ಸಜ್ಜನ್ ಮಾತನಾಡಿದರು.<br /> ಪರಿಸರ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿನಿಯರಾದ ಮುಸ್ಕಾನುಬಾನು, ಮುಸ್ಕಾನ್ತಾಜ್ ಮತ್ತು ಸೈಯದ್ ಜಸ್ಮೀನ್ಫಾತಿಮಾ ಅವರಿಗೆ ಬಹುಮಾನ ವಿತರಿಸಿದರು.<br /> <br /> ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ಹಾಗೂ ಸಮವಸ್ತ್ರ ವಿತರಿಸಲಾಯಿತು. ಮುಂದಿನ ವರ್ಷದಿಂದ ಪಿಯು ಶಿಕ್ಷಣ ಆರಂಭಿಸಲಾಗುವುದು ಎಂದು ಸಭೆ ಅಧ್ಯಕ್ಷತೆ ವಹಿಸಿದ್ದ ಜಾಮಿಯಾ ಮಸೀದಿ ಮುತಾವಲಿ ಮಹಮ್ಮದ್ ರೋಷನ್ ಹೇಳಿದರು.<br /> <br /> ಸಂಸ್ಥೆ ನಿರ್ದೇಶಕ ಗುಲಾಬ್ ಷಾ, ಗ್ರಾ.ಪಂ ಸದಸ್ಯ ಫಾಜಿಲ್, ಗ್ರಾ.ಪಂ ಮಾಜಿ ಸದಸ್ಯ ಅಮಾನುಲ್ಲಾ, ಸಕ್ಲೈನ್ ಸಾಹೇಬ್, ಅಬಿದ್ ಅಲಿ ಇದ್ದರು.<br /> <br /> ಮುಖ್ಯಶಿಕ್ಷಕ ಸೈಯದ್ ಇಲಿಯಾಸ್ ಸ್ವಾಗತಿಸಿದರು, ಫೈಜ್ ಮಹಮ್ಮದ್ ವಂದಿಸಿದರು.<br /> <br /> <strong>ವಿದ್ಯುತ್ ವ್ಯತ್ಯಯ</strong><br /> ಮಲೇಬೆನ್ನೂರು: ಇಲ್ಲಿನ ವಿದ್ಯುತ್ ವಿತರಣಾ ಕೇಂದ್ರದ ನಿಯಂತ್ರಣ ಕೊಠಡಿ ನವೀಕರಣ ಹಾಗೂ ಯಂತ್ರಗಳ ನಿರ್ವಹಣಾ ಕಾಮಗಾರಿ ಜೂನ್ 6,7 ಹಾಗೂ 8ರಂದು ನೆಡೆಯಲಿದೆ.<br /> <br /> ಹೀಗಾಗಿ, ಇಲ್ಲಿನ ವಿತರಣಾ ಕೇಂದ್ರದಿಂದ ಸರಬರಾಜಾಗುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5ರವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯವಾಗಲಿದೆ ಎಂದು ಬೆಸ್ಕಾಂ ಶಾಖಾಧಿಕಾರಿ ಶ್ರೀನಿವಾಸ್ ಬುಧವಾರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>