<p>ದೀಪಾವಳಿ ಕೇವಲ ಬೆಳಕು ಕೊಡುವ ಹಬ್ಬ ಮಾತ್ರವಲ್ಲ, ಇದು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಅಡಗಿರುವ ಕತ್ತಲೆಯನ್ನು ಹೋಗಲಾಡಿಸಿ ಆ ವ್ಯಕ್ತಿಯ ಉಲ್ಲಾಸ, ಆನಂದ ಇವುಗಳಿಗೆ ಪ್ರೋತ್ಸಾಹ ಕೊಡುತ್ತದೆ. ದೀಪಾವಳಿ ಹಿಂದುಗಳ ಹಬ್ಬ.</p>.<p>ಆದರೆ ಇಲ್ಲಿ ಹಿಂದು ಮತ್ತು ಮುಸ್ಲಿಂ ಎಂಬ ಭೇದ ಭಾವನೆಗೆ ಅವಕಾಶವಿಲ್ಲ. ಪೂಜೆ ಒಂದು ಬಿಟ್ಟರೆ ಈ ದೀಪಾವಳಿಯ ಆನಂದದಲ್ಲಿ ಹಿಂದು ಮುಸ್ಲಿಂ ಎಲ್ಲರೂ ಭಾಗಿ ಗಳಾಗಿರುತ್ತಾರೆ. ಇತ್ತೀಚಿಗೆ ಪಾಕಿಸ್ತಾನ ಅಧ್ಯಕ್ಷ ರಾದ ಆಸಿ್ ಅಲಿ ಜರ್ದಾರಿ ಅವರು ದೀಪಾ ವಳಿಗೆ ಕೊಟ್ಟಂತಹ ಮಹತ್ವ ಗಮನಾರ್ಹ. </p>.<p>ಬಿಹಾರ್ ಮುಖ್ಯ ಮಂತ್ರಿಗಳಾದ ನಿತೀಶ್ ಕುಮಾರ್ ಪಾಕಿಸ್ತಾನಕ್ಕೆ ಹೋದರು. ಅಲ್ಲಿ ಅವರಿಗೆ ಅದ್ಭುತವಾದ ಸ್ವಾಗತ ಕಂಡು ಬಂದಿತು. ಅಧ್ಯಕ್ಷರಾದ ಜರ್ದಾರಿಯವರು ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಬಂದಾಗ ಭೋಜನ ಕೂಟ ಏರ್ಪಾಟು ಮಾಡುವುದು ಸಾಮಾನ್ಯ.</p>.<p>ಆದರೆ ಈ ಸಲ ಇದು ಕೇವಲ ಅಧ್ಯಕ್ಷರ ಔತಣ ಕೂಟ ಮಾತ್ರ ವಲ್ಲ, ದೀಪಾವಳಿಯ ಔತಣ ಕೂಟವೆಂದು ಸಾರಿದರು. ಇದರಿಂದ ಉಂಟಾಗುವ ಪರಿಣಾಮ ಬಹಳ ಮಹತ್ತರವಾದದ್ದು. ಎರಡು ದೇಶಗಳ ಸಂಬಂಧ ಬಹಳ ಹಿತಕರವಾಗುವುದು.</p>.<p>ಜರ್ದಾರಿ ಯವರ ವರ್ತನೆಯಿಂದ ಭಾರತ ಪಾಕಿಸ್ತಾನ ನಡುವೆ ಇರುವ ರಾಜಕೀಯ ಸಂಬಂಧದ ಮೇಲೆಯೂ ಮತ್ತು ಸಾಮಾಜಿಕ ಸಂಬಂಧಗಳ ಮೇಲೆಯೂ ಹಿತಕರವಾದ ಪರಿಣಾಮ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾವಳಿ ಕೇವಲ ಬೆಳಕು ಕೊಡುವ ಹಬ್ಬ ಮಾತ್ರವಲ್ಲ, ಇದು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲಿ ಅಡಗಿರುವ ಕತ್ತಲೆಯನ್ನು ಹೋಗಲಾಡಿಸಿ ಆ ವ್ಯಕ್ತಿಯ ಉಲ್ಲಾಸ, ಆನಂದ ಇವುಗಳಿಗೆ ಪ್ರೋತ್ಸಾಹ ಕೊಡುತ್ತದೆ. ದೀಪಾವಳಿ ಹಿಂದುಗಳ ಹಬ್ಬ.</p>.<p>ಆದರೆ ಇಲ್ಲಿ ಹಿಂದು ಮತ್ತು ಮುಸ್ಲಿಂ ಎಂಬ ಭೇದ ಭಾವನೆಗೆ ಅವಕಾಶವಿಲ್ಲ. ಪೂಜೆ ಒಂದು ಬಿಟ್ಟರೆ ಈ ದೀಪಾವಳಿಯ ಆನಂದದಲ್ಲಿ ಹಿಂದು ಮುಸ್ಲಿಂ ಎಲ್ಲರೂ ಭಾಗಿ ಗಳಾಗಿರುತ್ತಾರೆ. ಇತ್ತೀಚಿಗೆ ಪಾಕಿಸ್ತಾನ ಅಧ್ಯಕ್ಷ ರಾದ ಆಸಿ್ ಅಲಿ ಜರ್ದಾರಿ ಅವರು ದೀಪಾ ವಳಿಗೆ ಕೊಟ್ಟಂತಹ ಮಹತ್ವ ಗಮನಾರ್ಹ. </p>.<p>ಬಿಹಾರ್ ಮುಖ್ಯ ಮಂತ್ರಿಗಳಾದ ನಿತೀಶ್ ಕುಮಾರ್ ಪಾಕಿಸ್ತಾನಕ್ಕೆ ಹೋದರು. ಅಲ್ಲಿ ಅವರಿಗೆ ಅದ್ಭುತವಾದ ಸ್ವಾಗತ ಕಂಡು ಬಂದಿತು. ಅಧ್ಯಕ್ಷರಾದ ಜರ್ದಾರಿಯವರು ಸಾಮಾನ್ಯವಾಗಿ ಗಣ್ಯ ವ್ಯಕ್ತಿಗಳು ಬಂದಾಗ ಭೋಜನ ಕೂಟ ಏರ್ಪಾಟು ಮಾಡುವುದು ಸಾಮಾನ್ಯ.</p>.<p>ಆದರೆ ಈ ಸಲ ಇದು ಕೇವಲ ಅಧ್ಯಕ್ಷರ ಔತಣ ಕೂಟ ಮಾತ್ರ ವಲ್ಲ, ದೀಪಾವಳಿಯ ಔತಣ ಕೂಟವೆಂದು ಸಾರಿದರು. ಇದರಿಂದ ಉಂಟಾಗುವ ಪರಿಣಾಮ ಬಹಳ ಮಹತ್ತರವಾದದ್ದು. ಎರಡು ದೇಶಗಳ ಸಂಬಂಧ ಬಹಳ ಹಿತಕರವಾಗುವುದು.</p>.<p>ಜರ್ದಾರಿ ಯವರ ವರ್ತನೆಯಿಂದ ಭಾರತ ಪಾಕಿಸ್ತಾನ ನಡುವೆ ಇರುವ ರಾಜಕೀಯ ಸಂಬಂಧದ ಮೇಲೆಯೂ ಮತ್ತು ಸಾಮಾಜಿಕ ಸಂಬಂಧಗಳ ಮೇಲೆಯೂ ಹಿತಕರವಾದ ಪರಿಣಾಮ ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>