<p><strong>ಕರಾಚಿ (ಪಿಟಿಐ):</strong> ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಕಹಿ ಘಟನೆ ಎದುರಾಗಿದೆ. ನ್ಯಾಷನಲ್ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಕಿರ್ಮಾನಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ!<br /> <br /> ಖಾಸಗಿ ಭೇಟಿಗಾಗಿ ಪಾಕ್ನಲ್ಲಿರುವ ಕಿರ್ಮಾನಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಕ್ರೀಡಾಂಗಣದೊಳಗೆ ಪ್ರವೇಶಿಸಲು ಮುಂದಾಗಿದ್ದರು. ಆದರೆ ಭಾರತದ ಮಾಜಿ ಆಟಗಾರನನ್ನು ಗುರುತಿಸುವಲ್ಲಿ ವಿಫಲನಾದ ಭದ್ರತಾ ಸಿಬ್ಬಂದಿ ಅವರಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ.<br /> <br /> ಈ ವೇಳೆ ಅಲ್ಲಿದ್ದ ಪತ್ರಕರ್ತರೊಬ್ಬರು ಕಿರ್ಮಾನಿಯನ್ನು ಗುರುತಿಸಿದ್ದಾರೆ. ಮಾತ್ರವಲ್ಲ ಪಾಕ್ ತಂಡದ ಮಾಜಿ ಆಟಗಾರ ರಶೀದ್ ಖಾನ್ಗೆ ನಡೆದ ವಿಷಯ ತಿಳಿಸಿದರು. ಕ್ರೀಡಾಂಗಣದೊಳಗಿದ್ದ ರಶೀದ್ ಹೊರಬಂದು ಕಿರ್ಮಾನಿ ಅವರನ್ನು ಬರಮಾಡಿಕೊಂಡರು. <br /> <br /> ಕಿರ್ಮಾನಿ 1976 ರಲ್ಲಿ ಈ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡಿದ್ದರು. `ಭದ್ರತಾ ಸಿಬ್ಬಂದಿಗೆ ನಾನು ಯಾರೆಂಬುದು ತಿಳಿಯಲಿಲ್ಲ. ತನ್ನ ಕೆಲಸವನ್ನು ಆತ ನಿರ್ವಹಿಸಿದ್ದಾನೆ~ ಎಂದು ಕಿರ್ಮಾನಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ (ಪಿಟಿಐ):</strong> ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ ಅವರಿಗೆ ಪಾಕಿಸ್ತಾನದ ಕರಾಚಿಯಲ್ಲಿ ಕಹಿ ಘಟನೆ ಎದುರಾಗಿದೆ. ನ್ಯಾಷನಲ್ ಕ್ರೀಡಾಂಗಣದ ಒಳಗೆ ಪ್ರವೇಶಿಸಲು ಕಿರ್ಮಾನಿಗೆ ಭದ್ರತಾ ಸಿಬ್ಬಂದಿ ಅವಕಾಶ ನೀಡಿಲ್ಲ!<br /> <br /> ಖಾಸಗಿ ಭೇಟಿಗಾಗಿ ಪಾಕ್ನಲ್ಲಿರುವ ಕಿರ್ಮಾನಿ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಉದ್ದೇಶದಿಂದ ಕ್ರೀಡಾಂಗಣದೊಳಗೆ ಪ್ರವೇಶಿಸಲು ಮುಂದಾಗಿದ್ದರು. ಆದರೆ ಭಾರತದ ಮಾಜಿ ಆಟಗಾರನನ್ನು ಗುರುತಿಸುವಲ್ಲಿ ವಿಫಲನಾದ ಭದ್ರತಾ ಸಿಬ್ಬಂದಿ ಅವರಿಗೆ ಒಳ ಪ್ರವೇಶಿಸಲು ಅವಕಾಶ ನೀಡಲಿಲ್ಲ.<br /> <br /> ಈ ವೇಳೆ ಅಲ್ಲಿದ್ದ ಪತ್ರಕರ್ತರೊಬ್ಬರು ಕಿರ್ಮಾನಿಯನ್ನು ಗುರುತಿಸಿದ್ದಾರೆ. ಮಾತ್ರವಲ್ಲ ಪಾಕ್ ತಂಡದ ಮಾಜಿ ಆಟಗಾರ ರಶೀದ್ ಖಾನ್ಗೆ ನಡೆದ ವಿಷಯ ತಿಳಿಸಿದರು. ಕ್ರೀಡಾಂಗಣದೊಳಗಿದ್ದ ರಶೀದ್ ಹೊರಬಂದು ಕಿರ್ಮಾನಿ ಅವರನ್ನು ಬರಮಾಡಿಕೊಂಡರು. <br /> <br /> ಕಿರ್ಮಾನಿ 1976 ರಲ್ಲಿ ಈ ಕ್ರೀಡಾಂಗಣದಲ್ಲಿ ಪಂದ್ಯವನ್ನು ಆಡಿದ್ದರು. `ಭದ್ರತಾ ಸಿಬ್ಬಂದಿಗೆ ನಾನು ಯಾರೆಂಬುದು ತಿಳಿಯಲಿಲ್ಲ. ತನ್ನ ಕೆಲಸವನ್ನು ಆತ ನಿರ್ವಹಿಸಿದ್ದಾನೆ~ ಎಂದು ಕಿರ್ಮಾನಿ ಪ್ರತಿಕ್ರಿಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>