<p>ಧಾರವಾಡ: `ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಹಾಗೂ ಸಂದರ್ಶನ ನಡೆಸುವುದರಿಂದ ಯುವಜನತೆ ಈ ಅವಕಾಶವನ್ನು ಬಳಸಿಕೊಳ್ಳಬೇಕು~ ಎಂದು ಆಯೋಗದ ಜಂಟಿ ನಿರ್ದೇಶಕ ಡಾ.ಕೆ.ಕೆ.ಜಾಧವ್ ಹೇಳಿದರು.<br /> <br /> ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ `ಸಮಾನ ಅವಕಾಶ ಘಟಕ~ವು ಶುಕ್ರವಾರ ಏರ್ಪಡಿಸಿದ್ದ ಯುಪಿಎಸ್ಸಿ ಪರೀಕ್ಷೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವ ಕ್ಷಮತೆ ಹೊಂದಿದ್ದರೂ ಅವರಿಗೆ ಪರೀಕ್ಷೆಯ ಭಯವಿದೆ. ಇದನ್ನು ಬದಿಗೊತ್ತಿ ಅವರಲ್ಲಿ ಆಯೋಗದ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಬೇಕು~ ಎಂದರು. <br /> `ಯುಪಿಎಸ್ಸಿ ಒಟ್ಟು 14 ಸೇವಾಕ್ಷೇತ್ರಗಳು ಹಾಗೂ 24 ವಲಯಗಳಲ್ಲಿ ನೇಮಕಾತಿ ನಡೆಸುತ್ತದೆ. <br /> <br /> ವಿದ್ಯಾರ್ಥಿಗಳು ತಮಗೆ ಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಅವರು ಪಡೆದ ಅಂಕಗಳ ಆಧಾರದ ಮೇಲೆ ಆಯಾ ಕ್ಷೇತ್ರಗಳಿಗೆ ನಿಯೋಜನೆಗೊಳ್ಳುತ್ತಾರೆ. ಅಂತರ್ಜಾಲದ ಮೂಲಕ ಪರೀಕ್ಷೆ ನಡೆಸಿದ ಮೊದಲ ಸಂಸ್ಥೆ ಯುಪಿಎಸ್ಸಿ. ಕಳೆದ ವರ್ಷ ಸುಮಾರು 6.7 ಲಕ್ಷ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೆ ಹಾಜರಾಗಿದ್ದರು~ ಎಂದು ತಿಳಿಸಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕುಲಸಚಿವ ಡಾ. ಎಸ್.ಎ.ಪಾಟೀಲ, `ಆಯೋಗದ ಪರೀಕ್ಷೆಗಳ ಬಗ್ಗೆ ಉತ್ತರ ಕರ್ನಾಟಕದಲ್ಲಿ ಜಾಗೃತಿ ಕಡಿಮೆ ಇದೆ. ಅದನ್ನು ಹೋಗಲಾಡಿಸಲು ವಿಶ್ವವಿದ್ಯಾಲಯವು ಮುಂದಾಗಿದೆ~ ಎಂದರು.<br /> <br /> ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್.ದುರ್ಗಾದಾಸ್ ಸ್ವಾಗತಿಸಿದರು, ಪ್ರೊ.ಅರವಿಂದ ಮೂಲಿಮನಿ ವಂದಿಸಿದರು. ಡಾ.ಶ್ಯಾಮಲಾ ರತ್ನಾಕರ ನಿರೂಪಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: `ಕೇಂದ್ರ ಲೋಕಸೇವಾ ಆಯೋಗವು (ಯುಪಿಎಸ್ಸಿ) ಪ್ರಾದೇಶಿಕ ಭಾಷೆಯಲ್ಲಿಯೇ ಪರೀಕ್ಷೆ ಹಾಗೂ ಸಂದರ್ಶನ ನಡೆಸುವುದರಿಂದ ಯುವಜನತೆ ಈ ಅವಕಾಶವನ್ನು ಬಳಸಿಕೊಳ್ಳಬೇಕು~ ಎಂದು ಆಯೋಗದ ಜಂಟಿ ನಿರ್ದೇಶಕ ಡಾ.ಕೆ.ಕೆ.ಜಾಧವ್ ಹೇಳಿದರು.<br /> <br /> ಇಲ್ಲಿಯ ಕರ್ನಾಟಕ ವಿಶ್ವವಿದ್ಯಾಲಯದ `ಸಮಾನ ಅವಕಾಶ ಘಟಕ~ವು ಶುಕ್ರವಾರ ಏರ್ಪಡಿಸಿದ್ದ ಯುಪಿಎಸ್ಸಿ ಪರೀಕ್ಷೆ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, `ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಯುಪಿಎಸ್ಸಿ ಪರೀಕ್ಷೆ ಪಾಸು ಮಾಡುವ ಕ್ಷಮತೆ ಹೊಂದಿದ್ದರೂ ಅವರಿಗೆ ಪರೀಕ್ಷೆಯ ಭಯವಿದೆ. ಇದನ್ನು ಬದಿಗೊತ್ತಿ ಅವರಲ್ಲಿ ಆಯೋಗದ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸಬೇಕು~ ಎಂದರು. <br /> `ಯುಪಿಎಸ್ಸಿ ಒಟ್ಟು 14 ಸೇವಾಕ್ಷೇತ್ರಗಳು ಹಾಗೂ 24 ವಲಯಗಳಲ್ಲಿ ನೇಮಕಾತಿ ನಡೆಸುತ್ತದೆ. <br /> <br /> ವಿದ್ಯಾರ್ಥಿಗಳು ತಮಗೆ ಬೇಕಾದ ಕ್ಷೇತ್ರವನ್ನು ಆರಿಸಿಕೊಳ್ಳಬಹುದು. ಅವರು ಪಡೆದ ಅಂಕಗಳ ಆಧಾರದ ಮೇಲೆ ಆಯಾ ಕ್ಷೇತ್ರಗಳಿಗೆ ನಿಯೋಜನೆಗೊಳ್ಳುತ್ತಾರೆ. ಅಂತರ್ಜಾಲದ ಮೂಲಕ ಪರೀಕ್ಷೆ ನಡೆಸಿದ ಮೊದಲ ಸಂಸ್ಥೆ ಯುಪಿಎಸ್ಸಿ. ಕಳೆದ ವರ್ಷ ಸುಮಾರು 6.7 ಲಕ್ಷ ಅಭ್ಯರ್ಥಿಗಳು ವಿವಿಧ ಪರೀಕ್ಷೆಗಳಿಗೆ ಹಾಜರಾಗಿದ್ದರು~ ಎಂದು ತಿಳಿಸಿದರು. <br /> <br /> ಅಧ್ಯಕ್ಷತೆ ವಹಿಸಿದ್ದ ವಿ.ವಿ. ಕುಲಸಚಿವ ಡಾ. ಎಸ್.ಎ.ಪಾಟೀಲ, `ಆಯೋಗದ ಪರೀಕ್ಷೆಗಳ ಬಗ್ಗೆ ಉತ್ತರ ಕರ್ನಾಟಕದಲ್ಲಿ ಜಾಗೃತಿ ಕಡಿಮೆ ಇದೆ. ಅದನ್ನು ಹೋಗಲಾಡಿಸಲು ವಿಶ್ವವಿದ್ಯಾಲಯವು ಮುಂದಾಗಿದೆ~ ಎಂದರು.<br /> <br /> ಮೌಲ್ಯಮಾಪನ ಕುಲಸಚಿವ ಡಾ. ಕೆ.ಆರ್.ದುರ್ಗಾದಾಸ್ ಸ್ವಾಗತಿಸಿದರು, ಪ್ರೊ.ಅರವಿಂದ ಮೂಲಿಮನಿ ವಂದಿಸಿದರು. ಡಾ.ಶ್ಯಾಮಲಾ ರತ್ನಾಕರ ನಿರೂಪಿಸಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>