<p>ಇದು ಪಲಾವ್ ಸೊಪ್ಪಿನ ಗಿಡ. ಇದನ್ನು ಬಾಸ್ಮತಿ ಸೊಪ್ಪು ಎಂದೂ ಕರೆಯುತ್ತಾರೆ. ಬಾಸ್ಮತಿ ಅಕ್ಕಿಯ ಪರಿಮಳ ಈ ಗಿಡದ ಎಲೆಗಳಿಗೆ ಇರುವುದರಿಂದ ಆ ಹೆಸರು ಬಂದಿದೆ. ಈ ಗಿಡಗಳು ಹೆಚ್ಚು ತೇವಾಂಶವಿರುವ ಭೂಮಿಯಲ್ಲಿ ದಟ್ಟ ಪೊದೆಯಂತೆ ಬೆಳೆಯುತ್ತದೆ. <br /> <br /> ತೆಂಗಿನ ಗರಿಗಳನ್ನು ಹೋಲುವ ಪಲಾವ್ ಸೊಪ್ಪಿನ ಗಿಡದ ಎಲೆಗಳನ್ನು ಪಲಾವ್, ಘೀರೈಸ್, ವಾಂಗೀಬಾತ್, ಪಾಯಸ, ಮತ್ತಿತರ ಖಾದ್ಯ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಎಲೆಗಳು ಘಂ ಎಂಬ ಪರಿಮಳ ಹೊಂದಿರುವುದರಿಂದ ಈ ಖಾದ್ಯಗಳ ವಾಸನೆ ಹೆಚ್ಚುತ್ತದೆ.<br /> <br /> ತಾಯಿ ಗಿಡದ ಬುಡದಲ್ಲಿ ಹುಟ್ಟಿಕೊಂಡ ಸಣ್ಣ ದಂಟುಗಳನ್ನು ಕಿತ್ತು ನೆಟ್ಟರೂ ಅವು ಬೆಳೆಯುತ್ತವೆ. ಸಂತೆಗಳಲ್ಲಿ ಈ ಸೊಪ್ಪನ್ನು ಮಾರಾಟ ಮಾಡಬಹುದು. ಬೇಸಿಗೆಯಲ್ಲಿ ಈ ಗಿಡದ ಎಲೆಗಳನ್ನು ನೀರಿನ ಡ್ರಂ ಹಾಗೂ ಹೂಜಿಗಳಲ್ಲಿ ಇಟ್ಟರೆ ನೀರಿಗೆ ವಿಶಿಷ್ಟ ಪರಿಮಳ ಮತ್ತು ರುಚಿ ಬರುತ್ತದೆ.<br /> <br /> ಪಲಾವ್ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿ ಮನೆ ಅಂಗಳದಲ್ಲಿ ಇಟ್ಟರೆ ಕೈತೋಟದ ಅಂದ ಹೆಚ್ಚುತ್ತದೆ. ಪಲಾವ್ ಗಿಡಗಳಿಗೆ ರೋಗ ಹಾಗೂ ಕೀಟಗಳ ಬಾಧೆ ಕಡಿಮೆ. ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಸಬಹುದು. ದಿನಕ್ಕೆ ಸ್ವಲ್ಪ ನೀರು ಹಾಕಿದರೂ ಸಾಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇದು ಪಲಾವ್ ಸೊಪ್ಪಿನ ಗಿಡ. ಇದನ್ನು ಬಾಸ್ಮತಿ ಸೊಪ್ಪು ಎಂದೂ ಕರೆಯುತ್ತಾರೆ. ಬಾಸ್ಮತಿ ಅಕ್ಕಿಯ ಪರಿಮಳ ಈ ಗಿಡದ ಎಲೆಗಳಿಗೆ ಇರುವುದರಿಂದ ಆ ಹೆಸರು ಬಂದಿದೆ. ಈ ಗಿಡಗಳು ಹೆಚ್ಚು ತೇವಾಂಶವಿರುವ ಭೂಮಿಯಲ್ಲಿ ದಟ್ಟ ಪೊದೆಯಂತೆ ಬೆಳೆಯುತ್ತದೆ. <br /> <br /> ತೆಂಗಿನ ಗರಿಗಳನ್ನು ಹೋಲುವ ಪಲಾವ್ ಸೊಪ್ಪಿನ ಗಿಡದ ಎಲೆಗಳನ್ನು ಪಲಾವ್, ಘೀರೈಸ್, ವಾಂಗೀಬಾತ್, ಪಾಯಸ, ಮತ್ತಿತರ ಖಾದ್ಯ ಪದಾರ್ಥಗಳಲ್ಲಿ ಪರಿಮಳಕ್ಕಾಗಿ ಬಳಸುತ್ತಾರೆ. ಎಲೆಗಳು ಘಂ ಎಂಬ ಪರಿಮಳ ಹೊಂದಿರುವುದರಿಂದ ಈ ಖಾದ್ಯಗಳ ವಾಸನೆ ಹೆಚ್ಚುತ್ತದೆ.<br /> <br /> ತಾಯಿ ಗಿಡದ ಬುಡದಲ್ಲಿ ಹುಟ್ಟಿಕೊಂಡ ಸಣ್ಣ ದಂಟುಗಳನ್ನು ಕಿತ್ತು ನೆಟ್ಟರೂ ಅವು ಬೆಳೆಯುತ್ತವೆ. ಸಂತೆಗಳಲ್ಲಿ ಈ ಸೊಪ್ಪನ್ನು ಮಾರಾಟ ಮಾಡಬಹುದು. ಬೇಸಿಗೆಯಲ್ಲಿ ಈ ಗಿಡದ ಎಲೆಗಳನ್ನು ನೀರಿನ ಡ್ರಂ ಹಾಗೂ ಹೂಜಿಗಳಲ್ಲಿ ಇಟ್ಟರೆ ನೀರಿಗೆ ವಿಶಿಷ್ಟ ಪರಿಮಳ ಮತ್ತು ರುಚಿ ಬರುತ್ತದೆ.<br /> <br /> ಪಲಾವ್ ಗಿಡಗಳನ್ನು ಕುಂಡಗಳಲ್ಲಿ ಬೆಳೆಸಿ ಮನೆ ಅಂಗಳದಲ್ಲಿ ಇಟ್ಟರೆ ಕೈತೋಟದ ಅಂದ ಹೆಚ್ಚುತ್ತದೆ. ಪಲಾವ್ ಗಿಡಗಳಿಗೆ ರೋಗ ಹಾಗೂ ಕೀಟಗಳ ಬಾಧೆ ಕಡಿಮೆ. ಗಿಡಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಬೆಳೆಸಬಹುದು. ದಿನಕ್ಕೆ ಸ್ವಲ್ಪ ನೀರು ಹಾಕಿದರೂ ಸಾಕು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>