<p><strong>ಭುವನೇಶ್ವರ (ಪಿಟಿಐ): </strong>ಮಾವೊವಾದಿಗಳು ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿದ ಘಟನೆಗೆ ಸೋಮವಾರಕ್ಕೆ ಒಂದು ತಿಂಗಳ ಸಂದಿದೆ. ಅವರ ಬಿಡುಗಡೆಗೆ ಈ 25ರಂದು ಪ್ರಜಾ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದ್ದು, ಸರ್ಕಾರ ಇದನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದೆ.<br /> <br /> ಪ್ರಜಾ ನ್ಯಾಯಾಲಯದಲ್ಲಿ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ ಎಂದು ಸಿಪಿಐ (ಮಾವೊವಾದಿ)ನ ಆಂಧ್ರಪ್ರದೇಶ-ಒಡಿಶಾ ಗಡಿ ವಿಶೇಷ ವಲಯ ಸಮಿತಿ (ಎಒಬಿಎಸ್ಝೆಡ್ಸಿ) ಈಗಾಗಲೇ ಪ್ರಕಟಿಸಿದೆ. ಆದರೆ ಈ ಬಗ್ಗೆ ನಿರ್ದಿಷ್ಟ ಸ್ಥಳ ಮತ್ತು ಸಮಯ ಬಹಿರಂಗಪಡಿಸಿಲ್ಲ. <br /> <br /> ನಕ್ಸಲರ ಪ್ರಾಬಲ್ಯವಿರುವ ಕೊರಾಪತ್ ಜಿಲ್ಲೆಯ ನಾರಾಯಣಪಟ್ನಾದ ಪ್ರದೇಶವೊಂದರಲ್ಲಿ ಇಬ್ಬರು ಒತ್ತೆಯಾಳುಗಳ ಬಗ್ಗೆ ಈ ಪ್ರಜಾ ನ್ಯಾಯಾಲಯ ತೀರ್ಮಾನಿಸಲಿದೆ ಮತ್ತು ಹಿಕಾಕ ಅಪಹರಣದ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಮಾವೊವಾದಿಗಳ ಮೂಲಗಳು ತಿಳಿಸಿವೆ.<br /> <br /> ನಕ್ಸಲರು ಮೊದಲ ಬಾರಿಗೆ ಶಾಸಕರೊಬ್ಬರನ್ನು ಅಪಹರಿಸಿದ್ದು, ಅವರ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆಗೆ ಪಟ್ಟು ಹಿಡಿದಿದ್ದು, ಸರ್ಕಾರ ಸಹ 8 ಜನ ಮಾವೊವಾದಿಗಳು ಮತ್ತು 17 ಜನ ಚಾಸಿ ಮುಲಿಯಾ ಆದಿವಾಸಿ ಸಂಘದ ಸದಸ್ಯರ ಬಿಡುಗಡೆಗೆ ಸಮ್ಮತಿಸಿದೆ. <br /> <br /> ಜೈಲಿನಲ್ಲಿರುವ ಕೆಲ ಮಾವೊವಾದಿಗಳ ಬಿಡುಗಡೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಉಳಿದವರ ಬಿಡುಗಡೆಗೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಪಿಟಿಐ): </strong>ಮಾವೊವಾದಿಗಳು ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿದ ಘಟನೆಗೆ ಸೋಮವಾರಕ್ಕೆ ಒಂದು ತಿಂಗಳ ಸಂದಿದೆ. ಅವರ ಬಿಡುಗಡೆಗೆ ಈ 25ರಂದು ಪ್ರಜಾ ನ್ಯಾಯಾಲಯ ತೀರ್ಮಾನ ಕೈಗೊಳ್ಳಲಿದ್ದು, ಸರ್ಕಾರ ಇದನ್ನು ತೀವ್ರ ಕುತೂಹಲದಿಂದ ಎದುರು ನೋಡುತ್ತಿದೆ.<br /> <br /> ಪ್ರಜಾ ನ್ಯಾಯಾಲಯದಲ್ಲಿ ಶಾಸಕರ ಭವಿಷ್ಯ ನಿರ್ಧಾರವಾಗಲಿದೆ ಎಂದು ಸಿಪಿಐ (ಮಾವೊವಾದಿ)ನ ಆಂಧ್ರಪ್ರದೇಶ-ಒಡಿಶಾ ಗಡಿ ವಿಶೇಷ ವಲಯ ಸಮಿತಿ (ಎಒಬಿಎಸ್ಝೆಡ್ಸಿ) ಈಗಾಗಲೇ ಪ್ರಕಟಿಸಿದೆ. ಆದರೆ ಈ ಬಗ್ಗೆ ನಿರ್ದಿಷ್ಟ ಸ್ಥಳ ಮತ್ತು ಸಮಯ ಬಹಿರಂಗಪಡಿಸಿಲ್ಲ. <br /> <br /> ನಕ್ಸಲರ ಪ್ರಾಬಲ್ಯವಿರುವ ಕೊರಾಪತ್ ಜಿಲ್ಲೆಯ ನಾರಾಯಣಪಟ್ನಾದ ಪ್ರದೇಶವೊಂದರಲ್ಲಿ ಇಬ್ಬರು ಒತ್ತೆಯಾಳುಗಳ ಬಗ್ಗೆ ಈ ಪ್ರಜಾ ನ್ಯಾಯಾಲಯ ತೀರ್ಮಾನಿಸಲಿದೆ ಮತ್ತು ಹಿಕಾಕ ಅಪಹರಣದ ಬಿಕ್ಕಟ್ಟಿನ ಬಗ್ಗೆ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳಲಿದೆ ಎಂದು ಮಾವೊವಾದಿಗಳ ಮೂಲಗಳು ತಿಳಿಸಿವೆ.<br /> <br /> ನಕ್ಸಲರು ಮೊದಲ ಬಾರಿಗೆ ಶಾಸಕರೊಬ್ಬರನ್ನು ಅಪಹರಿಸಿದ್ದು, ಅವರ ಬಿಡುಗಡೆಗೆ ಪ್ರತಿಯಾಗಿ ಜೈಲಿನಲ್ಲಿರುವ ನಕ್ಸಲರ ಬಿಡುಗಡೆಗೆ ಪಟ್ಟು ಹಿಡಿದಿದ್ದು, ಸರ್ಕಾರ ಸಹ 8 ಜನ ಮಾವೊವಾದಿಗಳು ಮತ್ತು 17 ಜನ ಚಾಸಿ ಮುಲಿಯಾ ಆದಿವಾಸಿ ಸಂಘದ ಸದಸ್ಯರ ಬಿಡುಗಡೆಗೆ ಸಮ್ಮತಿಸಿದೆ. <br /> <br /> ಜೈಲಿನಲ್ಲಿರುವ ಕೆಲ ಮಾವೊವಾದಿಗಳ ಬಿಡುಗಡೆಗೆ ಜಾಮೀನು ಮಂಜೂರು ಮಾಡಲಾಗಿದ್ದು, ಈ ಪ್ರಕ್ರಿಯೆ ಮುಕ್ತಾಯ ಹಂತದಲ್ಲಿದೆ. ಉಳಿದವರ ಬಿಡುಗಡೆಗೆ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದರೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಗೃಹ ಕಾರ್ಯದರ್ಶಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>