<p>ಬೆಂಗಳೂರು ನಿವೃತ್ತರ ಸ್ವರ್ಗ. ಇಂಥ ಮಹಾನಗರದಲ್ಲಿ ಸುಮಾರು 16 ವರ್ಷಗಳ ಹಿಂದೆ ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘವೊಂದು ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಕೇವಲ 30 ಸದಸ್ಯರಿದ್ದ ಈ ಸಂಘದ ಈಗಿನ ಸಂಖ್ಯಾಬಲ 2000 ದ ಗಡಿಯನ್ನು ತಲುಪಿದೆ.<br /> <br /> ಹೆಸರು `ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘ~ ಎಂದಿದ್ದರೂ ಕೇಂದ್ರ ಸರ್ಕಾರದ ಯಾವುದೇ ನಿವೃತ್ತ ಉದ್ಯೋಗಿ ಇದರ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಐಎಎಸ್, ಐಪಿಎಸ್, ಐಎಫ್ಎಸ್, ರೈಲ್ವೆ, ವರಮಾನ ತೆರಿಗೆ, ಸೆಂಟ್ರಲ್ ಎಕ್ಸೈಸ್, ನ್ಯಾಯಾಂಗದ ನಿವೃತ್ತ ಅಧಿಕಾರಿಗಳೂ ಇದರಲ್ಲಿದ್ದಾರೆ.<br /> <br /> 80 ವರ್ಷ ದಾಟಿದ್ದರೂ ಇನ್ನೂ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬಿ. ಸದಾಶಿವರಾವ್ ಮತ್ತು ಎನ್. ಭಾಸ್ಕರನ್ ಅವರು ಕ್ರಮವಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ.<br /> <br /> ಈ ಸಂಘದ ವತಿಯಿಂದ ಬೆಂಗಳೂರಿನ ಹೊರವಲಯದ ಜಕ್ಕೂರು ಶ್ರೀರಾಂಪುರದ ಎರಡನೇ ಹಂತದ ಟೆಲಿಕಾಂ ಲೇಔಟ್ನಲ್ಲಿ ನಿರ್ಮಾಣವಾಗಿದೆ `ಪಿಂಚಣಿದಾರರ ಭವನ~. ಹಾಲಿ ನೌಕರರ ಭವನಗಳು ಎಲ್ಲೆಡೆ ಇವೆ. ಆದರೆ ನಿವೃತ್ತ ನೌಕರರ ಭವನ ಅಪರೂಪ ಎಂದೇ ಹೇಳಬಹುದು. <br /> <br /> ಈ ಕಟ್ಟಡಕ್ಕೆ 2010 ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎಸ್.ವೆಂಕಟಾಚಲಯ್ಯ ಅಡಿಗ್ಲ್ಲಲು ಹಾಕಿದ್ದರು. ಈಗ ಇದು ಪೂರ್ಣಗೊಂಡಿದ್ದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ.<br /> <br /> ಮಹಡಿ ಮತ್ತು ನೆಲ ಮಹಡಿಯನ್ನು ಒಳಗೊಂಡ ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 40 ಲಕ್ಷ ರೂಪಾಯಿಗಳು. ಟೆಲಿಕಾಂ ಗೃಹ ನಿರ್ಮಾಣ ಸಂಘದವರು ಇದಕ್ಕೆ ಮೂಲಬೆಲೆಯಲ್ಲಿ ನಿವೇಶನ ಕೊಟ್ಟಿದ್ದಾರೆ. ಸದಸ್ಯರು, ಕೆಲವು ಸಂಘ ಸಂಸ್ಥೆಗಳು, ಸದಸ್ಯರ ಮಕ್ಕಳು, ಮೊಮ್ಮಕ್ಕಳು ಸಹ ದೇಣಿಗೆ ನೀಡಿದ್ದಾರೆ. <br /> <br /> ಆರನೆಯ ವೇತನ ಆಯೋಗದಿಂದ ಬಂದ ಬಾಕಿ ಹಣದಲ್ಲಿ ಶೇ 3ನ್ನು ಸದಸ್ಯರು ಕಟ್ಟಡ ನಿಧಿಗೆ ಕೊಟ್ಟಿದ್ದಾರೆ. ಕೆಲವರಂತೂ ತಮಗೆ ಬಂದ ಎಲ್ಲಾ ಬಾಕಿ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಕೊಟ್ಟು ಮಾದರಿಯಾಗಿದ್ದಾರೆ.<br /> <br /> ಈ ಕಟ್ಟಡದಲ್ಲಿ ಒಂದು ಮಿನಿ ಹಾಲ್ ಹಾಗೂ ಮೂರು ಅತಿಥಿ ಗೃಹಗಳಿವೆ. ಬೆಂಗಳೂರಿಗೆ ದೇಶದ ಯಾವುದೇ ಮೂಲೆಯಿಂದ ಬರುವ ಕೇಂದ್ರ ಸರ್ಕಾರದ ಮಾಜಿ ನೌಕರರಿಗೆ ಇಲ್ಲಿ ತಂಗಲು ಅವಕಾಶವಿದೆ. ಸಂಘಟನೆಯಲ್ಲಿ ಬಲವಿದೆ ಎಂಬುದಕ್ಕೆ ಪಿಂಚಣಿದಾರರ ಭವನ ಉದಾಹರಣೆಯಾಗಿ ನಿಲ್ಲಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು ನಿವೃತ್ತರ ಸ್ವರ್ಗ. ಇಂಥ ಮಹಾನಗರದಲ್ಲಿ ಸುಮಾರು 16 ವರ್ಷಗಳ ಹಿಂದೆ ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘವೊಂದು ಅಸ್ತಿತ್ವಕ್ಕೆ ಬಂತು. ಆರಂಭದಲ್ಲಿ ಕೇವಲ 30 ಸದಸ್ಯರಿದ್ದ ಈ ಸಂಘದ ಈಗಿನ ಸಂಖ್ಯಾಬಲ 2000 ದ ಗಡಿಯನ್ನು ತಲುಪಿದೆ.<br /> <br /> ಹೆಸರು `ಅಂಚೆ ಮತ್ತು ತಂತಿ ಇಲಾಖೆಯ ನಿವೃತ್ತರ ಸಂಘ~ ಎಂದಿದ್ದರೂ ಕೇಂದ್ರ ಸರ್ಕಾರದ ಯಾವುದೇ ನಿವೃತ್ತ ಉದ್ಯೋಗಿ ಇದರ ಸದಸ್ಯರಾಗಲು ಅರ್ಹರಾಗಿರುತ್ತಾರೆ. ಐಎಎಸ್, ಐಪಿಎಸ್, ಐಎಫ್ಎಸ್, ರೈಲ್ವೆ, ವರಮಾನ ತೆರಿಗೆ, ಸೆಂಟ್ರಲ್ ಎಕ್ಸೈಸ್, ನ್ಯಾಯಾಂಗದ ನಿವೃತ್ತ ಅಧಿಕಾರಿಗಳೂ ಇದರಲ್ಲಿದ್ದಾರೆ.<br /> <br /> 80 ವರ್ಷ ದಾಟಿದ್ದರೂ ಇನ್ನೂ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿರುವ ಅಂಚೆ ಇಲಾಖೆಯ ನಿವೃತ್ತ ಉದ್ಯೋಗಿ ಬಿ. ಸದಾಶಿವರಾವ್ ಮತ್ತು ಎನ್. ಭಾಸ್ಕರನ್ ಅವರು ಕ್ರಮವಾಗಿ ಸಂಘದ ಅಧ್ಯಕ್ಷ, ಕಾರ್ಯದರ್ಶಿ.<br /> <br /> ಈ ಸಂಘದ ವತಿಯಿಂದ ಬೆಂಗಳೂರಿನ ಹೊರವಲಯದ ಜಕ್ಕೂರು ಶ್ರೀರಾಂಪುರದ ಎರಡನೇ ಹಂತದ ಟೆಲಿಕಾಂ ಲೇಔಟ್ನಲ್ಲಿ ನಿರ್ಮಾಣವಾಗಿದೆ `ಪಿಂಚಣಿದಾರರ ಭವನ~. ಹಾಲಿ ನೌಕರರ ಭವನಗಳು ಎಲ್ಲೆಡೆ ಇವೆ. ಆದರೆ ನಿವೃತ್ತ ನೌಕರರ ಭವನ ಅಪರೂಪ ಎಂದೇ ಹೇಳಬಹುದು. <br /> <br /> ಈ ಕಟ್ಟಡಕ್ಕೆ 2010 ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎಸ್.ವೆಂಕಟಾಚಲಯ್ಯ ಅಡಿಗ್ಲ್ಲಲು ಹಾಕಿದ್ದರು. ಈಗ ಇದು ಪೂರ್ಣಗೊಂಡಿದ್ದು ನಿವೃತ್ತ ಲೋಕಾಯುಕ್ತ ಸಂತೋಷ ಹೆಗ್ಡೆ ಉದ್ಘಾಟಿಸಲಿದ್ದಾರೆ.<br /> <br /> ಮಹಡಿ ಮತ್ತು ನೆಲ ಮಹಡಿಯನ್ನು ಒಳಗೊಂಡ ಈ ಕಟ್ಟಡದ ನಿರ್ಮಾಣ ವೆಚ್ಚ ಸುಮಾರು 40 ಲಕ್ಷ ರೂಪಾಯಿಗಳು. ಟೆಲಿಕಾಂ ಗೃಹ ನಿರ್ಮಾಣ ಸಂಘದವರು ಇದಕ್ಕೆ ಮೂಲಬೆಲೆಯಲ್ಲಿ ನಿವೇಶನ ಕೊಟ್ಟಿದ್ದಾರೆ. ಸದಸ್ಯರು, ಕೆಲವು ಸಂಘ ಸಂಸ್ಥೆಗಳು, ಸದಸ್ಯರ ಮಕ್ಕಳು, ಮೊಮ್ಮಕ್ಕಳು ಸಹ ದೇಣಿಗೆ ನೀಡಿದ್ದಾರೆ. <br /> <br /> ಆರನೆಯ ವೇತನ ಆಯೋಗದಿಂದ ಬಂದ ಬಾಕಿ ಹಣದಲ್ಲಿ ಶೇ 3ನ್ನು ಸದಸ್ಯರು ಕಟ್ಟಡ ನಿಧಿಗೆ ಕೊಟ್ಟಿದ್ದಾರೆ. ಕೆಲವರಂತೂ ತಮಗೆ ಬಂದ ಎಲ್ಲಾ ಬಾಕಿ ಮೊತ್ತವನ್ನು ಕಟ್ಟಡ ನಿರ್ಮಾಣಕ್ಕೆ ಕೊಟ್ಟು ಮಾದರಿಯಾಗಿದ್ದಾರೆ.<br /> <br /> ಈ ಕಟ್ಟಡದಲ್ಲಿ ಒಂದು ಮಿನಿ ಹಾಲ್ ಹಾಗೂ ಮೂರು ಅತಿಥಿ ಗೃಹಗಳಿವೆ. ಬೆಂಗಳೂರಿಗೆ ದೇಶದ ಯಾವುದೇ ಮೂಲೆಯಿಂದ ಬರುವ ಕೇಂದ್ರ ಸರ್ಕಾರದ ಮಾಜಿ ನೌಕರರಿಗೆ ಇಲ್ಲಿ ತಂಗಲು ಅವಕಾಶವಿದೆ. ಸಂಘಟನೆಯಲ್ಲಿ ಬಲವಿದೆ ಎಂಬುದಕ್ಕೆ ಪಿಂಚಣಿದಾರರ ಭವನ ಉದಾಹರಣೆಯಾಗಿ ನಿಲ್ಲಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>