<p><strong>ಬಂಗಾರಪೇಟೆ:</strong> ತಾಲ್ಲೂಕಿನ ಬೂದಿಕೋಟೆ ಸಮೀಪದ ಪಾತರಾಮಗೊಳು ಅರಣ್ಯದಲ್ಲಿ ಮೇಕೆ ನುಂಗಿದ್ದ ಹೆಬ್ಬಾವು ಶುಕ್ರವಾರ ಕಂಡು ಬಂದಿದೆ. 15 ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು ಮೇಕೆ ನುಂಗಿ ಒಂದೇ ಕಡೆ ಮಲಗಿದ್ದು, ನೋಡುಗರಿಗೆ ಭಯ ಹುಟ್ಟಿಸುವುಂತಿದೆ.<br /> <br /> ಬೂದಿಕೋಟೆಯಿಂದ 6 ಕಿಲೋ ಮೀಟರ್ ದೂರದ ಪಾತರಾಮಗೊಳು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಅರಣ್ಯ ಪ್ರದೇಶ 300 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದೆ. ತಮಿಳುನಾಡು-ಕರ್ನಾಟಕ ಗಡಿಭಾಗಕ್ಕೆ ಈ ಅರಣ್ಯ ಪ್ರದೇಶ ಹೊಂದಿಕೊಂಡಿದೆ. ಗುರುವಾರ ಈ ಭಾಗದ ಹಳ್ಳಿಗಳ ದನಗಾಯಿಗಳು ಕುರಿ-ಮೇಕೆ ಮೇಯಿಸಲು ಅರಣ್ಯದೊಳಗೆ ಹೋಗಿದ್ದಾಗ ಹೆಬ್ಬಾವು ಮೇಕೆ ನುಂಗಿದೆ.<br /> <br /> ಶುಕ್ರವಾರ ಬೆಳಗ್ಗೆ ತಮ್ಮ ಗುಂಪಿನ ಮೇಕೆ ಕಡಿಮೆಯಾಗಿರುವುದನ್ನು ಕಂಡ ದನಗಾಯಿಗಳು ಹುಡುಕಿಕೊಂಡು ಹೋದಾಗ ಹೆಬ್ಬಾವು ಮೇಕೆಯನ್ನು ಮುಕ್ಕಾಲು ನುಂಗಿದ್ದನ್ನು ಕಂಡು ದೌಡಾಯಿಸಿ ಪಾತರಾಮಗೊಳು ಗ್ರಾಮದಲ್ಲಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.<br /> <br /> ಹೆಬ್ಬಾವು ಮೇಕೆ ನುಂಗಿರುವ ವಿಚಾರ ಬೂದಿಕೋಟೆ ಹೋಬಳಿ ಸುತ್ತಮುತ್ತ ಗ್ರಾಮಗಳಿಗೆ ಜನರಿಗೆ ತಿಳಿದು ನೋಡಲು ತಂಡೋಪತಂಡವಾಗಿ ತೆರಳಿ ವೀಕ್ಷಿಸಿದರು. ವಿಷಯ ತಿಳಿಯುತ್ತಿದ್ದಂತೆ ಮಾಲೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಹೆಬ್ಬಾವಿಗೆ ಜನರಿಂದ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಕಾವಲು ಸಿಬ್ಬಂದಿ ನೇಮಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ:</strong> ತಾಲ್ಲೂಕಿನ ಬೂದಿಕೋಟೆ ಸಮೀಪದ ಪಾತರಾಮಗೊಳು ಅರಣ್ಯದಲ್ಲಿ ಮೇಕೆ ನುಂಗಿದ್ದ ಹೆಬ್ಬಾವು ಶುಕ್ರವಾರ ಕಂಡು ಬಂದಿದೆ. 15 ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು ಮೇಕೆ ನುಂಗಿ ಒಂದೇ ಕಡೆ ಮಲಗಿದ್ದು, ನೋಡುಗರಿಗೆ ಭಯ ಹುಟ್ಟಿಸುವುಂತಿದೆ.<br /> <br /> ಬೂದಿಕೋಟೆಯಿಂದ 6 ಕಿಲೋ ಮೀಟರ್ ದೂರದ ಪಾತರಾಮಗೊಳು ಗ್ರಾಮದಿಂದ ಸ್ವಲ್ಪ ದೂರದಲ್ಲಿರುವ ಅರಣ್ಯ ಪ್ರದೇಶ 300 ಎಕರೆಗೂ ಹೆಚ್ಚು ವ್ಯಾಪ್ತಿ ಹೊಂದಿದೆ. ತಮಿಳುನಾಡು-ಕರ್ನಾಟಕ ಗಡಿಭಾಗಕ್ಕೆ ಈ ಅರಣ್ಯ ಪ್ರದೇಶ ಹೊಂದಿಕೊಂಡಿದೆ. ಗುರುವಾರ ಈ ಭಾಗದ ಹಳ್ಳಿಗಳ ದನಗಾಯಿಗಳು ಕುರಿ-ಮೇಕೆ ಮೇಯಿಸಲು ಅರಣ್ಯದೊಳಗೆ ಹೋಗಿದ್ದಾಗ ಹೆಬ್ಬಾವು ಮೇಕೆ ನುಂಗಿದೆ.<br /> <br /> ಶುಕ್ರವಾರ ಬೆಳಗ್ಗೆ ತಮ್ಮ ಗುಂಪಿನ ಮೇಕೆ ಕಡಿಮೆಯಾಗಿರುವುದನ್ನು ಕಂಡ ದನಗಾಯಿಗಳು ಹುಡುಕಿಕೊಂಡು ಹೋದಾಗ ಹೆಬ್ಬಾವು ಮೇಕೆಯನ್ನು ಮುಕ್ಕಾಲು ನುಂಗಿದ್ದನ್ನು ಕಂಡು ದೌಡಾಯಿಸಿ ಪಾತರಾಮಗೊಳು ಗ್ರಾಮದಲ್ಲಿ ಗ್ರಾಮಸ್ಥರಿಗೆ ತಿಳಿಸಿದ್ದಾರೆ.<br /> <br /> ಹೆಬ್ಬಾವು ಮೇಕೆ ನುಂಗಿರುವ ವಿಚಾರ ಬೂದಿಕೋಟೆ ಹೋಬಳಿ ಸುತ್ತಮುತ್ತ ಗ್ರಾಮಗಳಿಗೆ ಜನರಿಗೆ ತಿಳಿದು ನೋಡಲು ತಂಡೋಪತಂಡವಾಗಿ ತೆರಳಿ ವೀಕ್ಷಿಸಿದರು. ವಿಷಯ ತಿಳಿಯುತ್ತಿದ್ದಂತೆ ಮಾಲೂರು ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಮಿಸಿ ಹೆಬ್ಬಾವಿಗೆ ಜನರಿಂದ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ಅರಣ್ಯ ಕಾವಲು ಸಿಬ್ಬಂದಿ ನೇಮಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>