<p><strong>ಬೊಮ್ಮನಹಳ್ಳಿ:</strong> ಇಲ್ಲಿಗೆ ಸಮೀಪದ ಕೂಡ್ಲು ಗ್ರಾಮದ ಶ್ಯಾಮರೆಡ್ಡಿ ಬಂಡೆಯ ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ಧನದ ಚೆಕ್ ಅನ್ನು ಶಾಸಕ ಬಿ.ಶಿವಣ್ಣ ಬುಧವಾರ ವಿತರಿಸಿದರು.<br /> <br /> ಪೋಷಕರಿಗೆ ತಲಾ ರೂ1.5 ಲಕ್ಷ ಚೆಕ್ ನೀಡಿದ ಶಾಸಕರು, ಕುಟುಂಬದವರಿಗೆ ಸಾಂತ್ವನ ಹೇಳಿದರು. `ಶಿಕ್ಷಣ ಇಲಾಖೆಯ ವತಿಯಿಂದ ಮಕ್ಕಳ ಕಲ್ಯಾಣ ನಿಧಿಯಿಂದ ಶೀಘ್ರದಲ್ಲಿ ತಲಾ ರೂ25 ಸಾವಿರ ನೀಡಲಾಗುವುದು' ಎಂದು ಭರವಸೆ ನೀಡಿದರು.<br /> <br /> ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ವಾರಿಯ ಹಳ್ಳಕ್ಕೆ ಬೇಲಿ ಹಾಕಿ, ಶೀಘ್ರದಲ್ಲಿ ಹಳ್ಳ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.<br /> <br /> ಸಹಾಯಕ ಆಯುಕ್ತ ನಾಗರಾಜ್, ತಹಶೀಲ್ದಾರ್ ಶಿವೇಗೌಡ, ಕಾಂಗ್ರೆಸ್ ಮುಖಂಡರಾದ ಬಾಬುರಾಜ್, ಗಟ್ಟಹಳ್ಳಿ ಸೀನಪ್ಪ ಮತ್ತಿತರರು ಹಾಜರಿದ್ದರು. ಕಳೆದ ಶುಕ್ರವಾರ ಆಟವಾಡುತ್ತಿದ್ದ ವೇಳೆ ಕ್ವಾರಿಯ ಗುಂಡಿಗೆ ಬಿದ್ದು ಮೇಘ, ಐಶ್ವರ್ಯ, ಲೋಕೇಶ್ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೊಮ್ಮನಹಳ್ಳಿ:</strong> ಇಲ್ಲಿಗೆ ಸಮೀಪದ ಕೂಡ್ಲು ಗ್ರಾಮದ ಶ್ಯಾಮರೆಡ್ಡಿ ಬಂಡೆಯ ಕ್ವಾರಿಯ ನೀರಿನ ಗುಂಡಿಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಮಕ್ಕಳ ಕುಟುಂಬದವರಿಗೆ ಸರ್ಕಾರದ ವತಿಯಿಂದ ಪರಿಹಾರ ಧನದ ಚೆಕ್ ಅನ್ನು ಶಾಸಕ ಬಿ.ಶಿವಣ್ಣ ಬುಧವಾರ ವಿತರಿಸಿದರು.<br /> <br /> ಪೋಷಕರಿಗೆ ತಲಾ ರೂ1.5 ಲಕ್ಷ ಚೆಕ್ ನೀಡಿದ ಶಾಸಕರು, ಕುಟುಂಬದವರಿಗೆ ಸಾಂತ್ವನ ಹೇಳಿದರು. `ಶಿಕ್ಷಣ ಇಲಾಖೆಯ ವತಿಯಿಂದ ಮಕ್ಕಳ ಕಲ್ಯಾಣ ನಿಧಿಯಿಂದ ಶೀಘ್ರದಲ್ಲಿ ತಲಾ ರೂ25 ಸಾವಿರ ನೀಡಲಾಗುವುದು' ಎಂದು ಭರವಸೆ ನೀಡಿದರು.<br /> <br /> ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕ್ವಾರಿಯ ಹಳ್ಳಕ್ಕೆ ಬೇಲಿ ಹಾಕಿ, ಶೀಘ್ರದಲ್ಲಿ ಹಳ್ಳ ಮುಚ್ಚಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.<br /> <br /> ಸಹಾಯಕ ಆಯುಕ್ತ ನಾಗರಾಜ್, ತಹಶೀಲ್ದಾರ್ ಶಿವೇಗೌಡ, ಕಾಂಗ್ರೆಸ್ ಮುಖಂಡರಾದ ಬಾಬುರಾಜ್, ಗಟ್ಟಹಳ್ಳಿ ಸೀನಪ್ಪ ಮತ್ತಿತರರು ಹಾಜರಿದ್ದರು. ಕಳೆದ ಶುಕ್ರವಾರ ಆಟವಾಡುತ್ತಿದ್ದ ವೇಳೆ ಕ್ವಾರಿಯ ಗುಂಡಿಗೆ ಬಿದ್ದು ಮೇಘ, ಐಶ್ವರ್ಯ, ಲೋಕೇಶ್ ಮೃತಪಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>