<p>ಬಳುವಲ ಹಣ್ಣು ಎಂದರೆ ನೆನಪಾಗುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ. ಬೇರಾವ ಜಾತ್ರೆಯಲ್ಲಿಯೂ ಕಾಣಸಿಗದಷ್ಟು ಬಳುವಲಕಾಯಿ ಹಾಗೂ ಅದರ ಪ್ರಸಾದ ಈ ಗೊಡಚಿ ಜಾತ್ರೆಯ ವಿಶೇಷ. ಹೊಸ್ತಿಲ ಹುಣ್ಣಿಮೆಯಂದು ಆಚರಿಸುವ ಈ ಜಾತ್ರೆ ಈ ಬಾರಿ ಇದೇ 17ರಂದು ಜರುಗಲಿದೆ.<br /> <br /> ಗೊಡಚಿ ಜಾತ್ರೆಯ ಇನ್ನೊಂದು ವಿಶೇಷ ಪುರವಂತ ಸಮುದಾಯದವರು (ವೀರಗಾಸಿಗರು). ಭಕ್ತಿ ಉತ್ತುಂಗಕ್ಕೇರಿದ ಸ್ಥಿತಿಯಲ್ಲಿ ಇವರು ಶಸ್ತ್ರಗಳನ್ನು ಗಲ್ಲ ಹಾಗೂ ನಾಲಿಗೆಯಲ್ಲಿ ಚುಚ್ಚಿಕೊಳ್ಳುತ್ತಾರೆ. ಸೂಜಿಯಿಂದ ಶಸ್ತ್ರದ ಜೊತೆಗೆ 105 ಮೀಟರ್ ಉದ್ದ ಶಸ್ತ್ರದಾರವನ್ನು ಒಂದೆಡೆ ಗಲ್ಲಕ್ಕೆ ಚುಚ್ಚಿಕೊಂಡು ಮತ್ತೊಂದೆಡೆಗೆ ತೆಗೆಯುತ್ತಾರೆ. ಈ ಅಚ್ಚರಿ ನೋಡಲು ಜನಸಮೂಹವೇ ನೆರೆಯುತ್ತದೆ.<br /> <br /> ರಕ್ತ ಚಿಮ್ಮುವುದಕ್ಕೆ ಸ್ವಲ್ಪ ವಿಭೂತಿ ಲೇಪಿಸಿದರೆ ಸಾಕು, ಗಾಯ ನೋವು ಏನೂ ಇರುವುದಿಲ್ಲ ಎನ್ನುವ ಇವರು ಇವೆಲ್ಲ ವೀರಭದ್ರ ದೇವರ ಆಶಿರ್ವಾದವೇ ಎನ್ನುತ್ತಾರೆ. ಆದರೆ ಕಡುಬಡತನ ಈ ಸಮುದಾಯದವರನ್ನು ಕಿತ್ತು ತಿನ್ನುತ್ತಿದೆ. ಬಡಜನರಿಗೆ ನೀಡಲು ಮಾಸಾಶನವನ್ನು ತಮಗೂ ನೀಡಬೇಕು ಎನ್ನುವುದು ಅವರ ಆಸೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಳುವಲ ಹಣ್ಣು ಎಂದರೆ ನೆನಪಾಗುವುದು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ. ಬೇರಾವ ಜಾತ್ರೆಯಲ್ಲಿಯೂ ಕಾಣಸಿಗದಷ್ಟು ಬಳುವಲಕಾಯಿ ಹಾಗೂ ಅದರ ಪ್ರಸಾದ ಈ ಗೊಡಚಿ ಜಾತ್ರೆಯ ವಿಶೇಷ. ಹೊಸ್ತಿಲ ಹುಣ್ಣಿಮೆಯಂದು ಆಚರಿಸುವ ಈ ಜಾತ್ರೆ ಈ ಬಾರಿ ಇದೇ 17ರಂದು ಜರುಗಲಿದೆ.<br /> <br /> ಗೊಡಚಿ ಜಾತ್ರೆಯ ಇನ್ನೊಂದು ವಿಶೇಷ ಪುರವಂತ ಸಮುದಾಯದವರು (ವೀರಗಾಸಿಗರು). ಭಕ್ತಿ ಉತ್ತುಂಗಕ್ಕೇರಿದ ಸ್ಥಿತಿಯಲ್ಲಿ ಇವರು ಶಸ್ತ್ರಗಳನ್ನು ಗಲ್ಲ ಹಾಗೂ ನಾಲಿಗೆಯಲ್ಲಿ ಚುಚ್ಚಿಕೊಳ್ಳುತ್ತಾರೆ. ಸೂಜಿಯಿಂದ ಶಸ್ತ್ರದ ಜೊತೆಗೆ 105 ಮೀಟರ್ ಉದ್ದ ಶಸ್ತ್ರದಾರವನ್ನು ಒಂದೆಡೆ ಗಲ್ಲಕ್ಕೆ ಚುಚ್ಚಿಕೊಂಡು ಮತ್ತೊಂದೆಡೆಗೆ ತೆಗೆಯುತ್ತಾರೆ. ಈ ಅಚ್ಚರಿ ನೋಡಲು ಜನಸಮೂಹವೇ ನೆರೆಯುತ್ತದೆ.<br /> <br /> ರಕ್ತ ಚಿಮ್ಮುವುದಕ್ಕೆ ಸ್ವಲ್ಪ ವಿಭೂತಿ ಲೇಪಿಸಿದರೆ ಸಾಕು, ಗಾಯ ನೋವು ಏನೂ ಇರುವುದಿಲ್ಲ ಎನ್ನುವ ಇವರು ಇವೆಲ್ಲ ವೀರಭದ್ರ ದೇವರ ಆಶಿರ್ವಾದವೇ ಎನ್ನುತ್ತಾರೆ. ಆದರೆ ಕಡುಬಡತನ ಈ ಸಮುದಾಯದವರನ್ನು ಕಿತ್ತು ತಿನ್ನುತ್ತಿದೆ. ಬಡಜನರಿಗೆ ನೀಡಲು ಮಾಸಾಶನವನ್ನು ತಮಗೂ ನೀಡಬೇಕು ಎನ್ನುವುದು ಅವರ ಆಸೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>