<p><strong>ಹೊಸಪೇಟೆ:</strong> ಗಣಿಗಾರಿಕೆ ಸ್ಥಗಿತ ಗೊಂಡು ಮೂರು ವರ್ಷ ಕಳೆದರೂ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಪರಿಹಾರ ನೀಡದ ಎಸ್.ವಿ.ಕೆ.ಗ್ರೂಪ್ ಮಾಲೀಕ ಶ್ಯಾಮ್ಸಿಂಗ್ ಮನೆಯ ಮುಂದೆ ಸಿಐಟಿಯು ಸಂಯೋಜಿತ ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. <br /> <br /> ಶನಿವಾರ ಸ್ಥಳೀಯ ಶ್ರಮಿಕ ಭವನದಿಂದ ಬೃಹತ್ ಪ್ರತಿಭಟನೆ ನಡೆಸುತ್ತಾ ಬಸವೇಶ್ವರ ಬಡಾವಣೆಯ ಉದ್ಯಮಿ ಶ್ಯಾಮ್ಸಿಂಗ್ ಮನೆಯ ಮುಂದೆ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಸಮಸ್ಯೆಗಳು ಪರಿಹಾರ ಕಾಣುವವರೆಗೂ ಧರಣಿ ಮುಂದುವರಿಸುವುದಾಗಿ ಹೇಳಿದ್ದಾರೆ. <br /> <br /> ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನೇಕ ಬಾರಿ ಭೇಟಿಗೆ ಪ್ರಯತ್ನ ನಡೆಸಿದರು ಮಾಲೀಕರು ದೊರೆಯ ದಾಗಿದ್ದಾರೆ, ಸಂಸ್ಥೆಯ ಮುಖ್ಯಸ್ಥರು ಸರಿಯಾಗಿ ಸ್ಪಂದಿಸುತ್ತಿಲ್ಲ, ಬಾಕಿ ವೇತನ ನೀಡಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿರುವುದಾಗಿ ಹೇಳಿದರು. <br /> <br /> ಸಂಘಟನೆಯ ಎಂ.ಗೋಪಾಲ, ಆರ್. ಭಾಸ್ಕರ್ರೆಡ್ಡಿ, ಅಡಿವೆಪ್ಪ, ಸಣ್ಣ ವೆಂಕಪ್ಪ, ಸೇರಿದಂತೆ ನೂರಾರು ಸಂಖ್ಯೆಯ ಕಾರ್ಮಿಕರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. <br /> <br /> ಬೆಂಬಲ: ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರ ಧರಣಿ ಬೆಂಬಲಿಸಿ ಭಾನುವಾರ ಎಸ್.ಎಫ್.ಐ ಕಾರ್ಯಕರ್ತರು ಚೆಕ್ಪೋಸ್ಟ್ ಬಳಿ ಮಾನವ ಸರಪಳಿ ನಿರ್ಮಿಸಿ ಹೋರಾಟ ದಲ್ಲಿ ತಾವು ಸಾಥ್ ನೀಡುವುದಾಗಿ ಹೇಳಿದ್ದಾರೆ. ಅಧ್ಯಕ್ಷ ಹುಲಗಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ಕಾರ್ಮಿಕರೊಂದಿಗೆ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಗಣಿಗಾರಿಕೆ ಸ್ಥಗಿತ ಗೊಂಡು ಮೂರು ವರ್ಷ ಕಳೆದರೂ ಕಾರ್ಮಿಕರಿಗೆ ಯಾವುದೇ ರೀತಿಯಲ್ಲಿ ಪರಿಹಾರ ನೀಡದ ಎಸ್.ವಿ.ಕೆ.ಗ್ರೂಪ್ ಮಾಲೀಕ ಶ್ಯಾಮ್ಸಿಂಗ್ ಮನೆಯ ಮುಂದೆ ಸಿಐಟಿಯು ಸಂಯೋಜಿತ ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. <br /> <br /> ಶನಿವಾರ ಸ್ಥಳೀಯ ಶ್ರಮಿಕ ಭವನದಿಂದ ಬೃಹತ್ ಪ್ರತಿಭಟನೆ ನಡೆಸುತ್ತಾ ಬಸವೇಶ್ವರ ಬಡಾವಣೆಯ ಉದ್ಯಮಿ ಶ್ಯಾಮ್ಸಿಂಗ್ ಮನೆಯ ಮುಂದೆ ಧರಣಿ ಆರಂಭಿಸಿದ ಕಾರ್ಮಿಕರು ತಮ್ಮ ಸಮಸ್ಯೆಗಳು ಪರಿಹಾರ ಕಾಣುವವರೆಗೂ ಧರಣಿ ಮುಂದುವರಿಸುವುದಾಗಿ ಹೇಳಿದ್ದಾರೆ. <br /> <br /> ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಅನೇಕ ಬಾರಿ ಭೇಟಿಗೆ ಪ್ರಯತ್ನ ನಡೆಸಿದರು ಮಾಲೀಕರು ದೊರೆಯ ದಾಗಿದ್ದಾರೆ, ಸಂಸ್ಥೆಯ ಮುಖ್ಯಸ್ಥರು ಸರಿಯಾಗಿ ಸ್ಪಂದಿಸುತ್ತಿಲ್ಲ, ಬಾಕಿ ವೇತನ ನೀಡಬೇಕು, ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಧರಣಿ ಆರಂಭಿಸಿರುವುದಾಗಿ ಹೇಳಿದರು. <br /> <br /> ಸಂಘಟನೆಯ ಎಂ.ಗೋಪಾಲ, ಆರ್. ಭಾಸ್ಕರ್ರೆಡ್ಡಿ, ಅಡಿವೆಪ್ಪ, ಸಣ್ಣ ವೆಂಕಪ್ಪ, ಸೇರಿದಂತೆ ನೂರಾರು ಸಂಖ್ಯೆಯ ಕಾರ್ಮಿಕರು ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡಿದ್ದಾರೆ. <br /> <br /> ಬೆಂಬಲ: ಮೈನಿಂಗ್ ವರ್ಕರ್ಸ್ ಯೂನಿಯನ್ ಕಾರ್ಮಿಕರ ಧರಣಿ ಬೆಂಬಲಿಸಿ ಭಾನುವಾರ ಎಸ್.ಎಫ್.ಐ ಕಾರ್ಯಕರ್ತರು ಚೆಕ್ಪೋಸ್ಟ್ ಬಳಿ ಮಾನವ ಸರಪಳಿ ನಿರ್ಮಿಸಿ ಹೋರಾಟ ದಲ್ಲಿ ತಾವು ಸಾಥ್ ನೀಡುವುದಾಗಿ ಹೇಳಿದ್ದಾರೆ. ಅಧ್ಯಕ್ಷ ಹುಲಗಪ್ಪ ನೇತೃತ್ವದಲ್ಲಿ ವಿದ್ಯಾರ್ಥಿಗಳು ಧರಣಿ ಕಾರ್ಮಿಕರೊಂದಿಗೆ ಪಾಲ್ಗೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>