<p>ಕರಾಚಿ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಪಾಕಿಸ್ತಾನ ತಂಡದಲ್ಲಿ ಒಡಕು ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.<br /> <br /> ನಾಯಕ ಮೊಹಮ್ಮದ್ ಹಫೀಜ್ ಹಾಗೂ ತಂಡದ ಆಡಳಿತ ಮಂಡಳಿ ನಡುವೆ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.<br /> ಮುಖ್ಯ ಕೋಚ್ ಮೊಯಿನ್ ಖಾನ್, ಕ್ರಿಕೆಟ್ ಸಲಹೆಗಾರ ಜಹೀರ್ ಅಬ್ಬಾಸ್ ಮತ್ತು ಮ್ಯಾನೇಜರ್ ಜಾಕಿರ್ ಖಾನ್ ಅವರನ್ನೊಳಗೊಂಡ ಪಾಕ್ ತಂಡದ ಆಡಳಿತ ಮಂಡಳಿಯ ಮಾತುಗಳನ್ನು ಹಫೀಜ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮೂಲವೊಂದು ಹೇಳಿದೆ.<br /> <br /> ತಂಡದ ಆಯ್ಕೆಯ ವಿಷಯದಲ್ಲಿ ಹಫೀಜ್ ಅವರು ಆಡಳಿತ ಮಂಡಳಿಯ ಸಲಹೆಗಳನ್ನು ಕಡೆಗಣಿಸುತ್ತಿದ್ದಾರೆ. ‘ವಿಶ್ವಕಪ್ನಂತೆ ಪ್ರಮುಖ ಟೂರ್ನಿಯ ವೇಳೆ ಪಾಕ್ ತಂಡದ ಕುರಿತು ಈ ರೀತಿಯ ವರದಿಗಳು ಕೇಳಿಬರುತ್ತಿರುವುದು ಒಳ್ಳೆಯದಲ್ಲ. ಈ ವರದಿ ಸುಳ್ಳು ಎಂಬುದು ನನ್ನ ವಿಶ್ವಾಸ. ತಂಡದಲ್ಲಿ ಏನಾದರೂ ಭಿನ್ನಾಭಿಪ್ರಾಯ ಇದ್ದರೆ, ಪಾಕ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಬೇಕು. ಹಾಗಾದಲ್ಲಿ ಆಟಗಾರರಿಗೆ ಟೂರ್ನಿಯ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ’ ಎಂದು ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥ ಮೊಹ್ಸಿನ್ ಖಾನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕರಾಚಿ (ಪಿಟಿಐ): ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡವನ್ನು ಎದುರಿಸಲು ಸಜ್ಜಾಗುತ್ತಿರುವ ಪಾಕಿಸ್ತಾನ ತಂಡದಲ್ಲಿ ಒಡಕು ಉಂಟಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.<br /> <br /> ನಾಯಕ ಮೊಹಮ್ಮದ್ ಹಫೀಜ್ ಹಾಗೂ ತಂಡದ ಆಡಳಿತ ಮಂಡಳಿ ನಡುವೆ ವಿವಿಧ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ ಎಂದು ವರದಿಯಾಗಿದೆ.<br /> ಮುಖ್ಯ ಕೋಚ್ ಮೊಯಿನ್ ಖಾನ್, ಕ್ರಿಕೆಟ್ ಸಲಹೆಗಾರ ಜಹೀರ್ ಅಬ್ಬಾಸ್ ಮತ್ತು ಮ್ಯಾನೇಜರ್ ಜಾಕಿರ್ ಖಾನ್ ಅವರನ್ನೊಳಗೊಂಡ ಪಾಕ್ ತಂಡದ ಆಡಳಿತ ಮಂಡಳಿಯ ಮಾತುಗಳನ್ನು ಹಫೀಜ್ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಮೂಲವೊಂದು ಹೇಳಿದೆ.<br /> <br /> ತಂಡದ ಆಯ್ಕೆಯ ವಿಷಯದಲ್ಲಿ ಹಫೀಜ್ ಅವರು ಆಡಳಿತ ಮಂಡಳಿಯ ಸಲಹೆಗಳನ್ನು ಕಡೆಗಣಿಸುತ್ತಿದ್ದಾರೆ. ‘ವಿಶ್ವಕಪ್ನಂತೆ ಪ್ರಮುಖ ಟೂರ್ನಿಯ ವೇಳೆ ಪಾಕ್ ತಂಡದ ಕುರಿತು ಈ ರೀತಿಯ ವರದಿಗಳು ಕೇಳಿಬರುತ್ತಿರುವುದು ಒಳ್ಳೆಯದಲ್ಲ. ಈ ವರದಿ ಸುಳ್ಳು ಎಂಬುದು ನನ್ನ ವಿಶ್ವಾಸ. ತಂಡದಲ್ಲಿ ಏನಾದರೂ ಭಿನ್ನಾಭಿಪ್ರಾಯ ಇದ್ದರೆ, ಪಾಕ್ ಕ್ರಿಕೆಟ್ ಮಂಡಳಿ ಮಧ್ಯಪ್ರವೇಶಿಸಬೇಕು. ಹಾಗಾದಲ್ಲಿ ಆಟಗಾರರಿಗೆ ಟೂರ್ನಿಯ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ’ ಎಂದು ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥ ಮೊಹ್ಸಿನ್ ಖಾನ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>