<p><strong>ಸಿರುಗುಪ್ಪ</strong>: ‘ಕರ್ನಾಟಕದಲ್ಲಿ ಸಂಗೀತ ಕಲೆಯನ್ನು ಉಳಿಸಿ- ಬೆಳೆಸಿದ ಮಹಾನ್ ಚೇತನ ಪುಟ್ಟರಾಜ ಗವಾಯಿಗಳು’ ಎಂದು ಅವರ ಹಿರಿಯ ಶಿಷ್ಯ ಮಲ್ಕಾಪುರ ದೊಡ್ಡಬಸವಾರ್ಯ ಗವಾಯಿಗಳು ಸ್ಮರಿಸಿದರು.<br /> <br /> ಪಟ್ಟಣದ ಶಾಂತಿನಿಕೇತನ ವಿದ್ಯಾಮಂದಿರದಲ್ಲಿ ಲಿಂಗೈಕ್ಯ ಪಂ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. <br /> ರಾಜ್ಯದ ನಾನಾ ಮೂಲೆಗಳ ಅಂಧ, ಅನಾಥ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆ ಎರೆದು, ಅವರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗವಾಯಿಗಳು ಆ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದರು ಎಂದರು.<br /> <br /> ಸಂಗೀತ ಪಾಠಶಾಲೆ ತೆರೆಯುವ ಮೂಲಕ ಸಹಸ್ರಾರು ಜನ ಉಚಿತ ಸಂಗೀತ, ಕೀರ್ತನೆ, ನಟನೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟ ಮಹಾ ಪುರುಷರು ಅವರು ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಿಪ್ಪೇರುದ್ರಪ್ಪ ಸ್ಮರಿಸಿದರು.<br /> <br /> ಇದರ ಅಂಗವಾಗಿ ಹನುಮಂತ ರಾವ್ ಮಳ್ಳಿ, ಜೆ.ನಾಗೇಶ್ವರಾವ್, ರಾಘವೇಂದ್ರ ಗಂಗಾವತಿ, ಪ್ರಹ್ಲಾದ್ ದಿಗ್ಗಾವಿ, ಎನ್.ಎಂ. ಜಗದೀಶ ಸಂಗೀತ ಗಾಯನ ನಡೆಸಿಕೊಟ್ಟರು. ಎನ್.ಜಿ. ಬಸವರಾಜಪ್ಪ, ಕೆ.ಕೃಷ್ಣ, ಆರ್. ಬಸವಲಿಂಗಪ್ಪ, ಶಿವಶಂಕರ ರಾವ್, ಶಿವಕುಮಾರ್ ಬಳಿಗಾರ್, ನಾಗಭೂಷಣಪ್ಪ, ಬಿ.ಚನ್ನಪ್ಪ, ಎಚ್.ಮುರಳೀಧರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿರುಗುಪ್ಪ</strong>: ‘ಕರ್ನಾಟಕದಲ್ಲಿ ಸಂಗೀತ ಕಲೆಯನ್ನು ಉಳಿಸಿ- ಬೆಳೆಸಿದ ಮಹಾನ್ ಚೇತನ ಪುಟ್ಟರಾಜ ಗವಾಯಿಗಳು’ ಎಂದು ಅವರ ಹಿರಿಯ ಶಿಷ್ಯ ಮಲ್ಕಾಪುರ ದೊಡ್ಡಬಸವಾರ್ಯ ಗವಾಯಿಗಳು ಸ್ಮರಿಸಿದರು.<br /> <br /> ಪಟ್ಟಣದ ಶಾಂತಿನಿಕೇತನ ವಿದ್ಯಾಮಂದಿರದಲ್ಲಿ ಲಿಂಗೈಕ್ಯ ಪಂ.ಪುಟ್ಟರಾಜ ಗವಾಯಿಗಳ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. <br /> ರಾಜ್ಯದ ನಾನಾ ಮೂಲೆಗಳ ಅಂಧ, ಅನಾಥ ಹಾಗೂ ಬಡ ವಿದ್ಯಾರ್ಥಿಗಳಿಗೆ ಸಂಗೀತವನ್ನು ಧಾರೆ ಎರೆದು, ಅವರಿಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗವಾಯಿಗಳು ಆ ಮಕ್ಕಳ ಬಾಳಿಗೆ ದಾರಿದೀಪವಾಗಿದ್ದರು ಎಂದರು.<br /> <br /> ಸಂಗೀತ ಪಾಠಶಾಲೆ ತೆರೆಯುವ ಮೂಲಕ ಸಹಸ್ರಾರು ಜನ ಉಚಿತ ಸಂಗೀತ, ಕೀರ್ತನೆ, ನಟನೆಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಟ್ಟ ಮಹಾ ಪುರುಷರು ಅವರು ಎಂದು ಸಂಸ್ಥೆಯ ಅಧ್ಯಕ್ಷ ಡಾ.ತಿಪ್ಪೇರುದ್ರಪ್ಪ ಸ್ಮರಿಸಿದರು.<br /> <br /> ಇದರ ಅಂಗವಾಗಿ ಹನುಮಂತ ರಾವ್ ಮಳ್ಳಿ, ಜೆ.ನಾಗೇಶ್ವರಾವ್, ರಾಘವೇಂದ್ರ ಗಂಗಾವತಿ, ಪ್ರಹ್ಲಾದ್ ದಿಗ್ಗಾವಿ, ಎನ್.ಎಂ. ಜಗದೀಶ ಸಂಗೀತ ಗಾಯನ ನಡೆಸಿಕೊಟ್ಟರು. ಎನ್.ಜಿ. ಬಸವರಾಜಪ್ಪ, ಕೆ.ಕೃಷ್ಣ, ಆರ್. ಬಸವಲಿಂಗಪ್ಪ, ಶಿವಶಂಕರ ರಾವ್, ಶಿವಕುಮಾರ್ ಬಳಿಗಾರ್, ನಾಗಭೂಷಣಪ್ಪ, ಬಿ.ಚನ್ನಪ್ಪ, ಎಚ್.ಮುರಳೀಧರ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>