<p>ನವದೆಹಲಿ (ಐಎಎನ್ಎಸ್): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ~ಸರ್ಕಾರದ ಮಹಾನ್ ಆಸ್ತಿ~ ಎಂದು ಬಣ್ಣಸುವ ಮೂಲಕ ಎನ್ ಸಿಪಿ ಮುಖಂಡನನ್ನು ಮನವೊಲಿಸುವ ಯತ್ನ ಮಾಡಿದ್ದಾರೆ. <br /> <br /> ~ಶರದ್ ಪವಾರ್ ಅವರು ಅತ್ಯಂತ ಮೌಲ್ಯಯುತ ಸಹೋದ್ಯೋಗಿ. ಅವರ ಜ್ಞಾನ, ವಿವೇಕ, ಅನುಭವ ನಮ್ಮ ಸರ್ಕಾರಕ್ಕೆ ಮಹಾನ್ ಆಸ್ತಿ~ ಎಂದು ಪ್ರಧಾನಿ ನುಡಿದರು.<br /> <br /> ಪವಾರ್ ಮತ್ತು ಬೃಹತ್ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್ ಅವರು ಗುರುವಾರ ಸಂಜೆ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದರು.<br /> <br /> ಎನ್ ಸಿಪಿ ಮುಖ್ಯಸ್ಥನಿಗೆ ಸರ್ಕಾರದಲ್ಲಿ ದ್ವಿತೀಯ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಉಭಯ ಧುರೀಣರೂ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಪುಕಾರುಗಳು ಹರಡಿದ್ದವು.<br /> <br /> ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಾವು ರಾಜೀನಾಮೆ ನೀಡಿರುವುದಾಗಿ ಹರಡಿದ ಪುಕಾರುಗಳನ್ನು ಪ್ರಫುಲ್ ಪಟೇಲ್ ಶುಕ್ರವಾರ ನಿರಾಕರಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್): ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ~ಸರ್ಕಾರದ ಮಹಾನ್ ಆಸ್ತಿ~ ಎಂದು ಬಣ್ಣಸುವ ಮೂಲಕ ಎನ್ ಸಿಪಿ ಮುಖಂಡನನ್ನು ಮನವೊಲಿಸುವ ಯತ್ನ ಮಾಡಿದ್ದಾರೆ. <br /> <br /> ~ಶರದ್ ಪವಾರ್ ಅವರು ಅತ್ಯಂತ ಮೌಲ್ಯಯುತ ಸಹೋದ್ಯೋಗಿ. ಅವರ ಜ್ಞಾನ, ವಿವೇಕ, ಅನುಭವ ನಮ್ಮ ಸರ್ಕಾರಕ್ಕೆ ಮಹಾನ್ ಆಸ್ತಿ~ ಎಂದು ಪ್ರಧಾನಿ ನುಡಿದರು.<br /> <br /> ಪವಾರ್ ಮತ್ತು ಬೃಹತ್ ಕೈಗಾರಿಕಾ ಸಚಿವ ಪ್ರಫುಲ್ ಪಟೇಲ್ ಅವರು ಗುರುವಾರ ಸಂಜೆ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯನ್ನು ಬಹಿಷ್ಕರಿಸಿದ್ದರು.<br /> <br /> ಎನ್ ಸಿಪಿ ಮುಖ್ಯಸ್ಥನಿಗೆ ಸರ್ಕಾರದಲ್ಲಿ ದ್ವಿತೀಯ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಉಭಯ ಧುರೀಣರೂ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಲು ಮುಂದಾಗಿರುವುದಾಗಿ ಪುಕಾರುಗಳು ಹರಡಿದ್ದವು.<br /> <br /> ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರಕ್ಕೆ ತಾವು ರಾಜೀನಾಮೆ ನೀಡಿರುವುದಾಗಿ ಹರಡಿದ ಪುಕಾರುಗಳನ್ನು ಪ್ರಫುಲ್ ಪಟೇಲ್ ಶುಕ್ರವಾರ ನಿರಾಕರಿಸಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>